ಸಿಡಿ ಲೇಡಿ ಕೋರ್ಟ್​ ಹಾಜರು ಸಾಧ್ಯತೆ: ಡಿಕೆ ಶಿವಕುಮಾರ್-ರಮೇಶ್​ ಜಾರಕಿಹೊಳಿ ಮನೆಗಳಿಗೆ ಬಿಗಿ ಭದ್ರತೆ

ಬೆಂಗಳೂರಿನಲ್ಲಿ ಒಂದೇ ಏರಿಯಾದಲ್ಲಿ ಅಂದ್ರೆ ಸದಾಶಿವನಗರದಲ್ಲಿ ಡಿಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್​ ಅವರ ನಿವಾಸಗಳಿವೆ. ಯುವತಿ ಮತ್ತು ಯುವತಿ ಪೋಷಕರ ಹೇಳಿಕೆಗಳ ನಂತರ ರಾಜಕೀಯ ನಾಯಕರಿಬ್ಬರ ಬೆಂಬಲಿಗರು ಉದ್ವಿಗ್ನಗೊಂಡಿದ್ದಾರೆ. ಹಾಗಾಗಿ, ಭದ್ರತೆಗಾಗಿ ಎಸಿಪಿ, ನಾಲ್ವರು ಇನ್ಸ್‌ಪೆಕ್ಟರ್‌ಗಳು, ಐವರು SI ಮತ್ತು 80ಕ್ಕೂ ಹೆಚ್ಚು ಪೊಲೀಸರು, 5 ಕೆಎಸ್‌ಆರ್‌ಪಿ ನಿಯೋಜನೆ ಮಾಡಲಾಗಿದೆ.

ಸಿಡಿ ಲೇಡಿ ಕೋರ್ಟ್​ ಹಾಜರು ಸಾಧ್ಯತೆ: ಡಿಕೆ ಶಿವಕುಮಾರ್-ರಮೇಶ್​ ಜಾರಕಿಹೊಳಿ ಮನೆಗಳಿಗೆ ಬಿಗಿ ಭದ್ರತೆ
ರಮೇಶ್ ಜಾರಕಿಹೊಳಿ ಮತ್ತು ಡಿಕೆ ಶಿವಕುಮಾರ್
ಸಾಧು ಶ್ರೀನಾಥ್​

Updated on: Mar 30, 2021 | 3:53 PM

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ CD ಬಹಿರಂಗ ಪ್ರಕರಣದಲ್ಲಿ ಸಿಡಿ ಲೇಡಿ ಒಂದಿ ಜಡ್ಜ್ ಎದುರು ಇಂದು ಹಾಜರಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ತೀವ್ರತರವಾದ ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿರುವ ಪ್ರಕರಣದ ಎ1 ಆರೋಪಿ ರಮೇಶ್ ಜಾರಕಿಹೊಳಿ ಮತ್ತು ಪ್ರಕರಣದ ಸೂತ್ರಧಾರ ಎಂದು ಬಿಂಬಿಸಲ್ಪಟ್ಟಿರುವ ಕಾಂಗ್ರೆಸ್​ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸಕ್ಕೆ ಬಿಗಿ ಪೊಲೀಸ್ ಭದ್ರತೆ ಹಾಕಲಾಗಿದೆ.

ಬೆಂಗಳೂರಿನಲ್ಲಿ ಒಂದೇ ಏರಿಯಾದಲ್ಲಿ ಅಂದ್ರೆ ಸದಾಶಿವನಗರದಲ್ಲಿ ಡಿಕೆ ಶಿವಕುಮಾರ್ ಮತ್ತು ರಮೇಶ್ ಕುಮಾರ್​ ಅವರ ನಿವಾಸಗಳಿವೆ. ಯುವತಿ ಮತ್ತು ಯುವತಿ ಪೋಷಕರ ಹೇಳಿಕೆಗಳ ನಂತರ ರಾಜಕೀಯ ನಾಯಕರಿಬ್ಬರ ಬೆಂಬಲಿಗರು ಉದ್ವಿಗ್ನಗೊಂಡಿದ್ದಾರೆ. ಹಾಗಾಗಿ, ಭದ್ರತೆಗಾಗಿ ಎಸಿಪಿ, ನಾಲ್ವರು ಇನ್ಸ್‌ಪೆಕ್ಟರ್‌ಗಳು, ಐವರು SI ಮತ್ತು 80ಕ್ಕೂ ಹೆಚ್ಚು ಪೊಲೀಸರು, 5 ಕೆಎಸ್‌ಆರ್‌ಪಿ ನಿಯೋಜನೆ ಮಾಡಲಾಗಿದೆ.

ಕುತೂಹಲದ ಸಂಗತಿಯೆಂದರೆ ಉಭಯ ನಾಯಕರು ತಮ್ಮ ತಮ್ಮ ಪಕ್ಷಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆಂದು ಬೆಳಗಾವಿ ಜಿಲ್ಲಾ ಪ್ರವಾಸದಲ್ಲಿದ್ದಾರೆ.

ಇದನ್ನೂ ಓದಿ: ಸಿಡಿ ಲೇಡಿ ಪೋಷಕರ ನಿವಾಸಕ್ಕೆ ವಾಲ್ಮೀಕಿ ಪೀಠದ ಜಗದ್ಗುರು ಪ್ರಸನ್ನಾನಂದಪುರಿ ಶ್ರೀ ಭೇಟಿ

Published On - 10:24 am, Tue, 30 March 21

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us