ಕರ್ನಾಟಕದಲ್ಲಿವೆ ಬಹು ಮಾಲೀಕರನ್ನು ಹೊಂದಿರುವ 25 ಲಕ್ಷ ಆಸ್ತಿಗಳು! ಕಾರಣಗಳು ಇಲ್ಲಿವೆ

|

Updated on: Sep 18, 2024 | 9:49 AM

ಕರ್ನಾಟಕದಾದ್ಯಂತ ಸುಮಾರು 25 ಲಕ್ಷ ಆಸ್ತಿಗಳು ಒಬ್ಬರಿಗಿಂತ ಹೆಚ್ಚು ಮಾಲೀಕರ ಹೆಸರಿನಲ್ಲಿರುವ ವಿಚಾರ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ ಅಧಿಕಾರಿಗಳ ಬಳಿ ಇರುವ ದಾಖಲೆಗಳಿಂದ ಇದು ತಿಳಿದು ಬಂದಿದೆ. ಇದಕ್ಕೆ ಕಾರಣವೇನು? ಈಗ ಇದು ಬೆಳಕಿಗೆ ಬಂದಿದ್ಹೇಗೆ ಎಂಬ ವಿವರ ಇಲ್ಲಿದೆ.

ಕರ್ನಾಟಕದಲ್ಲಿವೆ ಬಹು ಮಾಲೀಕರನ್ನು ಹೊಂದಿರುವ 25 ಲಕ್ಷ ಆಸ್ತಿಗಳು! ಕಾರಣಗಳು ಇಲ್ಲಿವೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಸೆಪ್ಟೆಂಬರ್ 18: ಕರ್ನಾಟಕದಾದ್ಯಂತ ಸರ್ಕಾರಿ ಭೂಮಿ ಅನಧಿಕೃತ ಒತ್ತುವರಿ ಸಕ್ರಮಗೊಳಿಸುವ (ಅಕ್ರಮ ಸಕ್ರಮ) ಕಾರ್ಯದ ಸಂದರ್ಭದಲ್ಲಿ ಅಚ್ಚರಿಯ ವಿಚಾರ ಬೆಳಕಿಗೆ ಬಂದಿದೆ. ಕಂದಾಯ ಇಲಾಖೆ ದಾಖಲೆಗಳು ಮತ್ತು ಅಧಿಕಾರಿಗಳ ಪ್ರಕಾರ, ಸುಮಾರು 25 ಲಕ್ಷ ಆಸ್ತಿಗಳು ಒಬ್ಬರಿಗಿಂತ ಹೆಚ್ಚು ಮಾಲೀಕರನ್ನು ಹೊಂದಿರುವುದು ತಿಳಿದುಬಂದಿರುವುದಾಗಿ ವರದಿಯಾಗಿದೆ.

ಆಸ್ತಿಗಳ ಮರು ಸಮೀಕ್ಷೆ ಮತ್ತು ಡೇಟಾವನ್ನು ಡಿಜಿಟಲೀಕರಣ ಮಾಡುವ ಸಂದರ್ಭದಲ್ಲಿ ಸುಮಾರು 25 ಲಕ್ಷ ಆಸ್ತಿಗಳ ಹಕ್ಕು, ಹಿಡುವಳಿ ಮತ್ತು ಬೆಳೆಗಳ (ಆರ್‌ಟಿಸಿ) ದಾಖಲೆ ಬಹು ಮಾಲೀಕರನ್ನು ಹೊಂದಿರುವುದು ತಿಳಿದು ಬಂದಿದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಸರ್ಕಾರವು ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಭೂಮಿಯನ್ನು ಹಸ್ತಾಂತರಿಸುವಾಗ, ನಕಾಶೆ ಮತ್ತು ಮಾಲೀಕತ್ವದ ವಿವರಗಳೊಂದಿಗೆ ಸೈಟ್ ಅಳತೆ ಸೇರಿದಂತೆ ಇತರ ದಾಖಲೆಗಳನ್ನು ನಿರ್ವಹಿಸಬೇಕು ಮತ್ತು ನವೀಕರಿಸಬೇಕು ಎಂದು ಅವರು ಹೇಳಿದ್ದಾರೆ.

1970 ರ ದಶಕದಲ್ಲಿ ಅಕ್ರಮ ಸಕ್ರಮ ಮತ್ತು ಉಡುಗೊರೆ ಆರಂಭವಾಗಿದ್ದು, ಅದು 2000 ರವರೆಗೆ ನಿರಂತರವಾಗಿ ಮುಂದುವರೆದಿತ್ತು. ಇತ್ತೀಚೆಗಷ್ಟೇ ಅಕ್ರಮ ಸಕ್ರಮ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಹಲವು ಕಾರಣಗಳಿಂದ ಬಾಕಿ ಇರುವುದನ್ನಷ್ಟೇ ಇತ್ಯರ್ಥಗೊಳಿಸಲಾಗುತ್ತಿದೆ ಎನ್ನಲಾಗಿದೆ.

ಕಾರಣಗಳೇನು?

ಕೆಲವು ಸಂದರ್ಭಗಳಲ್ಲಿ, ಆಸ್ತಿ ಮಾಲೀಕತ್ವದ ಹಕ್ಕುಗಳಿಗೆ ಸಂಬಂಧಿಸಿದ ವ್ಯಾಜ್ಯಗಳ ಸಮಯದಲ್ಲಿ ಜನರು ನಮ್ಮನ್ನು ಸಂಪರ್ಕಿಸಿದಾಗ ಮಾತ್ರ ಬಹು ಮಾಲೀಕತ್ವ ವಿಚಾರ ಬಹಿರಂಗಗೊಳ್ಳುತ್ತದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: ನಾಗಮಂಗಲ ಕೋಮುಗಲಭೆ: ಬರೊಬ್ಬರಿ 2.66 ಕೋಟಿ ಮೌಲ್ಯದ ಆಸ್ತಿ ನಾಶ

ಸದ್ಯ ಗಮನಕ್ಕೆ ಬಂದಿರುವ 25 ಲಕ್ಷ ಆಸ್ತಿಗಳಲ್ಲಿ ನಿಖರವಾದ ಸೈಟ್ ಆಯಾಮಗಳನ್ನು ಲೆಕ್ಕಹಾಕಲು ಕಷ್ಟವಾಗುತ್ತಿದೆ. ಏಕೆಂದರೆ ಅನೇಕರು ಮಾಲೀಕತ್ವವನ್ನು ಪ್ರತಿಪಾದಿಸಲು ಮೂಲ ಭೂ ದಾಖಲೆಗಳನ್ನು ಹೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಕರ್ನಾಟಕವು 1.8 ಕೋಟಿ ಭೂ ದಾಖಲೆಗಳನ್ನು ಹೊಂದಿದ್ದು, ಅದರಲ್ಲಿ 1.1 ಕೋಟಿ ಡಿಜಿಟಲೀಕರಣವನ್ನು ಸರ್ವೆ, ಸೆಟ್ಲ್‌ಮೆಂಟ್ ಮತ್ತು ಭೂ ದಾಖಲೆಗಳ ಇಲಾಖೆ ಮಾಡಿದೆ. ಉಳಿದ 70 ಲಕ್ಷವನ್ನು ತ್ವರಿತಗತಿಯಲ್ಲಿ ಮಾಡಲಾಗುತ್ತಿದೆ ಎಂದು ಕಂದಾಯ ಇಲಾಖೆಯ ಮತ್ತೊಬ್ಬರು ಅಧಿಕಾರಿ ಮಾಹಿತಿ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:47 am, Wed, 18 September 24