
ಕುಂದಾಪುರ, ನ.21: ಮಂದಾರ್ತಿ ಯಕ್ಷಗಾನ ಮೇಳದ ಕಲಾವಿದರೊಬ್ಬರು (Yakshagana artist death) ರಂಗಸ್ಥಳದಲ್ಲಿ ಪಾತ್ರ ನಿರ್ವಹಿಸಿ, ಚೌಕಿಗೆ ಬಂದು ಬಣ್ಣ ಕಳಚುತ್ತಿದ್ದ ವೇಳೆ ಹೃದಯಘಾತವಾಗಿ ಸಾವಿನ್ನಪ್ಪಿದ್ದಾರೆ. ಈ ಘಟನೆ ಕುಂದಾಪುರದ ಸೌಡದಲ್ಲಿ ನಡೆದಿದೆ. ಶೃಂಗೇರಿ ಸಮೀಪದ ನೆಮ್ಮಾರು ಗ್ರಾಮದ ಈಶ್ವರ ಗೌಡ ಎಂಬ ಯಕ್ಷಗಾನ ಕಲಾವಿದ, ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ 2ನೇ ಮೇಳದಲ್ಲಿ ಮಹಿಷಾಸುರ ಪಾತ್ರವನ್ನು ನಿರ್ವಹಿಸುತ್ತಿದ್ದರು. ಬುದ್ಧವಾರ ರಾತ್ರಿ ಸೌಡದ ಮಾಲಾಡಿಯಲ್ಲಿ ಆಯೋಜಿಸಲಾಗಿದ್ದ ದೇವಿ ಮಹ್ಮಾತೆ ಯಕ್ಷಗಾನದಲ್ಲಿ ಅದ್ಭುತವಾದ ಮಹಿಷಾಸುರ ಪ್ರದರ್ಶನ ನೀಡಿದ್ದ ಈಶ್ವರ ಗೌಡ ಚೌಕಿಗೆ ಬಂದು ಬಣ್ಣ ತೆಗೆಯುವ ವೇಳೆ ತೀವ್ರ ಎದೆ ನೋವು ಬಂದು ಸಾವನ್ನಪ್ಪಿದ್ದಾರೆ.
ಮಹಿಷಾಸುರ ಪಾತ್ರ ಮಾಡುತ್ತಿದ್ದ ಈಶ್ವರ ಗೌಡ, ತುಂಬಾ ಸುಸ್ತಾಗಿರುವ ಬಗ್ಗೆ ರಂಗಸ್ಥಳದಲ್ಲೇ ದೇವಿ ಪಾತ್ರಧಾರಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ ಈಶ್ವರ ಗೌಡ ಸುಸ್ತಾಗಿರುವುದನ್ನು ಕಂಡು ದೇವಿ ಪಾತ್ರಧಾರಿ ಮಹಿಷ ವಧೆ ಸನ್ನಿವೇಶವನ್ನು ಬೇಗನೇ ಮುಗಿಸಿದ್ದಾರೆ ಎಂದು ಹೇಳಲಾಗಿದೆ. ನಂತರ ಈಶ್ವರ ಗೌಡ ಅವರು ಚೌಕಿ ಹೋಗಿ ಬಣ್ಣ ಕಳಚುವ ವೇಳೆ ಅವರು ಮೈ ತಣ್ಣಗಾಗುತ್ತಿದೆ, ಸುಸ್ತು, ಎದೆ ನೋವು, ರಕ್ತದೊತ್ತಡ ಕಡಿಮೆ ಆಗುತ್ತಿದೆ ಎಂದು ಸಹದ್ಯೋಗಿಗಳಲ್ಲಿ ಹೇಳಿದ್ದಾರೆ ಕೂಡಲೇ ಅವರನ್ನು ಬ್ಯಾಂಡ್ ಸೆಟ್ನವರ ಕಾರಿನಲ್ಲಿ ಆಸ್ಪತ್ರೆ ಕರೆದೊಯ್ಯಲಾಯಿತು. ಆದರೆ ಆದಾಗಲೇ ಅವರ ಜೀವ ಹೋಗಿದೆ.
ಇದನ್ನೂ ಓದಿ: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು: ಪುರುಷೋತ್ತಮ ಬಿಳಿಮಲೆ ವಿವಾದಾತ್ಮಕ ಹೇಳಿಕೆ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:44 am, Fri, 21 November 25