KSRTC ಬಸ್​ನಲ್ಲಿ ಯುವತಿಗೆ ಕಿರುಕುಳ: ‘ಪೋಲಿ ಕಂಡಕ್ಟರ್’​ ಅರೆಸ್ಟ್

ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಸರ್ಕಾರಿ ಬಸ್​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅದೂ KSRTC ಬಸ್​ನಲ್ಲಿ ಡ್ಯೂಟಿಯಲ್ಲಿರುವಾಗಲೇ ಮಹಿಳೆ ಜೊತೆ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಪೋಲಿ ಕಂಡಕ್ಟರ್’ ಬೆಂಗಳೂರಿನಿಂದ ಕುಣಿಗಲ್, ಹಾಸನ, ಧರ್ಮಸ್ಥಳ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೃತ್ಯ ನಡೆದಿದೆ. KSRTC ಕಂಡಕ್ಟರ್‌ ಶಿಶುಹರಿ ಶಾಲುರ್ ಎಂಬಾತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಕಂಡಕ್ಟರ್ ವರ್ತನೆಯನ್ನು ಸ್ವತಹ ಮಹಿಳೆಯೇ ವಿಡಿಯೋ ಮಾಡಿದ್ದಾಳೆ. […]

KSRTC ಬಸ್​ನಲ್ಲಿ ಯುವತಿಗೆ ಕಿರುಕುಳ: ‘ಪೋಲಿ ಕಂಡಕ್ಟರ್’​ ಅರೆಸ್ಟ್
ಸಾಧು ಶ್ರೀನಾಥ್​

Updated on: Feb 17, 2020 | 2:24 PM

ಬೆಂಗಳೂರು: ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕಿರುವ ಸರ್ಕಾರಿ ಬಸ್​ನಲ್ಲೇ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಅದೂ KSRTC ಬಸ್​ನಲ್ಲಿ ಡ್ಯೂಟಿಯಲ್ಲಿರುವಾಗಲೇ ಮಹಿಳೆ ಜೊತೆ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

‘ಪೋಲಿ ಕಂಡಕ್ಟರ್’
ಬೆಂಗಳೂರಿನಿಂದ ಕುಣಿಗಲ್, ಹಾಸನ, ಧರ್ಮಸ್ಥಳ ಮಾರ್ಗವಾಗಿ ಪುತ್ತೂರಿಗೆ ಸಂಚರಿಸುವ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೃತ್ಯ ನಡೆದಿದೆ. KSRTC ಕಂಡಕ್ಟರ್‌ ಶಿಶುಹರಿ ಶಾಲುರ್ ಎಂಬಾತ ಮಹಿಳೆ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಕಂಡಕ್ಟರ್ ವರ್ತನೆಯನ್ನು ಸ್ವತಹ ಮಹಿಳೆಯೇ ವಿಡಿಯೋ ಮಾಡಿದ್ದಾಳೆ. ಬಳಿಕ ಬೆಳ್ಳೂರು ಕ್ರಾಸ್ ಬಳಿ ಸರ್ಕಾರಿ ಬಸ್ ತಲುಪಿದಾಗ ನಿರ್ವಾಹಕನಿಗೆ ಮಹಿಳೆ ಕಪಾಳ ಮೋಕ್ಷ ಮಾಡಿದ್ದಾಳೆ.

ಕಂಡಕ್ಟರ್​ ಕಪಾಳಕ್ಕೆ ಹೊಡೆದು ಮಾರ್ಗ ಮಧ್ಯೆಯೇ ಬಸ್​ನಿಂದ ಇಳಿದು ಮಹಿಳೆ ಹೊರನಡೆದಿದ್ದಾಳೆ. ನಂತರ ಘಟನೆಯ ಬಗ್ಗೆ ಫೇಸ್​ಬುಕ್​ನಲ್ಲಿ ವಿವರಣೆ ನೀಡಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಕಂಡಕ್ಟರ್ ಅಸಭ್ಯವಾಗಿ ವರ್ತಿಸಿರುವ ವಿಡಿಯೋ ವೈರಲ್ ಆಗಿದೆ.

ಯುವತಿ ಜತೆ ಅಸಭ್ಯ ವರ್ತನೆ ಪ್ರಕರಣ ಸಂಬಂಧ ಆರೋಪಿ ಕಂಡಕ್ಟರ್ ಶಿಶುಹರಿ ಶಾಲುರ್​ನನ್ನು ನಿನ್ನೆ ಬಂಧಿಸಲಾಗಿದೆ. ಯುವತಿ ನೀಡಿದ್ದ ದೂರಿನ ಮೇರೆಗೆ ಶಿಶುಹರಿನನ್ನು ಬೆಂಗಳೂರಿನ ಸುಬ್ರಹ್ಮಣ್ಯನಗರ ಪೊಲೀಸರು ಬಂಧಿಸಿದ್ದಾರೆ.  ನಿನ್ನೆ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿದ್ದ ಸಂತ್ರಸ್ತೆಯ ಪ್ರಿಯಕರ, ಸ್ನೇಹಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.  ಈ ಬಗ್ಗೆ ದೂರು ನೀಡಿದ್ದ ಕಂಡಕ್ಟರ್ ಶಿಶುಹರಿ ಶಾಲುರ್ ದೂರು ನೀಡಿದ್ದರು.

Published On - 12:31 pm, Mon, 17 February 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us