ಉಡುಪಿಯ ಅಷ್ಟಮಿಯಲ್ಲಿ ಭಾರತದ ಡ್ಯಾನ್ಸಿಂಗ್ ಸೆನ್ಸೇಷನ್ ಶ್ರೇಯಾ ಆಚಾರ್ಯರಿಂದ ಮೈನವಿರೇಳಿಸುವ ಕುಣಿತ!

ಅರುಣ್​ ಕುಮಾರ್​ ಬೆಳ್ಳಿ

Updated on: Sep 07, 2023 | 7:34 PM

ಅಲ್ಲಿಂದ ಅವರು ಹುಲಿ ವೇಷ ತಾಸೆ ಪೆಟ್ಟಿಗೆಗೂ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಅವರ ಕುಣಿತ ಕಂಡು ಪ್ರೇರಿತರಾಗುವ ಯುವತಿಯರು ಮತ್ತು ಮಕ್ಕಳು ಸಹ ಅವರೊಂದಿಗೆ ಕುಣಿಯಲಾರಂಭಿಸುತ್ತಾರೆ. ಅಷ್ಟಮಿ, ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸದಲ್ಲಿ ಶ್ರೇಯಾ ಆಚಾರ್ಯ ಎಲ್ಲ ಲೈಮ್ ಲೈಟನ್ನು ತಮ್ಮತ್ತ ಸೆಳೆದುಕೊಂಡಿದ್ದು ಸುಳ್ಳಲ್ಲ.

ಉಡುಪಿ: ಡ್ಯಾನ್ಸಿಂಗ್ ಕ್ಷೇತ್ರದಲ್ಲಿ ಶ್ರೇಯಾ ಆಚಾರ್ಯ (Shreya Acharya) ದೊಡ್ಡ ಹೆಸರು. ಕುಣಿತದ ಬೇರೆ ಬೇರೆ ಪ್ರಾಕಾರಗಳಲ್ಲಿ (dance forms) ಅವರು ಪರಿಣಿತಿ ಸಾಧಿಸಿದ್ದಾರೆ. ಶ್ರೇಯಾ ಒಬ್ಬ ಉದಯೋನ್ಮುಖ ಹಿಂದಿ ಗಾಯಕಿಯೂ (singer) ಹೌದು. ಅವರನ್ನು ಬಹುಮುಖ ಪ್ರತಿಭೆಯ ಕಲಾವಿದೆ ಅಂದರೆ ತಪ್ಪಿಲ್ಲ, ಇಂಥ ಶ್ರೇಯಾ ಕೃಷ್ಣ ಜನ್ಮಾಷ್ಟಮಿಯ (Krishna Janmashtami) ದಿನವಾಗಿರುವ ಇಂದು ಉಡುಪಿಯಲ್ಲಿ ಕಾಣಿಸಿದರು. ಅವರಿದ್ದಲ್ಲಿ ಕುಣಿತ ಇರದಿರಲು ಸಾಧ್ಯವೇ? ನಗರದಲ್ಲಿ ಅಷ್ಟಮಿ ಆಚರಣೆ ವಿಜೃಂಭಣೆಯಿಂದ ನಡೆಯುತ್ತಿದ್ದಾಗ ಅವರು ಭಗವತಿ ನಾಸಿಕ್ ತಂಡದ ಜೊತೆ ನೋಡುಗರ ಮೈನವಿರೇಳುವಂತೆ ಡ್ಯಾನ್ಸ್ ಮಾಡಿದರು ಮಾರಾಯ್ರೇ. ಕುಣಿಯುವಾಗ ಶ್ರೇಯಾ ದಣಿಯುವುದಿಲ್ಲ ಅನಿಸುತ್ತದೆ. ಅಲ್ಲಿಂದ ಅವರು ಹುಲಿ ವೇಷ ತಾಸೆ ಪೆಟ್ಟಿಗೆಗೂ ಭರ್ಜರಿಯಾಗಿ ಸ್ಟೆಪ್ಸ್ ಹಾಕುತ್ತಾರೆ. ಅವರ ಕುಣಿತ ಕಂಡು ಪ್ರೇರಿತರಾಗುವ ಯುವತಿಯರು ಮತ್ತು ಮಕ್ಕಳು ಸಹ ಅವರೊಂದಿಗೆ ಕುಣಿಯಲಾರಂಭಿಸುತ್ತಾರೆ. ಅಷ್ಟಮಿ, ವಿಟ್ಲಪಿಂಡಿ, ಶ್ರೀಕೃಷ್ಣ ಲೀಲೋತ್ಸದಲ್ಲಿ ಶ್ರೇಯಾ ಆಚಾರ್ಯ ಎಲ್ಲ ಲೈಮ್ ಲೈಟನ್ನು ತಮ್ಮತ್ತ ಸೆಳೆದುಕೊಂಡಿದ್ದು ಸುಳ್ಳಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.