- Kannada News Photo gallery Sri Krishna Janmashtami celebrations in Udupi Vajra Kavacha decoration for Kadegolu Krishna
ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ; ಕಡೆಗೋಲು ಕೃಷ್ಣನಿಗೆ ವಜ್ರ ಕವಚ ಅಲಂಕಾರ, ಇಲ್ಲಿದೆ ಪೋಟೋಸ್
ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಅದರಂತೆ ಉಡುಪಿಯ ಅಷ್ಟಮಠದ ರಥಬೀದಿಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಹಾಗೂ ಮುಖ್ಯ ಪ್ರಾಣ ದೇವರ ರಥೋತ್ಸವ ನಡೆಯುತ್ತಿದೆ. ಈ ಕುರಿತು ಮಾಹಿತಿ ಇಲ್ಲಿದೆ.
Updated on:Sep 07, 2023 | 5:01 PM

ಇಂದು ನಾಡಿನಲ್ಲೆಡೆ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತಿದ್ದು, ಅದರಂತೆ ಉಡುಪಿಯ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಹಿನ್ನಲೆ ಭಕ್ತ ಸಾಗರ ಹರಿದು ಬಂದಿದೆ.

ಇನ್ನು ಈ ವೇಳೆ ಪರ್ಯಾಯ ಕೃಷ್ಣಾಪುರ ಸ್ವಾಮೀಜಿಯವರು ಕಡೆಗೋಲು ಕೃಷ್ಣನಿಗೆ ವಜ್ರ ಕವಚ ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಕಾಣಿಯೂರು, ಶೀರೂರು ಸ್ವಾಮೀಜಿಯವರು ಇಂದು ವಿಶೇಷ ಅಲಂಕಾರ ಸೇವೆ ಮಾಡಿದ್ದಾರೆ. ಅದರಂತೆ ಬೆಳಿಗ್ಗೆಯಿಂದ ಭಕ್ತ ಸಾಗರ ನಿರಂತರವಾಗಿ ಮಠದತ್ತ ಬರುತ್ತಿದೆ.

ಮಧ್ಯಾಹ್ನ 2.30 ರ ನಂತರ ವಿಟ್ಲಪಿಂಡಿ ಮಹೋತ್ಸವ ನಡೆಯುತ್ತಿದ್ದು, ಉಡುಪಿಯ ರಥಬೀದಿಯಲ್ಲಿ ಶ್ರೀಕೃಷ್ಣನ ಜನ್ಮ ನಂತರ ವಿವಿಧ ಲೀಲೋತ್ಸವದ ಕಾರ್ಯಕ್ರಮ ನಡೆಯುತ್ತಿದೆ. ಈ ವಿಟ್ಲಪಿಂಡಿ ಉತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದಾರೆ.

ಇನ್ನು ಬಂದಂತಹ ಭಕ್ತಾಧಿಗಳಿಗೆ ಸುಮಾರು 15 ಸಾವಿರ ಜನರಿಗೆ ಭೋಜನ ಪ್ರಸಾದ ವಿತರಣೆ ಮಾಡಲಾಗಿದೆ.

ಅಷ್ಟಮಠದ ರಥಬೀದಿಯಲ್ಲಿ ಕೃಷ್ಣನ ಮೃಣ್ಮಯ ಮೂರ್ತಿ ಹಾಗೂ ಮುಖ್ಯ ಪ್ರಾಣ ದೇವರ ರಥೋತ್ಸವ ನಡೆಯುತ್ತಿದೆ. ಸ್ಚರ್ಣ ರಥದಲ್ಲಿ ಕೃಷ್ಣ ರಾರಾಜಿಸುತ್ತಿದ್ದರೆ, ಇತ್ತ ಸಹಸ್ರ ಸಂಖ್ಯೆಯಲ್ಲಿ ಭಕ್ತರು ರಥವನ್ನು ಎಳೆದು ಸಂಭ್ರಮಿಸಿದರು.
Published On - 5:01 pm, Thu, 7 September 23
























