ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ: ವೃದ್ಧೆ ಸೇರಿ ಐವರಿಗೆ ಗಾಯ

ಜೋಡೆತ್ತಿನ ಗಾಡಿ ಓಟದ ವೇಳೆ ಜನರತ್ತ ಬಂಡಿ ನುಗ್ಗಿ ಬಂದು ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೇಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ಧೆ ಸೇರಿದಂತೆ ಐವರಿಗೆ ಗಾಯಗಳಾಗಿದೆ. ಸದ್ಯ, ವೃದ್ಧೆ ಅನಸೂಯಮ್ಮ ಮತ್ತು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ: ವೃದ್ಧೆ ಸೇರಿ ಐವರಿಗೆ ಗಾಯ
ಜೋಡೆತ್ತಿನ ಗಾಡಿ ಓಟದ ವೇಳೆ ನೋಡನೋಡುತ್ತಿದ್ದಂತೆ ಜನರತ್ತ ನುಗ್ಗಿದ ಬಂಡಿ
Follow us
|

Updated on: Mar 11, 2021 | 5:04 PM

ಚಿತ್ರದುರ್ಗ: ಜೋಡೆತ್ತಿನ ಗಾಡಿ ಓಟದ ವೇಳೆ ಜನರತ್ತ ಬಂಡಿ ನುಗ್ಗಿ ಬಂದು ಅವಘಡ ಸಂಭವಿಸಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಸೊಂಡೇಕೆರೆಯಲ್ಲಿ ನಡೆದಿದೆ. ಘಟನೆಯಲ್ಲಿ ವೃದ್ಧೆ ಸೇರಿದಂತೆ ಐವರಿಗೆ ಗಾಯಗಳಾಗಿದೆ. ಸದ್ಯ, ವೃದ್ಧೆ ಅನಸೂಯಮ್ಮ ಮತ್ತು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

CTR YETTINGADI RACE 10

ಜನರತ್ತ ನುಗ್ಗಿ ಬಂದ ಎತ್ತಿನ ಬಂಡಿ

CTR YETTINGADI RACE 4

ವೃದ್ಧರೊಬ್ಬರನ್ನು ತುಳಿದು ಮುನ್ನುಗ್ಗಿದ ಎತ್ತುಗಳು

ಕೆಂಚಾಂಬ ರೈತ ಯುವಕರ ಸಂಘದಿಂದ ಸ್ಪರ್ಧೆ ಆಯೋಜಿಸಲಾಗಿತ್ತು. ಐಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಸಂಘವು ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಸ್ಪರ್ಧೆಯ ಆಯೋಜನೆ ಮಾಡಿತ್ತು ಎಂದು ಹೇಳಲಾಗಿದೆ. ಹೀಗಾಗಿ, ಸಂಘದ ಸದಸ್ಯರ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಘಡ ಸಂಭವಿಸಿದೆ.

CTR YETTINGADI RACE 5

ಸ್ಪರ್ಧೆ ವೇಳೆ ನಡೆದ ಭೀಕರ ಅವಘಡ

CTR YETTINGADI RACE 3

ಎತ್ತುಗಳ ಓಟದ ರಭಸಕ್ಕೆ ಮಗುಚಿದ ಬಂಡಿ

ಇನ್ನು, ಈ ಕುರಿತು ಟಿವಿ9ನಲ್ಲಿ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಜೋಡೆತ್ತಿನ ಓಟದ ಸ್ಪರ್ಧೆಗೆ ಬ್ರೇಕ್ ಹಾಕಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ‌.ರಾಧಿಕಾ ಪ್ರತಿಕ್ರಿಯಿಸಿದ್ದು ಅವಘಡದಲ್ಲಿ ವೃದ್ಧೆ ಅನಸೂಯಮ್ಮ ಸೇರಿ ಐವರಿಗೆ ಗಾಯಗಳಾಗಿದೆ. ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಂಚಾಂಬ ರೈತ ಯುವಕರ ಸಂಘ ಸ್ಪರ್ಧೆ ಆಯೋಜಿಸಿತ್ತು. ಆದರೆ, ಆಯೋಜಕರು ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದರು. ಜೊತೆಗೆ, ಪೊಲೀಸರು ಸೂಚಿಸಿದ ನಿಯಮಗಳನ್ನು ಆಯೋಜಕರು ಪಾಲಿಸಿಲ್ಲ. ಹಾಗಾಗಿ, ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

CTR YETTINGADI RACE 6

ಅವಘಡದಲ್ಲಿ ಗಾಯಗೊಂಡ ವೃದ್ಧೆ

CTR YETTINGADI RACE 1

ಘಟನಾ ಸ್ಥಳದಲ್ಲಿ ಸಾರ್ವಜನಿಕರು

CTR YETTINGADI RACE 7

ಸ್ಪರ್ಧೆಗೆ ಬ್ರೇಕ್​ ಹಾಕಿದ ಪೊಲೀಸರು

CTR YETTINGADI RACE 8

ಜನರನ್ನು ಚದುರಿಸಿದ ಪೊಲೀಸರು

ಮೆಣಸು ಕೊಯ್ಲು ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವು ಮೆಣಸು ಕೊಯ್ಲು ಮಾಡುವ ವೇಳೆ ವಿದ್ಯುತ್ ತಗುಲಿ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದಲ್ಲಿ ನಡೆದಿದೆ. ವಿನೋದ್(21) ಮೃತ ಕಾರ್ಮಿಕ. ಉರ್ವಿನ್ ಖಾನ್ ಕಾಫಿ ಎಸ್ಟೇಟ್​ನಲ್ಲಿ ಘಟನೆ ನಡೆದಿದೆ. ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮಾಡೆಲ್ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣ: ಮೂವರು ಖಾಕಿ ವಶಕ್ಕೆ ಇತ್ತ, ಮಾಡೆಲ್ ವಿದ್ಯಾರ್ಥಿನಿ ಪ್ರೇಕ್ಷಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರೇಕ್ಷಾ ಪ್ರಿಯಕರ ಯತಿರಾಜ್ ಸೇರಿದಂತೆ ಸೌರವ್ ಮತ್ತು ಭವಿತ್​ರನ್ನು ವಶಕ್ಕೆ ಪಡೆಯಲಾಗಿದೆ.

ಉಳ್ಳಾಲ ಠಾಣೆಯ ಪೊಲೀಸರಿಂದ ಆರೋಪಿಗಳ ವಿಚಾರಣೆ ನಡೆಸಲಾಗುತ್ತಿದೆ. ಮೂವರು ಬಂಧಿತರು ವಿದ್ಯಾರ್ಥಿನಿ ಪ್ರೇಕ್ಷಾ ಮನೆ ಬಳಿ ನಿನ್ನೆ ಹೋಗಿದ್ದರು ಎಂಬ ಮಾಹಿತಿ ದೊರೆತಿದೆ. ಪ್ರೇಕ್ಷಾ ಸಾವನ್ನಪ್ಪುವ ವೇಳೆ ಮಂಗಳೂರು ಹೊರವಲಯದಲ್ಲಿರುವ ಕುಂಪಲ ಆಶ್ರಯ ಕಾಲೋನಿಯಲ್ಲಿರುವ ಆಕೆಯ ಮನೆ ಬಳಿ ಯುವಕರು ಹೋಗಿದ್ದರು ಎಂಬ ಮಾಹಿತಿ ಸಿಕ್ಕಿದೆ. ಮನೆಯಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಪ್ರೇಕ್ಷಾ ಶವ ಸಿಕ್ಕಿತ್ತು‌.

MNG PREKSHA STUDENT MODEL 1

ಮೃತ ಮಾಡೆಲ್​ ವಿದ್ಯಾರ್ಥಿನಿ  ಪ್ರೇಕ್ಷಾ

ಇದನ್ನೂ ಓದಿ: ವಿಜಯಪುರ ಜನರಿಗೆ ಶಾಪವಾಗಿ ಪರಿಣಮಿಸಿದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ