ಎಸಿಬಿ ಪ್ರಕರಣ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ

ಕರ್ನಾಟಕ ಹೈಕೋರ್ಟ್ ಜಡ್ಜ್ ಎಚ್.ಪಿ.ಸಂದೇಶ್ ಅವರಿಗೆ ಎಸಿಬಿ ಕೇಸ್ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ ಮಾಡಿದೆ.  ಎಸಿಬಿ ಕೇಸ್ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು 3 ದಿನ ಮುಂದೂಡಲು ಸಿಜೆಐ ಮನವಿ ಮಾಡಿದ್ದಾರೆ. 

ಎಸಿಬಿ ಪ್ರಕರಣ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ
Supreme Court
Edited By:

Updated on: Jul 12, 2022 | 12:52 PM

ಎಸಿಬಿ ಇಲಾಖೆಯ ವಿರುದ್ಧ ತನಿಖೆಗೆ ನಿರ್ದೇಶನ ನೀಡಿದ ತುಷಾರ್ ಮೆಹ್ತಾ.  ಆರೋಪಿಗಳ ಜಾಮೀನು ಅರ್ಜಿಯು ಪೆಂಡಿಂಗ್ ಇದೆ ಎಂದು ಅವರು ತಿಳಿಸಿದ್ದಾರೆ.  ಎರಡು ದಿನಗಳ ಕಾಲ ವಿಚಾರಣೆ ಮುಂದೂಡಲು ಜಡ್ಜ್ ಗೆ ಮನವಿ ಮಾಡುತ್ತೇವೆ ಸುಪ್ರೀಂ ಕೋರ್ಟ್ ಸಿಜೆಐ ತಿಳಿಸಿದ್ದಾರೆ.  ನಾವು ಹೈಕೋರ್ಟ್ ಆದೇಶಗಳನ್ನು ಓದುತ್ತೇವೆ. ಕೆಲವು ದಿನ ವಿಚಾರಣೆ ಮುಂದೂಡಲು ಮನವಿ ಮಾಡುತ್ತೇವೆ ಸಿಜೆಐ ಹೇಳಿದ್ದಾರೆ.  ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಸಿಜೆಐ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಹೈಕೋರ್ಟ್ ಜಡ್ಜ್ ಎಚ್.ಪಿ.ಸಂದೇಶ್ ಅವರಿಗೆ ಎಸಿಬಿ ಕೇಸ್ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ ಮಾಡಿದೆ.  ಎಸಿಬಿ ಕೇಸ್ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು 3 ದಿನ ಮುಂದೂಡಲು ಸಿಜೆಐ ಮನವಿ ಮಾಡಿದ್ದಾರೆ.  ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ಸಿಜೆಐ.

ಸುಪ್ರೀಂ ಕೋರ್ಟ್ ನ ಸಿಜೆ ಪೀಠದಲ್ಲಿ ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು
ಸಿಜೆಐ ರಮಣ ಮಾಡಿದ್ದಾರೆ.  ಹೈಕೋರ್ಟ್ ಜಡ್ಜ್ ಆದೇಶ ನೀಡಿದ್ದಾರೆ, ಸುಪ್ರೀಂ ಕೋರ್ಟ್ ನಲ್ಲಿ ಪ್ರಕರಣ ಪ್ರಸ್ತಾಪ ಮಾಡಿದ ಬಳಿಕವೂ ಹೈಕೋರ್ಟ್ ವಿಚಾರಣೆ ಮುಂದುವರಿಸಿದೆ- ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇದನ್ನು ಹೈಕೋರ್ಟ್ ತಡೆಯಬಹುದಿತ್ತು.  ಹೈಕೋರ್ಟ್ ವಿಚಾರಣೆ ಮುಂದುವರಿಸಲಿ ಬಿಡಿ, ಹೈಕೋರ್ಟ್ ಆದೇಶ ನೀಡಲಿ. ಸುಪ್ರೀಂ ಕೋರ್ಟ್ ಸಿಜೆಐ
ಈ ಪ್ರಕರಣ ಏನೆಂದು ನಮಗೆ ಹೇಳಿ ಎಂದು ತುಷಾರ್ ಮೆಹ್ತಾ ವಾದ ಮಂಡನೆ ಮಾಡಿದ್ದಾರೆ .  ಯಾರೊಬ್ಬರು ರೆಗ್ಯುಲರ್ ಜಾಮೀನಿಗೆ ಅರ್ಜಿ ಸಲ್ಲಿಸಿದರು. ಅವರಿಗೆ ಜಾಮೀನು ಮಂಜೂರು ಅಥವಾ ತಿರಸ್ಕರಿಸಬಹುದಿತ್ತು ಆದರೆ ಹೈಕೋರ್ಟ್ ಜಡ್ಜ್ ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಹೇಳಿದರು. 2016 ರಿಂದ ಎಸಿಬಿ ಕೇಸ್ ಗಳ ವಿವರ ಕೇಳಿದೆ ಎಂದು ತುಷಾರ್ ಮೆಹ್ತಾ ಹೇಳಿದ್ದಾರೆ.  ಎಸಿಬಿ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಪರ ತುಷಾರ್ ಮೆಹ್ತಾ ವಾದ ಮಂಡನೆ. ಆದರೆ ಇದೀಗ ಕರ್ನಾಟಕ ಹೈಕೋರ್ಟ್ ಜಡ್ಜ್ ಎಚ್.ಪಿ.ಸಂದೇಶ್ ಅವರಿಗೆ ಎಸಿಬಿ ಕೇಸ್ ವಿಚಾರಣೆಯನ್ನು 3 ದಿನ ಮುಂದೂಡಲು ಸುಪ್ರೀಂ ಕೋರ್ಟ್ ಮನವಿ ಮಾಡಿದೆ.

 

Published On - 12:51 pm, Tue, 12 July 22

Web contact

TV9 Kannada

Read More
Follow Us