7 ವರ್ಷದಿಂದ ಬಿಲ್​ಗಳು ಬಾಕಿ, ಮೈಸೂರು ಜಿಲ್ಲಾಧಿಕಾರಿ ಕಚೇರಿ ಜಪ್ತಿ

ಮೈಸೂರು: ಗುತ್ತಿಗೆದಾರನಿಗೆ 7 ವರ್ಷಗಳಿಂದ ಬಿಲ್ ಪಾವತಿಸದ ಹಿನ್ನೆಲೆ ಮೈಸೂರು ಡಿಸಿ ಕಚೇರಿ ವಸ್ತುಗಳ ಜಪ್ತಿಗೆ ಲೋಕ ಅದಾಲತ್‌ ನ್ಯಾಯಾಲಯ ಆದೇಶ ನೀಡಿದೆ. 2013ರಲ್ಲಿ ಅಟಲ್‌ಜಿ ಜನಸ್ನೇಹಿ ಯೋಜನೆಯಡಿ ಡಿಸಿ ಕಚೇರಿಗೆ ಗುತ್ತಿಗೆದಾರ ಯುಪಿಎಸ್‌ ನೀಡಿದ್ದಾರೆ. UPS ನೀಡಿ 7 ವರ್ಷವಾದ್ರೂ ಜಿಲ್ಲಾಡಳಿತ ಹಣ ಪಾವತಿಸಿಲ್ಲ. ಈ ಬಗ್ಗೆ ಗುತ್ತಿಗೆದಾರ ಚಿದಂಬರ ಕೋರ್ಟ್ ಮೊರೆಹೋಗಿದ್ದಾರೆ. ಹಣ ಪಾವತಿಸುವಂತೆ ನ್ಯಾಯಾಲಯ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಆದರೆ ಕೋರ್ಟ್‌ ಆದೇಶವನ್ನ ನಿರ್ಲಕ್ಷಿಸಿ ಕಳೆದ 7 ವರ್ಷಗಳಿಂದ ಭಾಕಿ ಉಳಿಸಿಕೊಂಡ ಹಣವನ್ನ ಪಾವತಿಸಿಲ್ಲ. […]

7 ವರ್ಷದಿಂದ ಬಿಲ್​ಗಳು ಬಾಕಿ, ಮೈಸೂರು ಜಿಲ್ಲಾಧಿಕಾರಿ ಕಚೇರಿ ಜಪ್ತಿ
ಸಾಧು ಶ್ರೀನಾಥ್​

Updated on: Jan 27, 2020 | 6:59 PM

ಮೈಸೂರು: ಗುತ್ತಿಗೆದಾರನಿಗೆ 7 ವರ್ಷಗಳಿಂದ ಬಿಲ್ ಪಾವತಿಸದ ಹಿನ್ನೆಲೆ ಮೈಸೂರು ಡಿಸಿ ಕಚೇರಿ ವಸ್ತುಗಳ ಜಪ್ತಿಗೆ ಲೋಕ ಅದಾಲತ್‌ ನ್ಯಾಯಾಲಯ ಆದೇಶ ನೀಡಿದೆ. 2013ರಲ್ಲಿ ಅಟಲ್‌ಜಿ ಜನಸ್ನೇಹಿ ಯೋಜನೆಯಡಿ ಡಿಸಿ ಕಚೇರಿಗೆ ಗುತ್ತಿಗೆದಾರ ಯುಪಿಎಸ್‌ ನೀಡಿದ್ದಾರೆ. UPS ನೀಡಿ 7 ವರ್ಷವಾದ್ರೂ ಜಿಲ್ಲಾಡಳಿತ ಹಣ ಪಾವತಿಸಿಲ್ಲ.

ಈ ಬಗ್ಗೆ ಗುತ್ತಿಗೆದಾರ ಚಿದಂಬರ ಕೋರ್ಟ್ ಮೊರೆಹೋಗಿದ್ದಾರೆ. ಹಣ ಪಾವತಿಸುವಂತೆ ನ್ಯಾಯಾಲಯ ಜಿಲ್ಲಾಡಳಿತಕ್ಕೆ ಸೂಚಿಸಿದೆ. ಆದರೆ ಕೋರ್ಟ್‌ ಆದೇಶವನ್ನ ನಿರ್ಲಕ್ಷಿಸಿ ಕಳೆದ 7 ವರ್ಷಗಳಿಂದ ಭಾಕಿ ಉಳಿಸಿಕೊಂಡ ಹಣವನ್ನ ಪಾವತಿಸಿಲ್ಲ. ಈ ಹಿನ್ನೆಲೆ ಮೈಸೂರು ಡಿಸಿ ಕಚೇರಿಯಲ್ಲಿನ ವಸ್ತುಗಳನ್ನು ಜಪ್ತಿ ಮಾಡುವಂತೆ ಕೋರ್ಟ್ ಆದೇಶ ನೀಡಿದೆ. ಹೀಗಾಗಿ ಡಿಸಿ ಕಚೇರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

Published On - 6:49 pm, Mon, 27 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us