ವೃದ್ಧರ ಓಡಾಟ ಮೂಲಭೂತ ಹಕ್ಕು: ಸರ್ಕಾರಕ್ಕೆ ಕೋರ್ಟ್ ನೋಟಿಸ್!

ಬೆಂಗಳೂರು: 65 ವರ್ಷ ದಾಟಿದ ವಯೋ ವೃದ್ಧರಿಗೆ ಸಂಚಾರ ನಿರ್ಬಂಧಗೊಳಿಸಿರುವುದನ್ನು ಪ್ರಶ್ನಿಸಿ, ಜಯದೇವ ಎಂಬುವವರು ಪಿಐಎಲ್​ ಸಲ್ಲಿಸಿದ್ದಾರೆ. 65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧಿಸಲಾಗಿದೆ. ಸರ್ಕಾರದ ಕ್ರಮದಿಂದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಜೈಲಿನಲ್ಲೂ ಒಂಟಿ ಸೆರೆವಾಸಕ್ಕೆ ಅವಕಾಶವಿಲ್ಲ. ಮನೆಯಲ್ಲೇ ಇರಬೇಕೆಂಬ ನಿರ್ಬಂಧದಿಂದ ತೊಂದರೆಯಾಗಿದೆ. ಬಲಹೀನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಿರಿಯ ನಾಗರಿಕರಿಗೆ ಸಂಚಾರ ಸ್ವಾತಂತ್ರ್ಯವಿದೆ. ಹೀಗಾಗಿ ಸರ್ಕಾರದ ನಿರ್ಬಂಧ ರದ್ದತಿಗೆ ಮನವಿ ಮಾಡುತ್ತೇನೆ ಎಂದು ಅರ್ಜಿದಾರ ಜಯದೇವ ಅಲವತ್ತುಕೊಂಡಿದ್ದಾರೆ. ಅರ್ಜಿದಾರರ ಪರ ಹಿರಿಯ ವಕೀಲ ರಮೇಶ್ ಪುತ್ತಿಗೆ ವಾದ […]

ವೃದ್ಧರ ಓಡಾಟ ಮೂಲಭೂತ ಹಕ್ಕು: ಸರ್ಕಾರಕ್ಕೆ ಕೋರ್ಟ್ ನೋಟಿಸ್!
ಕರ್ನಾಟಕ ಹೈಕೋರ್ಟ್
ಸಾಧು ಶ್ರೀನಾಥ್​

Updated on: May 28, 2020 | 3:04 PM

ಬೆಂಗಳೂರು: 65 ವರ್ಷ ದಾಟಿದ ವಯೋ ವೃದ್ಧರಿಗೆ ಸಂಚಾರ ನಿರ್ಬಂಧಗೊಳಿಸಿರುವುದನ್ನು ಪ್ರಶ್ನಿಸಿ, ಜಯದೇವ ಎಂಬುವವರು ಪಿಐಎಲ್​ ಸಲ್ಲಿಸಿದ್ದಾರೆ.

65 ವರ್ಷ ಮೇಲ್ಪಟ್ಟವರಿಗೆ ಸಂಚಾರ ನಿರ್ಬಂಧಿಸಲಾಗಿದೆ. ಸರ್ಕಾರದ ಕ್ರಮದಿಂದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಜೈಲಿನಲ್ಲೂ ಒಂಟಿ ಸೆರೆವಾಸಕ್ಕೆ ಅವಕಾಶವಿಲ್ಲ. ಮನೆಯಲ್ಲೇ ಇರಬೇಕೆಂಬ ನಿರ್ಬಂಧದಿಂದ ತೊಂದರೆಯಾಗಿದೆ. ಬಲಹೀನ ನಾಗರಿಕರಿಗೆ ತೊಂದರೆಯಾಗುತ್ತಿದೆ. ಹಿರಿಯ ನಾಗರಿಕರಿಗೆ ಸಂಚಾರ ಸ್ವಾತಂತ್ರ್ಯವಿದೆ. ಹೀಗಾಗಿ ಸರ್ಕಾರದ ನಿರ್ಬಂಧ ರದ್ದತಿಗೆ ಮನವಿ ಮಾಡುತ್ತೇನೆ ಎಂದು ಅರ್ಜಿದಾರ ಜಯದೇವ ಅಲವತ್ತುಕೊಂಡಿದ್ದಾರೆ.

ಅರ್ಜಿದಾರರ ಪರ ಹಿರಿಯ ವಕೀಲ ರಮೇಶ್ ಪುತ್ತಿಗೆ ವಾದ ಮಂಡನೆ ಮಾಡಿದರು. ಜೂನ್ 4ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us