ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದ ಸೂರಜ ಉತ್ತೂರೆ. ಕಸ್ತೂರಿ ವಾಹಿನಿಯಲ್ಲಿ ರಾಜಕೀಯ ವರದಿಗಾರನಾಗಿ ಪತ್ರಿಕೊದ್ಯಮ ಪ್ರವೇಶಿಸಿದ ಇವರು. ಡಿಸೆಂಬರ್ 2022 ರಂದು ಹಾವೇರಿ ಜಿಲ್ಲೆ tv9 ವರದಿಗಾರನಾಗಿ ಕೆಲಸ ಆರಂಭಿಸಿದ್ರು ನವೆಂಬರ್ 2023 ರಂದು ಉತ್ತರ ಕನ್ನಡ ಜಿಲ್ಲೆಗೆ ವರ್ಗಾವಣೆ ಆಗಿದ್ದೂ ಸದ್ಯ ಉತ್ತರ ಕನ್ನಡ ಜಿಲ್ಲೆಯ tv9 ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ.
ಕಮಲಾಕರ್ ಭಟ್-ಸುಚಿತ್ರಾ ರಂಗಿನಾಟಕ್ಕೆ ಅಮಾಯಕ ಬಲಿ: ಜೋಡಿ ಹಕ್ಕಿಗೆ ಕೋರ್ಟ್ ಶಾಕ್
ಕಿಲಾಡಿ ಲೇಡಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಲವ್ವಿಡವ್ವಿಗೆ ಅಮಾಯಕ ವಸಂತ ನಾಯ್ಕ ಬಲಿಯಾಗಿದ್ದು, ಈ ಪ್ರಕರಣ ಇಡೀ ರಾಜ್ಯವೇ ಬೆಚ್ಚಿಬೀಳುವಂತೆ ಮಾಡಿದೆ. ಇನ್ನು ಘಟನೆ ಬಳಿಕ ಸುಚಿತ್ರಾ ಹಾಗೂ ಕಮಲಾಕರನ ರಾಸಲೀಲೆಗಳು ಒಂದೊಂದಾಗಿಯೇ ಬಯಲಿಗೆ ಬರುತ್ತಿದ್ದು, ಇದೀಗ ಈ ಜೋಡಿ ಹಕ್ಕಿಗೆ ಜೈಲೇ ಗತಿಯಾಗಿದೆ. ಹಾಗಾದ್ರೆ, ಕೋರ್ಟ್ ಹೇಳಿದ್ದೇನು? ಎನ್ನುವ ವಿವರ ಇಲ್ಲಿದೆ.
- Suraj Mahaveer Utture
- Updated on: Feb 11, 2026
- 6:32 pm
ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನವನ್ನೇ ಬದಲಾಯಿಸಿದ್ದೇಗೆ ಕಮಲಾಕರ್ ಭಟ್ ಪರಿಚಯ? ಸತ್ಯ ಬಿಚ್ಚಿಟ್ಟ ಸ್ನೇಹಿತೆ
ಒಂದು ಕಾಲದಲ್ಲಿ 10 ರೂ. ಲಾಟರಿ ಹೊಡೆಯುತ್ತಿದ್ದ ಸುಚಿತ್ರಾ ಜೀವನ ಜ್ಯೋತಿಷಿ ಕಮಲಾಕರ ಭಟ್ ಪರಿಚಯದಿಂದ ಸಂಪೂರ್ಣ ಬದಲಾಗಿತ್ತು. ಹಣದ ಮೇಲಿನ ವ್ಯಾಮೋಹಕ್ಕೆ ಒಳಗಾಗಿದ್ದ ಈಕೆ ಪ್ರೀತಿಸಿ ಮದುವೆಯಾದವನಿಗೇ ಕೈಕೊಟ್ಟು ಬಂದಿದ್ದಳು. ಹೆತ್ತ ಮಕ್ಕಳ ಮೇಲೆಯೇ ದೌರ್ಜನ್ಯ ನಡೆಸುತ್ತಿದ್ದ ಸುಚಿತ್ರಾ, ಕಮಲಾಕರ್ ಭಟ್ನಿಂದ ಬೈಕ್ ಮತ್ತು ಕಾರುಗಳನ್ನು ಉಡುಗೊರೆಯಾಗಿ ಪಡೆದಿದ್ದಳು. ಆತನ ಆಶ್ರಮವನ್ನೂ ಈಕೆಯೇ ನೋಡಿಕೊಳ್ಳುತ್ತಿದ್ದಳು ಎಂಬ ವಿಚಾರವೀಗ ಬಯಲಾಗಿದೆ.
- Suraj Mahaveer Utture
- Updated on: Feb 10, 2026
- 6:29 pm
ಕಮಲಾಕರ ಭಟ್ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಾಮದಾಟ, ಕಳ್ಳಾಟ ಬಯಲಿಗೆ
ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕಮಲಕರ್ ಭಟ್ ಗುರೂಜಿ ಹಾಗೂ ಪ್ರೇಯಿಸಿ ಸುಚಿತ್ರಾಳ ವಿಚಿತ್ರ ಕಥೆಗಳು ಒಂದೊಂದಾಗಿಯೇ ಬಹಿರಂಗವಾಗುತ್ತಿವೆ. ಸುಚಿತ್ರಾಳಿಗೆ ಕಮಲಾಕರ ಭಟ್ ಒಬ್ಬನೇ ಅಲ್ಲ, ಪಡ್ಡೆ ಹುಡುಗರ ಜೊತೆಯೂ ನಂಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಕಮಲಾಕರ ಭಟ್ ಸಹ ಬೇರೊಬ್ಬ ಮಹಿಳೆ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇವರಿಬ್ಬರ ಕಾಮಪುರಾಣದ ಡಿಟೇಲ್ಸ್ ಇಲ್ಲಿದೆ.
- Suraj Mahaveer Utture
- Updated on: Feb 9, 2026
- 7:43 pm
ಕಲಾಕಾರ ಈ ಕಮಲಾಕರ: ಸುಚಿತ್ರಾಗಿಂತ ಮೊದಲು ಮತ್ತೊಬ್ಬಳ ಜೊತೆಗಿತ್ತು ಅಕ್ರಮ ಸಂಬಂಧ!; ಸ್ಪೋಟಕ ಆಡಿಯೋ ಲಭ್ಯ
ಜ್ಯೋತಿಷಿ ಕಮಲಾಕರ್ ಭಟ್ ಕಾಮಪುರಾಣದ ಮತ್ತೊಂದು ಮುಖ ಬಯಲಾಗಿದೆ. ಸುಚಿತ್ರಾ ಜೊತೆಗಿನ ಸಂಬಂಧಕ್ಕೂ ಮುನ್ನ, ಕಮಲಾಕರ್ ಭಟ್ ಶಿರಸಿ ಮೂಲದ ಮಹಿಳೆಯೊಬ್ಬರೊಂದಿಗೆ ಒಂಭತ್ತು ವರ್ಷಗಳ ಕಾಲ ಅಕ್ರಮ ಸಂಬಂಧ ಹೊಂದಿದ್ದರು ಎಂಬ ವಿಚಾರ ಬಹಿರಂಗಗೊಂಡಿದೆ. ಸುಚಿತ್ರಾ ಪರಿಚಯದ ಬಳಿಕ ಆ ಮಹಿಳೆಯನ್ನು ಕಮಲಾಕರ್ ನಿರ್ಲಕ್ಷಿಸಿದ್ದರು ಎನ್ನಲಾಗಿದೆ.
- Suraj Mahaveer Utture
- Updated on: Feb 9, 2026
- 12:50 pm
ಪಡ್ಡೆ ಹುಡುಗರ ಬಲೆಗೆ ಬೀಳಿಸಲು ಹೆಸರೇ ಬದಲಾಯಿಸಿದ್ದ ಸುಚಿತ್ರಾ! ಖತರ್ನಾಕ್ ಪ್ಲಾನ್ ರಹಸ್ಯ ಬಟಾಬಯಲು
ಕಮಲಾಕರ ಭಟ್ ಜತೆಗಿನ ಅಕ್ರಮ ಸಂಬಂಧಕ್ಕಾಗಿ ಮನೆಯವರನ್ನೇ ಕೊಲೆ ಮಾಡಿಸಿದ ಪ್ರಕರಣದಲ್ಲಿ ಜೈಲು ಸೇರಿರುವ ಸುಚಿತ್ರಾಳ ನಿಜ ಹೆಸರು ಬೇರೆಯೇ ಇದೆ ಎಂಬುದು ಬಹಿರಂಗವಾಗಿದೆ. ಆಕೆ ಹೆಸರು ಬದಲಾಯಿಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಯುವಕರನ್ನು ಬಲೆಗೆ ಬೀಳಿಸುತ್ತಿದ್ದಳು. ಸುಂದರ ಯುವಕರನ್ನು ಆಕರ್ಷಿಸಿ, ಸ್ನೇಹ ಬೆಳೆಸಿ, ಆರ್ಥಿಕ ಮಾಹಿತಿ ಕಲೆಹಾಕಿ ತನ್ನ ಮನೆಗೆ ಕರೆಯಿಸಿಕೊಳ್ಳುತ್ತಿದ್ದಳು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
- Suraj Mahaveer Utture
- Updated on: Feb 9, 2026
- 9:11 am
ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ
ಕಲರ್ಫುಲ್ ರೀಲ್ಸ್ ಮಾಡಿಕೊಂಡು ಸಂಸಾರದಿಂದ ದೂರವಾಗಿ ನೌಟಂಕಿ ಆಡುತ್ತಿದ್ದ ಕಲಾಕರ್ ಸುಚಿತ್ರಾ ಕಥೆಗಳೇ ಬೆಚ್ಚಿ ಬೀಳಿಸುವಂತಿವೆ. ಗಂಡ, ಮಕ್ಕಳಿಗಿಂತ ಜ್ಯೋತಿಷಿ ಕಮಲಾಕರ್ನೇ ಹೆಚ್ಚು ಅಂತಿದ್ದವಳಿಗೆ ಒಬ್ಬಿಬ್ಬರ ಸಹವಾಸ ಇರಲಿಲ್ವಂತೆ. ಸುಚಿತ್ರಾ ಮೊಬೈಲ್ ಇಣಕಿದ ಪೊಲೀಸರಿಗೆ ಆಕೆಯ ಸಂಪರ್ಕ ಕ್ರಾಂತಿಯೇ ಅನಾವರಣ ಆಗಿವೆ. ಹೌದು.. ಕಲಬುರಗಿಯ ಜಮೀನ್ದಾರನ ಜೊತೆ ಸುಚಿತ್ರಾ ಲವ್ ರಿಲೇಷನ್ ಬಟಾಬಯಲಾಗಿದೆ.
- Suraj Mahaveer Utture
- Updated on: Feb 8, 2026
- 6:52 pm
ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ
ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಪೋಕ್ಸೋ ಸಂತ್ರಸ್ತೆ ಬಾಲಕಿ ಆತ್ಮಹತ್ಯೆಗೆ ಯತ್ನಿಸಿದ್ದು, ರಕ್ಷಣಾ ವ್ಯವಸ್ಥೆಯ ಲೋಪ ಎತ್ತಿ ತೋರಿಸಿದೆ. ಮಾನಸಿಕ ಒತ್ತಡದಲ್ಲಿದ್ದ ಬಾಲಕಿಗೆ ನಿರಂತರ ಕೌನ್ಸೆಲಿಂಗ್ ಮತ್ತು ಸೂಕ್ತ ನಿಗಾ ವಹಿಸದಿರುವುದು ಘಟನೆಗೆ ಕಾರಣವಾಗಿದೆ. ಮಕ್ಕಳ ಕಲ್ಯಾಣ ಇಲಾಖೆಯು ಇಂತಹ ಕೇಂದ್ರಗಳಲ್ಲಿ ಮಕ್ಕಳ ಮಾನಸಿಕ ಸ್ವಾಸ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು ಮತ್ತು ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಈ ಘಟನೆ ಎಚ್ಚರಿಸಿದೆ.
- Suraj Mahaveer Utture
- Updated on: Feb 7, 2026
- 8:55 pm
ಬಸ್ ಫ್ರೀ ನೀಡಿ ದೊಡ್ಡ ಸಮಸ್ಯೆಯಾಗಿದೆ: ಬಿಜೆಪಿ ನಾಯಕರ ಮುಂದೆಯೇ ಗ್ಯಾರಂಟಿ ಬಗ್ಗೆ ವ್ಯಂಗ್ಯವಾಡಿದ ಕಾಂಗ್ರೆಸ್ ಶಾಸಕ ದೇಶಪಾಂಡೆ
ಆರ್.ವಿ. ದೇಶಪಾಂಡೆ ದಾಂಡೇಲಿಯಲ್ಲಿ ಬಿಜೆಪಿ ಸಚಿವ ವಿ. ಸೋಮಣ್ಣರನ್ನು ಶ್ಲಾಘಿಸಿ, ತಮ್ಮದೇ ಪಕ್ಷದ 'ಶಕ್ತಿ' ಯೋಜನೆ ಬಗ್ಗೆ ವ್ಯಂಗ್ಯವಾಡಿದ್ದಾರೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದಿಂದ ಪುರುಷರಿಗೆ ತೊಂದರೆಯಾಗುತ್ತಿದೆ ಎಂದು ಹಾಸ್ಯಭರಿತವಾಗಿ ಟೀಕಿಸಿದರು. ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆ ಸೃಷ್ಟಿಸಿದ್ದು, ಗ್ಯಾರಂಟಿ ಯೋಜನೆಗಳ ವಿರುದ್ಧ ಹಿರಿಯ ಕಾಂಗ್ರೆಸ್ ನಾಯಕನ ಅಸಮಾಧಾನವನ್ನು ಎತ್ತಿ ತೋರಿಸಿದೆ. ರೈಲು ಸಂಪರ್ಕ ಸುಧಾರಿಸಲು ಅವರು ಸಲಹೆ ನೀಡಿದ್ದಾರೆ.
- Suraj Mahaveer Utture
- Updated on: Feb 7, 2026
- 6:51 pm
ಕಡ್ಲೆಪುರಿ ಮಾರುತ್ತಿದ್ದ ಕಮಲಾಕರ ಭಟ್ ಜ್ಯೊತಿಷಿ ಆಗಿದ್ಹೇಗೆ? ಬಗೆದಷ್ಟೂ ಬಯಲಾಗ್ತಿದೆ ಬಂಡವಾಳ
ವೀಳ್ಯದೆಲೆ ಮತ್ತು ಕಡ್ಲೆಪುರಿ ಮಾರುತ್ತಿದ್ದ ಸಿದ್ದಾಪುರದ ಕಮಲಾಕರ ಭಟ್, ಕೇರಳದಲ್ಲಿ ಜ್ಯೋತಿಷ್ಯ ಕಲಿತು ಕೋಟ್ಯಾಧಿಪತಿ ಜ್ಯೋತಿಷಿಯಾಗಿ ಬೆಳೆದಿದ್ದು ಹೇಗೆಂಬ ಪ್ರಶ್ನೆ ಮೂಡಿದೆ. ಸುಚಿತ್ರಾ ಜತೆ ಸೇರಿ ಕೊಲೆ ಮಾಡಿದ ಪ್ರಕರಣದಲ್ಲಿ ಬಂಧಿತರಾದ ನಂತರ, ಭಟ್ ಪ್ರಭಾವಿ ಸ್ಥಾನ ಮತ್ತು ಅಕ್ರಮ ಸಂಪಾದನೆಯ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಿವೆ.
- Suraj Mahaveer Utture
- Updated on: Feb 7, 2026
- 1:32 pm
ಸುಚಿತ್ರಾಳ ಮೊಬೈಲ್ ರಹಸ್ಯ ಬಯಲು, ಈಕೆ ಸಂಪರ್ಕದಲ್ಲಿದ್ದವರಿಗೆ ಎಸ್ಪಿ ಮಹತ್ವದ ಕರೆ
ಕೊಲೆ ಪ್ರಕರಣದಲ್ಲಿ ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಪ್ರೇಯಸಿ ಸುಚಿತ್ರಾ ಜೈಲು ಸೇರಿದ್ದು, ಇದರ ಬೆನ್ನಲ್ಲೇ ಸುಚಿತ್ರಾ ಮತ್ತು ಜ್ಯೋತಿಷಿಯ ಅನೈತಿಕ ಸಂಬಂಧದ ಬಗ್ಗೆ ಒಂದಾಂದಾಗಿ ಸಾಕ್ಷಿಗಳು ಹೊರಬರುತ್ತಿವೆ. ಇಬ್ಬರು ಮಾತನಾಡಿದ್ದಾರೆ ಎನ್ನಲಾದ ರಾಸಲೀಲೆ ಆಡಿಯೋ ರಿಲೀಸ್ ಆಗಿರುವುದು ಒಂದೇಡೆ ಆಗಿದ್ರೆ, ಇನ್ನೊಂದೆಡೆ ಸುಚಿತ್ರಾಳ ಇನ್ಸ್ಠಾ ಬಯೋ ಅನುಮಾನ ಹೆಚ್ಚಿಸಿದೆ. ಇದರ ನಡುವೆ ಇದೀಗ ಸುಚಿತ್ರಾಳ ಮೊಬೈಲ್ ರಹಸ್ಯ ಸಹ ಬಯಲಿಗೆ ಬಂದಿದೆ.
- Suraj Mahaveer Utture
- Updated on: Feb 6, 2026
- 4:32 pm
ರೀಲ್ಸ್ ರಾಣಿ ಸುಚಿತ್ರಾ ಜೊತೆ ಸಂಕರ್ಪಕದಲ್ಲಿದ್ದ ಯುವಕರಿಗೂ ಶಾಕ್!
ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಪೊಲೀಸ್ ತನಿಖೆ ವೇಳೆ ರೀಲ್ಸ್ ರಾಣಿ ಸುಚಿತ್ರಾ ಹಲವು ಯುವಕರೊಂದಿಗೆ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದ ನಂತರ ಸುಚಿತ್ರಾ ಪತಿ ಹೇಳಿಕೆ ಬೆನ್ನಲ್ಲೇ ಆತಂಕಕ್ಕೊಳಗಾದ ಯುವಕರು ತಮ್ಮ ಇನ್ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿ, ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ತನಿಖೆ ಮುಂದುವರಿದಿದೆ.
- Suraj Mahaveer Utture
- Updated on: Feb 6, 2026
- 12:44 pm
‘ಅವಳಿಗಾಗಿ ನಾಯಿ ತರ ಅಲೆದಾಡಿದ್ದೆ’: ಕಮಲಾಕರನ ಒಂದೊಂದೇ ರಂಗಿನಾಟ ಬಯಲು!
ಜ್ಯೋತಿಷಿ ಕಮಲಾಕರ್ ಭಟ್ ಹಾಗೂ ಸುಚಿತ್ರಾ ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದು, ಅವರ ಅಕ್ರಮ ಸಂಬಂಧದ ರಹಸ್ಯಗಳು ಒಂದೊಂದಾಗಿ ಬಯಲಾಗುತ್ತಿವೆ. ಕಮಲಾಕರ್ ಸುಚಿತ್ರಾಳ ಹಿಂದೆ ಬಿದ್ದಿದ್ದ ಪರಿ, ಸುಚಿತ್ರಾಳ ಹಣದ ಆಸಕ್ತಿ ವೈರಲ್ ಆಡಿಯೋ ಮತ್ತು ಸಾಮಾಜಿಕ ಮಾಧ್ಯಮದ ಬಯೋ ಮೂಲಕ ಬಹಿರಂಗಗೊಂಡಿವೆ.
- Suraj Mahaveer Utture
- Updated on: Feb 6, 2026
- 10:42 am