ಯಾದಗಿರಿ: ನಿಮ್ಮ ಟಿವಿ9 ಸುದ್ದಿವಾಹಿನಿಯ ಜನಪ್ರಿಯ ನಿರೂಪಕರಾದ ಆನಂದ ಬುರಲಿಗೆ ಮಹಾಂತಶ್ರೀ ಪ್ರಶಸ್ತಿಯ ಗೌರವ ದೊರೆತಿದೆ. ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯ ಸುಪ್ರಸಿದ್ಧ ಶ್ರೀಮಹಾಂತೇಶ್ವರ ಮಠದ ವತಿಯಿಂದ ಆನಂದ ಬುರಲಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಠದ ಮಹಾಂತೇಶ್ವರಶ್ರೀಗಳಿಂದ ಆನಂದ ಬುರಲಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ದೀಪ ಹಚ್ಚುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ
ಕಾರ್ಯಕ್ರಮದ ವೇಳೆ ಪೂಜೆಯಲ್ಲಿ ಭಾಗಿಯಾದ ಆನಂದ ಬುರಲಿ
ಹಲವು ಯೋಜನೆಗಳಿಗೆ ಗಣ್ಯರಿಂದ ಉದ್ಘಾಟನೆ
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಆನಂದ ಬುರಲಿ, ವೆಂಕಟರೆಡ್ಡಿ ಮುದ್ನಾಳ್ , ಈಶ್ವರ ಖಂಡ್ರೆ
ಕಾರ್ಯಕ್ರಮದಲ್ಲಿ ಟಿವಿ9 ನಿರೂಪಕ ಆನಂದ ಬುರಲಿ
ಇದೇ ವೇಳೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹಾಗೂ ಅಜಿತ್ ಹನುಮಕ್ಕನವರ್ಗೆ ಸಹ ಮಹಾಂತಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದಾದ ಬಳಿಕ, ಸಾಮೂಹಿಕ ವಿವಾಹ ಮತ್ತು ಜಾನುವಾರು ಜಾತ್ರೆ ಪ್ರಯುಕ್ತ ಕಾರ್ಯಕ್ರಮವನ್ನು ಏಪರ್ಡಿಸಲಾಗಿತ್ತು. ಸುಮಾರು 36 ಜೋಡಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕಾರ್ಯಕ್ರಮದಲ್ಲಿ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಮಾಜಿ ವಿಧಾನಪರಿಷತ್ ಸದಸ್ಯ ಚನ್ನರೆಡ್ಡಿ ಪಾಟೀಲ್ ಪುದ್ನುರ್ ಹಾಗೂ ಕಾಂಗ್ರೆಸ್ ಮುಖಂಡ ಭೀಮಣ್ಣ ಮೇಟಿ ಸಹ ಉಪಸ್ಥಿತರಿದ್ದರು.
ಈಶ್ವರ ಖಂಡ್ರೆಗೆ ಪ್ರಶಸ್ತಿ ಪ್ರದಾನ
ಆನಂದ ಬುರಲಿಗೆ ಶ್ರೀಗಳಿಂದ ಪ್ರಶಸ್ತಿ ಪ್ರದಾನ
ಆನಂದ ಬುರಲಿಗೆ ಮಹಾಂತಶ್ರೀ ಪ್ರಶಸ್ತಿ ಪ್ರದಾನ
ಆನಂದ ಬುರಲಿ, ಈಶ್ವರ ಖಂಡ್ರೆಗೆ ಪ್ರಶಸ್ತಿ ಪ್ರದಾನ
ನೆಚ್ಚಿನ ಌಂಕರ್ ಜೊತೆ ಒಂದು ಸೆಲ್ಫಿ
ಖಾಕಿ ಜೊತೆ ಆನಂದ ಬುರಲಿ ಖಡಕ್ ಪೋಸ್!
ಚಿಣ್ಣರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಆನಂದ ಬುರಲಿ
ಅಭಿಮಾನಿಗಳ ಜೊತೆ ಒಂದು ಸೆಲ್ಫಿ
ಕಾರ್ಯಕ್ರಮದ ಬಳಿಕ ಸಂತಸ ಹಂಚಿಕೊಂಡ ಟಿವಿ9 ನಿರೂಪಕ ಆನಂದ ಬುರಲಿ
ಕಾರ್ಯಕ್ರಮದಲ್ಲಿ ಭಾಗಿಯಾದ ಸಾರ್ವಜನಿಕರು
ಕಾರ್ಯಕ್ರಮದಲ್ಲಿ ಸಾರ್ವಜನಿಕರು
ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವಜೋಡಿಗಳು
ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು
ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪೂಜೆ
ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಯುವಜೋಡಿ
ಸಾಮೂಹಿಕ ವಿವಾಹ ಕಾರ್ಯಕ್ರಮ
ನೃತ್ಯದ ಮೂಲಕ ನೆರೆದವರನ್ನು ರಂಜಿಸಿದ ಪೋರಿ
ನೃತ್ಯ ಕಾರ್ಯಕ್ರಮ
ಇದನ್ನೂ ಓದಿ: ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ: ವೃದ್ಧೆ ಸೇರಿ ಐವರಿಗೆ ಗಾಯ