ವಿಧಾನ ಪರಿಷತ್​ನಲ್ಲಿ ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡನೆ

| Updated By: Rakesh Nayak Manchi

Updated on: Dec 12, 2023 | 7:41 PM

ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಇಂದು ವಿಧಾನಪರಿಷತ್​ನಲ್ಲಿ ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡನೆ ಮಾಡಿದರು. ಇದು ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಅಲ್ಲ ಎಂದು ಸ್ಪಷ್ಟನೆ ನೀಡಿದರು. 55 ಸ್ವರೂಪದ ಆರ್ಟಿಕಲ್​​ಗಳಿವೆ, ಅದರ ಕೆಳಗಡೆ 181 ಸಬ್ ಆರ್ಟಿಕಲ್ ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್​ನಲ್ಲಿ ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡನೆ
ಕಂದಾಯ ಸಚಿವ ಕೃಷ್ಣ ಬೈರೇಗೌಡ
Image Credit source: ET Bureau
Follow us on

ವಿಧಾನ ಪರಿಷತ್, ಡಿ.12: ವಿಧಾನ ಸಭೆಯಿಂದ ಅಂಗೀಕೃತ ರೂಪದಲ್ಲಿರುವ ಕರ್ನಾಟಕ ಸ್ಟ್ಯಾಂಪ್ (ತಿದ್ದುಪಡಿ) ವಿಧೇಯಕ-2023 (Karnataka Stamp Amendment Bill 2023) ಅನ್ನು ವಿಧಾನ ಪರಿಷತ್​ನಲ್ಲಿ ಮಂಡಿಸಲಾಯಿತು. ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರು ತಿದ್ದುಪಡಿ ವಿಧೇಯಕವನ್ನು ಮಂಡಿಸಿದ್ದು, ನೋಂದಣಿ ದರ ಹೆಚ್ಚಾಗುತ್ತದೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಅದು ನಿಜವಲ್ಲ. ಇದು ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಿಧೇಯಕದಲ್ಲಿ 55 ಸ್ವರೂಪದ ಆರ್ಟಿಕಲ್​​ಗಳಿವೆ, ಅದರ ಕೆಳಗಡೆ 181 ಸಬ್ ಆರ್ಟಿಕಲ್​ ಇವೆ. ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಒಟ್ಟು 20 ಸಾವಿರ ಕೋಟಿ ಆದಾಯ ಬರುತ್ತದೆ. ನಾನ್ ರಿಜಿಸ್ಟ್ರೇಬಲ್​ನಿಂದ ನಮಗೆ ಕೇವಲ ಶೇಕಡಾ 10 ರಷ್ಟು ಆದಾಯ ಬರುತ್ತದೆ. ಒಟ್ಟು ಆದಾಯದ ಶೇ.10 ರಷ್ಟು ಮಾತ್ರ ನಮಗೆ ಇದರಿಂದ ಬರುತ್ತದೆ ಎಂದರು.

ಇದನ್ನೂ ಓದಿ: Belagavi Session: ರಾಜ್ಯದಲ್ಲಿ 26 ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿವೆ: ಕೃಷ್ಣಬೈರೇಗೌಡ

ಯಾರಾದರೂ ಸ್ಟ್ಯಾಂಪ್ ಡ್ಯೂಟಿ ಕಟ್ಟಿದರೆ ಎನ್​ಫೋರ್ಸೆಬಲ್ ಆಗುತ್ತದೆ. ಸ್ಟ್ಯಾಂಪ್ ಡ್ಯೂಟಿ ಕಟ್ಟದೇ ಇದ್ದರೆ ಕಾಂಟ್ರ್ಯಾಕ್ಟ್​ಗೆ ಮಾನ್ಯತೆ ಇರುವುದಿಲ್ಲ ಎಂದು ವಿಧಾನ ಪರಿಷತ್​ನಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ