ಡಿಕೆಶಿ ಮೇಲಿನ CBI ದಾಳಿ: ಜನಾರ್ದನ ರೆಡ್ಡಿ ಮೇಲೆ ನಡೆದಿದ್ದ ರೇಡ್​ ನೆನಪಿಸಿಕೊಂಡ ಸಚಿವ ಅಶೋಕ್​

ಬೆಂಗಳೂರು: ಡಿ.ಕೆ. ಶಿವಕುಮಾರ್ ಹೆಸರು ಬಳಸಿಕೊಂಡು ಗೆಲ್ಲುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದಾರೆ. 2017-18ರಲ್ಲಿನ ಪ್ರಕರಣ​ಗಳು ಈಗ ಮುಂದುವರಿದಿವೆ. ಸಿಬಿಐ ತನ್ನ ಕೆಲಸ ಮಾಡುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಅಂತಾ ಅಶೋಕ್​ ಹೇಳಿದ್ದಾರೆ. 50 ಕೋಟಿ ತಂದು RSSನವರು ಖರ್ಚು ಮಾಡುತ್ತಿದ್ದಾರೆ ಎಂದು ನಿನ್ನೆ ಶಿರಾದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಈ ರೀತಿ ಮಾತಾಡಬಾರದು. RSS ಒಂದು […]

ಡಿಕೆಶಿ ಮೇಲಿನ CBI ದಾಳಿ: ಜನಾರ್ದನ ರೆಡ್ಡಿ ಮೇಲೆ ನಡೆದಿದ್ದ ರೇಡ್​ ನೆನಪಿಸಿಕೊಂಡ ಸಚಿವ ಅಶೋಕ್​
Updated By: ಸಾಧು ಶ್ರೀನಾಥ್​

Updated on: Oct 06, 2020 | 2:26 PM

ಬೆಂಗಳೂರು: ಡಿ.ಕೆ. ಶಿವಕುಮಾರ್ ಹೆಸರು ಬಳಸಿಕೊಂಡು ಗೆಲ್ಲುವ ಪರಿಸ್ಥಿತಿ ಬಿಜೆಪಿಗೆ ಬಂದಿಲ್ಲ ಎಂದು ವಿಧಾನಸೌಧದಲ್ಲಿ ಕಂದಾಯ ಸಚಿವ R.ಅಶೋಕ್ ಹೇಳಿದ್ದಾರೆ. 2017-18ರಲ್ಲಿನ ಪ್ರಕರಣ​ಗಳು ಈಗ ಮುಂದುವರಿದಿವೆ. ಸಿಬಿಐ ತನ್ನ ಕೆಲಸ ಮಾಡುತ್ತಿದೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆದ್ದೇ ಗೆಲ್ತಾರೆ ಅಂತಾ ಅಶೋಕ್​ ಹೇಳಿದ್ದಾರೆ.

50 ಕೋಟಿ ತಂದು RSSನವರು ಖರ್ಚು ಮಾಡುತ್ತಿದ್ದಾರೆ ಎಂದು ನಿನ್ನೆ ಶಿರಾದಲ್ಲಿ ಮಾಜಿ ಸಿಎಂ HD ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿಯಾಗಿ ಅವರು ಈ ರೀತಿ ಮಾತಾಡಬಾರದು. RSS ಒಂದು ಸ್ವಾಯತ್ತ ಸಂಸ್ಥೆ, ಅವರು ರಾಜಕೀಯಕ್ಕೆ ಬರಲ್ಲ ಎಂದು ಅಶೋಕ್​ ಹೇಳಿದ್ದಾರೆ.

ಸಿಬಿಐ ಸ್ವತಂತ್ರ ಸಂಸ್ಥೆ. 2017-18 ರಲ್ಲಿ ದಾಖಲಾದ ಕೇಸ್​ಗಳು ಈಗ ಮುಂದುವರೆದಿವೆ ಅಷ್ಟೇ. ಹಿಂದೆ ಕೂಡ ಜನಾರ್ದನ ರೆಡ್ಡಿ ಮೇಲೆ ಸಿಬಿಐ ದಾಳಿ ಆದಾಗ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಹಾಗಾದರೆ ಅದನ್ನು ಕಾಂಗ್ರೆಸ್ ನವರು ಮಾಡಿದ್ದು ಎಂದು ಒಪ್ಪಿಕೊಳ್ತಾರಾ? ಎಂದು ಅಶೋಕ್​ ಪ್ರಶ್ನಿಸಿದ್ದಾರೆ.

Published On - 1:59 pm, Tue, 6 October 20