ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ

ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಗುರುಕುಲ ಪದ್ಧತಿಗೆ ವಿಶೇಷ ಸ್ಥಾನವಿದೆ. ಗುರು ಶಿಷ್ಯ ಸಂಬಂಧಕ್ಕೆ ಹಲವು ಮೌಲ್ಯಯುತ ಉದಾಹರಣೆಗಳಿವೆ. ಅಂದಿನ ಪರಂಪರೆಯನ್ನು ಉಳಿಸುವ ಸಲುವಾಗಿ ಆಯುರ್ವೇದ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಹೆ ಶಿಷ್ಯೋಪನಯನ ನೆರವೇರಿಸಿದೆ. ಗುರು ಬ್ರಹ್ಮ ಗುರು ವಿಷ್ಣು.. ಗುರು ದೇವ ಮಹೇಶ್ವರ.. ಗುರುವಿನ ಗುಲಾಮನಾಗುವ ತನಕ ದೊರೆಯದ್ದನ್ನ ಮುಕುತಿ.. ಹೌದು, ಗೌರು ಮತ್ತು ಶಿಷ್ಯ ಸಂಬಂಧಕ್ಕೆ ಅಂಥಾ ಮಹತ್ವವಿದೆ. ಸನಾತನ ಸಂಸ್ಕೃತಿಯ ಗುರುವಿಗೆ ದೇವರ ಸ್ಥಾನ ನೀಡುವ ಅಪಾರ ಗೌರವವಿದೆ. ರಾಮಾಯಣ ಮಹಾಭಾರತದಿಂದ ಹಿಡಿದು ಇಂದಿಗೂ ಗುರ […]

ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಯ ಶಿಷ್ಯೋಪನಯನ
ಸಾಧು ಶ್ರೀನಾಥ್​

Updated on: Dec 22, 2019 | 7:18 PM

ಉಡುಪಿ: ಭಾರತೀಯ ಸಂಸ್ಕೃತಿಯಲ್ಲಿ ಗುರುಕುಲ ಪದ್ಧತಿಗೆ ವಿಶೇಷ ಸ್ಥಾನವಿದೆ. ಗುರು ಶಿಷ್ಯ ಸಂಬಂಧಕ್ಕೆ ಹಲವು ಮೌಲ್ಯಯುತ ಉದಾಹರಣೆಗಳಿವೆ. ಅಂದಿನ ಪರಂಪರೆಯನ್ನು ಉಳಿಸುವ ಸಲುವಾಗಿ ಆಯುರ್ವೇದ ಶಿಕ್ಷಣ ಸಂಸ್ಥೆಯೊಂದು ವಿದ್ಯಾರ್ಥಿಗಳಿಹೆ ಶಿಷ್ಯೋಪನಯನ ನೆರವೇರಿಸಿದೆ.

ಗುರು ಬ್ರಹ್ಮ ಗುರು ವಿಷ್ಣು.. ಗುರು ದೇವ ಮಹೇಶ್ವರ.. ಗುರುವಿನ ಗುಲಾಮನಾಗುವ ತನಕ ದೊರೆಯದ್ದನ್ನ ಮುಕುತಿ.. ಹೌದು, ಗೌರು ಮತ್ತು ಶಿಷ್ಯ ಸಂಬಂಧಕ್ಕೆ ಅಂಥಾ ಮಹತ್ವವಿದೆ. ಸನಾತನ ಸಂಸ್ಕೃತಿಯ ಗುರುವಿಗೆ ದೇವರ ಸ್ಥಾನ ನೀಡುವ ಅಪಾರ ಗೌರವವಿದೆ. ರಾಮಾಯಣ ಮಹಾಭಾರತದಿಂದ ಹಿಡಿದು ಇಂದಿಗೂ ಗುರ ಶಿಷ್ಯರ ಸಂಬಂಧಕ್ಕೆ ಮಹತ್ವದ ವ್ಯಾಖ್ಯಾನಗಳಿವೆ.

ಗುರುವಿಗೆ ಗೌರವಿಸಿ ತಮ್ಮನ್ನ ಶಿಷ್ಯರನ್ನಾಗಿ ಸ್ವೀಕರಿಸಿ ಎಂಬ ಶಿಷ್ಯ ನಿವೇದನೆಯ ವಿಶಿಷ್ಠ ಕಾರ್ಯಕ್ರಮವೇ ಶಿಷ್ಯೋಪನಯನ. ಇಂಥಾ ವಿಭಿನ್ನ ಕಾರ್ಯಕ್ರಮವನ್ನ ಧರ್ಮಸ್ಥಳದ ಆಯುರ್ವೇದಿಕ್ ಶಿಕ್ಷಣ ಸಂಸ್ಥೆಗಳು ಕಳೆದ 25 ವರ್ಷಗಳಿಂದ ನಡೆಸ್ತಿವೆ. ಸಂಸ್ಥೆಗಳಿಗೆ ಹೊಸದಾಗಿ ಸೇರ್ಪಡೆಯಾಗುವ ವಿದ್ಯಾರ್ಥಿಗಳನ್ನ, ಗುರುಗಳು ಶಿಷ್ಯರನ್ನಾಗಿ ಅಧಿಕೃತವಾಗಿ ಸ್ವೀಕರಿಸಿದ್ರು.

ಮುಂಜಾನೆ ಶ್ವೇತ ವಸ್ತ್ರಧಾರಿಗಳಾದ ಹೊಸ ವಿದ್ಯಾರ್ಥಿಗಳು ಧನ್ವಂತರೀ ಹೋಮದಲ್ಲಿ ಪಾಲ್ಗೊಳ್ಳುತ್ತಾರೆ. ಪೂರ್ಣಾಹುತಿ ಸಂದರ್ಭದಲ್ಲಿ ವಿದ್ಯಾರ್ಥಿಗಳೂ ಹೋಮಕ್ಕೆ ಹವಿಸ್ಸು ಅರ್ಪಿಸ್ತಾರೆ. ಬಳಿಕ ವಿದ್ಯಾರ್ಥಿಗಳು ಪವಿತ್ರ ಧಾರವನ್ನು ಕಟ್ಟಿಕೊಳ್ಳುತ್ತಾರೆ. ಆ ಬಳಿಕ ಗುರುಗಳ ಆಶೀರ್ವಾದ ಪಡೆಯೋ ಮೂಲಕ ಶಿಷ್ಯೋಪನಯನ ಕಾರ್ಯಕ್ರಮ ಸಂಪನ್ನಗೊಳ್ಳುತ್ತೆ.

ದೇಶದಲ್ಲಿ ಅನಾದಿ ಕಾಲದಿಂದಲೂ ಶಿಕ್ಷಣ ಮತ್ತು ಗುರು ಶಿಷ್ಯ ಸಂಬಂಧಕ್ಕೆ ಬಹಳ ಮೌಲ್ಯಯುತ ಸ್ಥಾನವಿತ್ತು. ಅದನ್ನ ಕಾಪಾಡುವ ಮತ್ತು ಮುಂದಿನ ಜನಾಂಗಕ್ಕೆ ಉಳಿಸುವ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us