ಹಳೆ ಬಟ್ಟೆಯಲ್ಲೇ ಹೊಸ ಸೂರು ಕಟ್ಟಿಕೊಂಡ ಅಲೆಮಾರಿಗಳು!

ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು. ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್​ಡೌನ್​ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್​ಡೌನ್​ನಿಂದ ಅಲ್ಲೇ […]

ಹಳೆ ಬಟ್ಟೆಯಲ್ಲೇ ಹೊಸ ಸೂರು ಕಟ್ಟಿಕೊಂಡ ಅಲೆಮಾರಿಗಳು!
ಆಯೇಷಾ ಬಾನು

Updated on: Jun 11, 2020 | 4:09 PM

ಕೋಲಾರ:ಅವರೆಲ್ಲಾ ಹಳೆ ಬಟ್ಟೆಯಿಂದಲೇ ಹೊಸ ಬದುಕು ಕಟ್ಟಿಕೊಳ್ಳುವ ಜನ. ತುತ್ತಿನ ಚೀಲ ತುಂಬಿಸಿಕೊಳ್ಳಲು ಜಿಲ್ಲೆಯಿಂದ ಜಿಲ್ಲೆಗೆ ಕುಟುಂಬ ಸಮೇತರಾಗಿ ತಿರುಗಾಡುತ್ತಾ ಜೀವನ ಚಕ್ರವನ್ನು ಸಾಗಿಸುತ್ತಿದ್ದ ಜನರು. ಆದ್ರೆ ಕೊರೊನಾ ಲಾಕ್​ಡೌನ್​ನಿಂದಾಗಿ ಅವರ ಅಲೆಮಾರಿ ಬದುಕು ನಿಂತ ನೀರಾಗಿ ಹೋಯಿತು.

ಮೂಲತ: ವಿಜಯಪುರ ಜಿಲ್ಲೆಯವರಾದ ಈ ಅಲೆಮಾರಿಗಳು ಹಳೆ ಬಟ್ಟೆಗಳನ್ನು ಸಂಗ್ರಹಿಸಿ ಅದನ್ನು ಮಾರಿಕೊಂಡು ಜೀವನ ನಡೆಸುತ್ತಿದ್ದರು. ಸುಮಾರು 12 ಕುಟುಂಬಗಳನ್ನು ಒಳಗೊಂಡ ಈ ಗುಂಪು ಲಾಕ್​ಡೌನ್​ಗೆ ಮೊದಲು ಕೋಲಾರದ ತಲಗುಂದ ಗ್ರಾಮಕ್ಕೆ ಬಂದವರು. ನಂತರ ಲಾಕ್​ಡೌನ್​ನಿಂದ ಅಲ್ಲೇ ಉಳಿಯುವಂತಾಯ್ತು. ಇನ್ನು ಜೀವನೋಪಾಯದ ದಾರಿಯೇ ಮುಚ್ಚಿಹೋದ ಮೇಲೆ ಮುಂದೇನು ಎಂಬ ಯೋಚನೆ ಇವರಿಗೂ ಕಾಡಿತ್ತು.

ಅಲೆಮಾರಿಗಳ ನೆರವಿಗೆ ಬಂದ ಸ್ಥಳೀಯರು, ಸಂಘ ಸಂಸ್ಥೆಗಳು
ಲಾಕ್​ಡೌನ್​ನಿಂದ ಎದುರಾದ ಸಮಸ್ಯೆಯಿಂದ ಅಲೆಮಾರಿಗಳು ಕೊಂಚ ವಿಚಲಿತರಾದರೂ ಧೃತಿಗೆಡದೆ ಇದ್ದುದ್ದರಲ್ಲಿ ಬದುಕು ಸಾಗಿಸೋಣ ಎಂಬ ನಿರ್ಧಾರಕ್ಕೆ ಮುಂದಾದರು. ತಲಗುಂದ ಗ್ರಾಮದವರ ನೆರವಿನಿಂದ ತಮ್ಮ ಬಳಿ ಇದ್ದ ಹಳೇ ಬಟ್ಟೆಗಳಿಂದಲೇ ಸುಂದರ ಗುಡಿಸಲುಗಳನ್ನು ನಿರ್ಮಾಣ ಮಾಡಿಕೊಂಡರು. ಜೊತೆಗೆ ಕಳೆದ 2 ತಿಂಗಳಿಂದ ಕೆಲವು ಸಂಘ ಸಂಸ್ಥೆಗಳು, ದಾನಿಗಳ ನೆರವಿನಿಂದ ಹೊಟ್ಟೆ ತುಂಬಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೆ ಬರೀ ಅಷ್ಟಕ್ಕೇ ಸೀಮಿತವಾಗದೆ ಸ್ವಾವಲಂಬಿಗಳಾದ ಇವರು ಅವಕಾಶ ಸಿಕ್ಕಲ್ಲಿ ಸಣ್ಣಪುಟ್ಟ ಕೂಲಿ ಕೆಲಸ ಕೂಡ ಮಾಡುತ್ತಿದ್ದಾರೆ .

ಒಟ್ನಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿ ತಮ್ಮ ತಮ್ಮ ಊರುಗಳತ್ತ ಮುಖಮಾಡಿ ಹೊರಟ ಕೂಲಿ ಕಾರ್ಮಿಕರಿಗೆ ಮತ್ತು ಇತರರಿಗೆ ಈ ಅಲೆಮಾರಿಗಳು ಒಂದು ರೀತಿಯ ಸ್ಫೂರ್ತಿಯಾಗಿದ್ದಾರೆ. ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ ಎಂಬ ಡಾ.ವಿಷ್ಣುವರ್ಧನ್​ ಅವರ ಸಿನಿಮಾದ ಹಾಡಿನ ಸಾಲುಗಳಂತೆ ಹಳೆ ಬಟ್ಟೆಯಿಂದ ಮಾಡಿದ ಸೂರು ಸಾಕು ಹಾಯಾಗಿರೋಕೆ ಎಂದು ಈ ಅಲೆಮಾರಿಗಳು ಎಲ್ಲರಿಗೆ ತೋರಿಸಿಕೊಟ್ಟಿದ್ದಾರೆ.

Published On - 11:29 am, Thu, 11 June 20

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us