ಬಲೂನ್ ಊದುವಾಗ ಬಾಲಕ ದುರ್ಮರಣ: ನಂಬಲು ಅಸಾಧ್ಯ.. ಆದ್ರೂ ಸತ್ಯ …

ಸಾವು ಯಾರನ್ನು ಹೇಳಿ, ಕೇಳಿ ಬರುವುದಿಲ್ಲ. ಸಾವಿಗೆ ವಯಸ್ಸು, ಲಿಂಗ, ಜಾತಿ ಎಂಬ ಭೇದ ಭಾವವಿಲ್ಲ. ಸಾವು ಯಾವಾಗ ಬೇಕಾದರೂ ನಮ್ಮನ್ನು ಕರೆಯಬಹುದು. ಅದರಂತೆ ಬಲೂನ್ ಊದುತ್ತಿದ್ದ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಬಲೂನ್ ಊದುತ್ತಿದ್ದ ಬಾಲಕ ಸಾವನ್ನಪ್ಪಿದ್ದಾನೆ ಎಂದರೆ ನಂಬಲು ಅಸಾಧ್ಯ. ಆದರೂ ಸತ್ಯ.

ಬಲೂನ್ ಊದುವಾಗ ಬಾಲಕ ದುರ್ಮರಣ: ನಂಬಲು ಅಸಾಧ್ಯ.. ಆದ್ರೂ ಸತ್ಯ ...
ಪ್ರಾತಿನಿಧಿಕ ಚಿತ್ರ
Edited By:

Updated on: Dec 02, 2024 | 5:08 PM

ಕಾರವಾರ, (ಡಿಸೆಂಬರ್ 02): ಮನೆಯಲ್ಲಿ ಆಟವಾಡುತ್ತಾ ಬಲೂನ್ (Balloon) ಊದುವಾಗ ಗಂಟಲಲ್ಲಿ ಸಿಲುಕಿ 13 ವರ್ಷದ ಬಾಲಕ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಹಳಿಯಾಳ (Haliyala) ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ನಡೆದಿದೆ. ನವೀನ ನಾರಾಯಣ ಬೆಳಗಾಂವಕರ್ (13) ಮೃತ ಬಾಲಕ.

ನವೀನ್​​ ನಾರಾಯಣ ಬೆಳಗಾಂವಕರ ಜೋಗನಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತ್ತಿದ್ದ. ಮನೆಯಲ್ಲಿ ಆಟವಾಡುತಿದ್ದ ವೇಳೆ ಬಲೂನ್ ಊದುವಾಗ ಬಾಯಿಯ ಒಳಗೆ ಜಾರಿ ಗಂಟಲಲ್ಲಿ ಸಿಲುಕಿಕೊಂಡಿದೆ. ಕೂಡಲೇ  ಮನೆಯವರು ಬಲೂನ್ ತೆಗೆಯಲು ಎಷ್ಟೇ ಪ್ರಯತ್ನ ಪಟ್ಟರೂ ಪ್ರಯೋಜನವಾಗಿಲ್ಲ. ಕೊನೆಗೆ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯೆ ಬಾಲಕ ನವೀನ್​​​ ಕೊನೆಯುಸಿರೆಳೆದಿದ್ದಾನೆ.

ಇದನ್ನೂ ಓದಿ: ಪ್ರವಾಸಕ್ಕೆ ಹೋಗಿದ್ದ ರಾಮನಗರದ ವ್ಯಕ್ತಿ ದೆಹಲಿಯಲ್ಲಿ ನಾಪತ್ತೆ

ಬಲೂನ್ ಊದುತ್ತಿದ್ದ ಬಾಲಕ ಸಾವನ್ನಪ್ಪಿದ್ದಾನೆ ಎಂದರೆ ಯಾರು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಬಲೂನ್ ಗಂಟಲಿನಲ್ಲಿ ಸಿಲುಕಿದಾಗ ಬಾಲಕನಿಗೆ ಉಸಿರಾಡಲು ಸಾಧ್ಯವಾಗಿಲ್ಲ. ಹಳಿಯಾಳ‌ ತಾಲೂಕಿನ ಜೋಗನಕೊಪ್ಪ ಗ್ರಾಮದಲ್ಲಿ ಮೃತ ಬಾಲಕನ ಕುಟುಂಬಸ್ಥರು ಹಾಗೂ ಸಂಬಂಧಿಗಳ ರೋಧನ ಮುಗಿಲು ಮುಟ್ಟಿದ್ದು,ಸ್ಥಳಕ್ಕೆ  ಹಳಿಯಾಳ ಪೋಲಿಸರು ಭೇಟಿ ಣಿಡಿ ಪರಿಶೀಲನೆ ನಡೆಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.