ರಾಜ್ಯದಲ್ಲಿ ಈ ಅನಗತ್ಯ ಹುದ್ದೆಗಳ ರದ್ದು ಮಾಡಿದ್ರೆ ಎಷ್ಟು ಉಳಿತಾಯ ಆಗುತ್ತೆ ಗೊತ್ತಾ?

ಬೆಂಗಳೂರು: ಕೊರೊನಾ ಸೋಂಕು ಆಡಳಿತ ವರ್ಗಕ್ಕೆ ಒಂದಷ್ಟು ಪಾಠಗಳನ್ನೂ ಕಲಿಸತೊಡಗಿದೆ. ಕೊರೊನಾ ಲಾಕ್​ ಡೌ್​ನ್​ನಿಂದಾಗಿ ಬಸವಳಿದಿರುವ ಆರ್ಥಿಕತೆಯನ್ನು ಸರಿದೂಗಿಸಲು ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಚಿಂತನೆಯ ಭಾಗವಾಗಿ ಸರ್ಕಾರದಲ್ಲಿನ ಕೆಲ ಇಲಾಖೆಗಳನ್ನು ವಿಲೀನ ಮಾಡುವುದು, ಹಲವು ಹುದ್ದೆಗಳನ್ನು ರದ್ದುಪಡಿಸಲೂ ಸಹ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಕುರಿತು ಸಚಿವ ಸಂಪುಟ ಉಪ ಸಮಿತಿ ಮೊದಲ ಸಭೆಯೂ ನಡೆದಿದೆ. ಸರ್ಕಾರಕ್ಕೆ ವೆಚ್ಚ ತರುತ್ತಿರುವ ಹುದ್ದೆಗಳನ್ನು ರದ್ದು ಮಾಡುವುದು, ಇಲಾಖೆಗಳನ್ನು ವಿಲೀನ […]

ರಾಜ್ಯದಲ್ಲಿ ಈ ಅನಗತ್ಯ ಹುದ್ದೆಗಳ ರದ್ದು ಮಾಡಿದ್ರೆ ಎಷ್ಟು ಉಳಿತಾಯ ಆಗುತ್ತೆ ಗೊತ್ತಾ?
ಸಾಧು ಶ್ರೀನಾಥ್​

Updated on: May 01, 2020 | 10:36 AM

ಬೆಂಗಳೂರು: ಕೊರೊನಾ ಸೋಂಕು ಆಡಳಿತ ವರ್ಗಕ್ಕೆ ಒಂದಷ್ಟು ಪಾಠಗಳನ್ನೂ ಕಲಿಸತೊಡಗಿದೆ. ಕೊರೊನಾ ಲಾಕ್​ ಡೌ್​ನ್​ನಿಂದಾಗಿ ಬಸವಳಿದಿರುವ ಆರ್ಥಿಕತೆಯನ್ನು ಸರಿದೂಗಿಸಲು ಆರ್ಥಿಕ ಮಿತವ್ಯಯ ಸಾಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ.

ಈ ಚಿಂತನೆಯ ಭಾಗವಾಗಿ ಸರ್ಕಾರದಲ್ಲಿನ ಕೆಲ ಇಲಾಖೆಗಳನ್ನು ವಿಲೀನ ಮಾಡುವುದು, ಹಲವು ಹುದ್ದೆಗಳನ್ನು ರದ್ದುಪಡಿಸಲೂ ಸಹ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿದೆ. ಈ ಕುರಿತು ಸಚಿವ ಸಂಪುಟ ಉಪ ಸಮಿತಿ ಮೊದಲ ಸಭೆಯೂ ನಡೆದಿದೆ. ಸರ್ಕಾರಕ್ಕೆ ವೆಚ್ಚ ತರುತ್ತಿರುವ ಹುದ್ದೆಗಳನ್ನು ರದ್ದು ಮಾಡುವುದು, ಇಲಾಖೆಗಳನ್ನು ವಿಲೀನ ಮಾಡುವುದರ ಬಗ್ಗೆ ಚಿಂತಿಸಲಾಗಿದೆ.

ಜನತೆ ಶುಭಸ್ಯ ಶೀಘ್ರಂ ಅನ್ನುತ್ತಿದ್ದಾರೆ
ಕೃಷಿ ಇಲಾಖೆ ಜಂಟಿ ನಿರ್ದೇಶಕ ಹುದ್ದೆ, ಪ್ರಾದೇಶಿಕ ಆಯುಕ್ತ ಹುದ್ದೆ ಹೀಗೆ ಒಂದೇ ಇಲಾಖೆಯಲ್ಲಿರುವ ಎರಡೆರಡು ಪ್ರಧಾನ ಕಾರ್ಯದರ್ಶಿ ಹುದ್ದೆಗಳು, ಎರಡೆರಡು ಆಯುಕ್ತ ಹುದ್ದೆಗಳು, ಗ್ರಾ.ಪಂ.ಗಳಲ್ಲಿ ಹೆಚ್ಚುವರಿ ಸಿಬ್ಬಂದಿ.. ಹೀಗೆ ಅನಗತ್ಯ ಹುದ್ದೆಗಳನ್ನು ರದ್ದು ಮಾಡಲು ಚಿಂತನೆ ನಡೆದಿದೆ.

ಸರ್ವೆ ಮಾಡಿ ವರದಿ ನೀಡಲು 3 ಅಧಿಕಾರಿಗಳಿಗೆ ಜವಾಬ್ದಾರಿ ‌ವಹಿಸಲಾಗಿದೆ. ಹೆಚ್ಚುವರಿ ಹುದ್ದೆ, ಸಿಬ್ಬಂದಿ ರದ್ದು, ಇಲಾಖೆಗಳ ವಿಲೀನದಿಂದ ಸರ್ಕಾರಕ್ಕೆ ₹ 2 ಸಾವಿರ ಕೋಟಿ ಉಳಿತಾಯವಾಗುವ ಬಗ್ಗೆ ಅಂದಾಜು ಮಾಡಲಾಗಿದೆ. ಇದನ್ನು ಕೇಳಿದ ಜನತೆ ಶುಭಸ್ಯ ಶೀಘ್ರಂ ಅನ್ನುತ್ತಿದ್ದಾರೆ.

Published On - 10:35 am, Fri, 1 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us