AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಮಲಾಕರ ಭಟ್​​​ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಾಮದಾಟ, ಕಳ್ಳಾಟ ಬಯಲಿಗೆ

ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ಕಮಲಕರ್ ಭಟ್ ಗುರೂಜಿ ಹಾಗೂ ಪ್ರೇಯಿಸಿ ಸುಚಿತ್ರಾಳ ವಿಚಿತ್ರ ಕಥೆಗಳು ಒಂದೊಂದಾಗಿಯೇ ಬಹಿರಂಗವಾಗುತ್ತಿವೆ. ಸುಚಿತ್ರಾಳಿಗೆ ಕಮಲಾಕರ ಭಟ್ ಒಬ್ಬನೇ ಅಲ್ಲ, ಪಡ್ಡೆ ಹುಡುಗರ ಜೊತೆಯೂ ನಂಟಿತ್ತು ಎಂದು ಹೇಳಲಾಗುತ್ತಿದೆ. ಇನ್ನು ಕಮಲಾಕರ ಭಟ್ ಸಹ ಬೇರೊಬ್ಬ ಮಹಿಳೆ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇವರಿಬ್ಬರ ಕಾಮಪುರಾಣದ ಡಿಟೇಲ್ಸ್ ಇಲ್ಲಿದೆ.

ಕಮಲಾಕರ ಭಟ್​​​ಗೆ ಮತ್ತೋರ್ವ ಮಹಿಳೆ, ಪಡ್ಡೆ ಹುಡುಗರ ಜತೆ ಸುಚಿತ್ರಾ: ಇಬ್ಬರ ಕಾಮದಾಟ, ಕಳ್ಳಾಟ ಬಯಲಿಗೆ
Suchitra And Kamalakara Bhat
ಸೂರಜ್​, ಮಹಾವೀರ್​ ಉತ್ತರೆ
| Edited By: |

Updated on:Feb 09, 2026 | 7:43 PM

Share

ಕಾರವಾರ, (ಫೆಬ್ರವರಿ 09): ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣದ (Vasanth Naik Murder Case) ರೂವಾರಿಗಳಾದ ಕಮಲಾಕರ ಭಟ್ (Kamalakar Bhat) ಮತ್ತು ಸುಚಿತ್ರ (Sucitra) ಗ್ಯಾಂಗ್ ಅಂದರ್ ಆಗಿ ಬರೋಬ್ಬರಿ ಇವತ್ತು ಏಳು ದಿನ. ಈ ‌ನಡುವೆ ಇಬ್ಬರ ಕಳ್ಳಾಟದ ಆಡಿಯೋ, ಪೊಟೋಗಳು ಒಂದೊಂದೆ ಆಗಿ ರಿವೀಲ್ ಆಗುತ್ತಿವೆ. ಹೌದು.. ರೀಲ್ಸ್ ರಾಣಿ ಸುಚಿತ್ರಳ ನವಟಂಕಿ ಆಟಗಳು ಒಂದೆರಡಲ್ಲ, ಇದರ‌ ಬಲೆಯಲ್ಲಿ ಬಿದ್ದು ಮೋಸ‌ಹೋದ‌ ಅದೆಷ್ಟೋ ಯುವಕರ ಗುಂಪೇ ಇದೆ. ಆದ್ರೆ ಮರ್ಯಾದೆಗೆ ಅಂಜಿ ಯಾವುದು ಪ್ರಕರಣ ಬೆಳಕಿಗೆ ಬರುತ್ತಿಲ್ಲ. ಈ ನಡುವೆ ಸುಚಿತ್ರ ಪರ ಪುರುಷರ ಸಹವಾಸ ಮಾಡಿ ವಂಚಿಸಲು ಏನೆಲ್ಲ ಪ್ಲ್ಯಾನ್ ಮಾಡಿದ್ದಳು ಎಂದು ಒಮ್ಮೆ ಕೆದಕಿದ್ರೆ ಒಂದು ದೊಡ್ಡ ಸರಣಿ ಪುಟವೇ ತೆರೆದುಕೊಳ್ಳುತ್ತದೆ. ಮದುವೆ ಆಗಿದ್ದ ಸುಚಿತ್ರಾ ಹುಡುಗರನ್ನ ಬಿಳಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದ್ದಳಂತೆ. ಪಡ್ಡೆ ಹುಡುಗರಿಗಾಗಿ ತನ್ನ ಹೆಸರನ್ನೆ ಬದಲಿಸಿಕೊಂಡಿದ್ದಳಂತೆ ಸುಚಿತ್ರ. ಸುರೇಖಾ ಅಂತ ಇದ್ದ ತನ್ನ ಹೆಸರನ್ನ ಸುಚಿತ್ರಾ ಅಂತ ಮಾಡಿಕೊಂಡಿದ್ದು, ಮದುವೆ ಸರ್ಟಿಫಿಕೇಟ್ ನಲ್ಲಿ ಅವಳದ್ದು ಸುರೇಖಾ ಅಂತ ಹೆಸರಿದೆ, ಆ ಸುರೇಖಾ ನನ್ನ ಅಕ್ಕ ಅಂತ ತನ್ನ ಫೋಟೋ ವನ್ನೆ ತೊರಿಸುತ್ತಿದ್ದಳಂತೆ.

ಜ್ಯೋತಿಷ್ಯ ಹೇಳ್ಕೊಂಡಿದ್ದ ಕಮಲಾಕರ ಭಟ್ರು, ಶಿರಸಿ ಮೂಲದ ಮಹಿಳೆ ಜೊತೆ 9 ವರ್ಷ ಸಂಬಂಧದಲ್ಲಿದ್ರಾ? ಈ ವಿಷ್ಯ ತಿಳಿದು ಸುಚಿತ್ರಾ, ಕಮಲಾಕರ ಭಟ್ರಿಗೆ ಕ್ಲಾಸ್ ತೆಗೆದುಕೊಂಡಿದ್ರಾ? ಭಟ್ರಿಗೆ ಆ ಮಹಿಳೆ ಕರೆ ಮಾಡಿದ್ದಕ್ಕೆ ಸುಚಿತ್ರಾ ಸಿಟ್ಟಿಗೆದ್ದಿದ್ಲಾ? ಇಷ್ಟೆಲ್ಲಾ ಆದ್ಮೇಲೆ ಶಿರಸಿ ಮೂಲದ ಮಹಿಳೆಯನ್ನ ಕಮಲಾಕರ ಭಟ್ರು ದೂರವಿಟ್ಟುಬಿಟ್ರಾ? ಸುಚಿತ್ರಾಗಾಗಿ ಆ ಮಹಿಳೆಗೆ ಕಮಲಾಕರ ಭಟ್ ಅವಾಚ್ಯ ಶಬ್ಧಗಳಿಂದಲೂ ನಿಂದಿಸಿದ್ರಾ? ಎನ್ನುವ ಅನುಮಾನ ಶುರುವಾಗಿದೆ. ಇದಕ್ಕೆ ಪುಷ್ಠಿ ನೀಡುವಂತೆ ಆಡಿಯೋವೊಂದು ವೈರಲ್ ಆಗಿದೆ. ಮತ್ತೊಂದೆಡೆ ರೀಲ್ಸ್ ರಾಣಿ ಸುಚಿತ್ರಾ ನೌಟಂಕಿ ಆಟಗಳನ್ನಾಡುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಕಮಲಾಕರ್ ಭಟ್ ಮಾತ್ರವಲ್ಲ, ಕಲಬುರಗಿಯ ಜಮೀನ್ದಾರನ ಜೊತೆಗೂ ಸುಚಿತ್ರಾ ಲವ್ವಿಡವ್ವಿ

ಪಡ್ಡೆ ಹುಡುಗರಿಗೆ ಗಾಳ ಹಾಕ್ತಿದ್ದ ಸುಚಿತ್ರಾ

ಮದುವೆ ಆಗಿದ್ರೂ ಪಡ್ಡೆ ಹುಡುಗರಿಗೆ ಗಾಳ ಹಾಕುತ್ತಿದ್ದಳಂತೆ. ಇದಕ್ಕಾಗೇ ಸುರೇಖಾ ಅಂತಿದ್ದ ಹೆಸರನ್ನ ಸುಚಿತ್ರಾ ಅಂತ ಬದಲಿಸಿದ್ದಳು. ಸುರೇಖಾ ನನ್ನ ಅಕ್ಕ ಅಂತ ತನ್ನದೇ ಫೋಟೋ ತೋರಿಸಿ, ನಾವಿಬ್ಬರೂ ಟ್ವಿನ್ಸ್ ಆಗಿದ್ವಿ ಎಂದು ಕಥೆ ಕಟ್ಟಿದ್ದಳು. ಅಕ್ಕ ಸಾವನ್ನಪ್ಪಿದ ಬಳಿಕ ಮಕ್ಕಳನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಈ ಮಕ್ಕಳ ತಂದೆ ಮಹೇಶ್ ಬೆಂಗಳೂರಿನಲ್ಲಿ ಇರ್ತಾರೆ ಎಂದು ಒಂದೊಂದೇ ರೀಲ್ ಬಿಡುತ್ತಾ ಯುವಕರಿಗೆ ಗಾಳ ಹಾಕಿದ್ದಾಳೆ.

ಚೆಂದದ ಯುವಕರ ಫೋಟೋಗೆ ತಾನೇ ಕಮೆಂಟ್ ಹಾಕುತ್ತಿದ್ದ ಸುಚಿತ್ರಾ, ಪ್ರೀತಿ ಹೆಸರಲ್ಲಿ ತಲೆ ಕೆಡಿಸಿ, ತನ್ನ ಬಲೆಗೆ ಹಾಕಿಕೊಂಡು ಸುಲಿಗೆ ಮಾಡುತ್ತಿದ್ದಳು ಎನ್ನಲಾಗಿದೆ. ಇಷ್ಟೇ ಅಲ್ಲದೇ ಯುವಕರ ಬಳಿ ತನ್ನ ಕಷ್ಟವನ್ನೆಲ್ಲಾ ಹೇಳಿಕೊಂಡು, ನೇರವಾಗಿ ತನ್ನ ಮನೆಗೆ ಕರೆಯುತ್ತಿದ್ದಳು ಎನ್ನುವುದು ಸಹ ಗೊತ್ತಾಗಿದೆ.

ಕಮಲಾಕರ್ ಭಟ್ ನ ಪುರಾಣ

ಇನ್ನು ಇವಳದ್ದು ಒಂದು ಕಥೆಯಾದ್ರೆ ಈಕೆಯ ಪ್ರಿಯಕರ ಕಮಲಾಕರ್ ಭಟ್ ನ ಪುರಾಣವೇ ಇನ್ನೊಂದು. ಕಮಲಾಕರ ಭಟ್ ಕಾಮಪುರಾಣದ ಆಡಿಯೋ ರಿಲೀಸ್ ಆಗಿದ್ದು, ಜೀವನ ಪೂರ್ತಿ ಇರುವುದಾದ್ರೆ ಇವಳ ಜೊತೆಗೆ ಎಂದಿರುವ ಕಮಲಾಕರ ಭಟ್, ದಿನ ಬಂದು ಹೋಗುವವರ ತರ ಇವಳಲ್ಲ ಎಂದಿರುವ ಆಡಿಯೋ‌ ಈಗ ಸಖತ್ ವೈರಲ್ ಆಗಿತ್ತಿದೆ. ಸುಚಿತ್ರಳ ಚಪ್ಪಲಿ ಎಷ್ಟು ಪ್ರಮಾಣದಲ್ಲಿದೆ ಅದು ಕೂಡ ನಂಗೆ ಗೊತ್ತು ಎಂದಿರುವ ಭಟ್, ಸುಚಿತ್ರಳನ್ನ ಬಿಟ್ಟುಕೊಡೋಕೆ ಆಗದ ರೀತಿಯಲ್ಲಿ ಮಾತಾಡಿದ್ದಾನೆ. ಆದ್ರೆ ಈತ ಸುಚಿತ್ರಳ ಮೊದಲು ಇನ್ನೊಂದು ಮಹಿಳೆಯ ಜೊತೆ ಸಂಬಂಧ ಹೊಂದಿದ್ದನಂತೆ. 9 ವರ್ಷ ಕಾಲ ಶಿರಸಿ ಮೂಲದ ಮಹಿಳೆಯ ಜೊತೆಗೆ ಇದ್ದ ಕಮಲಾಕರ ಜೀವನದಲ್ಲಿ, ಸುಚಿತ್ರಾ ಎಂಟ್ರಿ ಕೊಟ್ಟ ಬಳಿಕ ಆ ಮಹಿಳೆಯನ್ನ ಕಮಲಾಕರ ದೂರ ಮಾಡಿದ್ದ ಎಂಬ ಆರೋಪ ಇದೆ. ಸುಚಿತ್ರ ಎಂಟ್ರಿಯಾದ ಮೇಲೆ ಕಮಲಾಕರನಿಗೆ ಆಗಾಗ ಕರೆ ಮಾಡುತ್ತಿದ್ದಳಂತೆ ಆ ಶಿರಸಿ ಮಹಿಳೆ. ಮಹಿಳೆ ಕರೆ ಮಾಡುವುದು ಸುಚಿತ್ರಾಗೆ ಗೊತ್ತಾದ ಬಳಿಕ ಭಟ್ ನಿಗೆ ಕ್ಲಾಸ್ ತೊಗೊಂಡಿದ್ದಳಂತೆ. ಸುಚಿತ್ರಾಳ ಭಯಕ್ಕೆ ಭಟ್, ಆಕೆಯ ಮುಂದೆಯೇ ಮಹಿಳೆಗೆ ಆಡಿಯೋ ಮೆಸೆಜ್ ಕಳಿಸಿದ್ದನಂತೆ . ಸುಚಿತ್ರ ಖೆಡ್ಡಾಗೆ ಬಿದ್ದ ಬಳಿಕ ಶಿರಸಿ ಮೂಲದ ಮಹಿಳೆಯನ್ನ ಸಂಪೂರ್ಣವಾಗಿ ತಿರಸ್ಕರಿಸಿದ್ದ ಎಂದು ತಿಳಿದುಬಂದಿದೆ.

ಒಟ್ಟಾರೆ ಸಿದ್ದಾಪುರ ವಸಂತ್ ನಾಯ್ಕ್‌ ಕೊಲೆಯಾದ ಬಳಿಕ ಸುಚಿತ್ರಾ ಮತ್ತು ಕಮಲಾಕರ ಭಟ್ ಹಿಂದಿನ ಒಂದೊಂದೆ ಕಮದಾಟ, ಕಳ್ಳಾಟ ಬಯಲಿಗೆ ಬೀಳುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:35 pm, Mon, 9 February 26

Follow Us
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
ಒಳಮೀಸಲಾತಿ ಹುದ್ದೆಗಳ ರೋಸ್ಟರ್ ಬಿಂದು ಸಮಸ್ಯೆ: ಮುನಿಯಪ್ಪ ಹೇಳಿದ್ದಿಷ್ಟು
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
Live: ಚಿತ್ರದುರ್ಗದಲ್ಲಿ ಬಿಎಸ್​ವೈ ಅಭಿಮಾನೋತ್ಸವ ನೇರ ಪ್ರಸಾರ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಬಿಎಸ್​​ವೈ ಅಭಿಮಾನೋತ್ಸವ: ಕಾರ್ಯಕರ್ತರು, ಅಭಿಮಾನಿಗಳಿಗೆ ಭರ್ಜರಿ ಭೋಜನ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಕೆರೆ ಏರಿಯ ಮೇಲೆ ಮದುವೆ ದಿಬ್ಬಣದ ಬಸ್​​ ಪಲ್ಟಿ: ತಪ್ಪಿದ ಭಾರಿ ಅನಾಹುತ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಬಿಜೆಪಿಯನ್ನು ಗೆಲ್ಲಿಸಿದ ಬಂಗಾಳದ ಜನತೆಗೆ ಪ್ರಧಾನಿ ಮೋದಿ ಶಿರ ಬಾಗಿ ನಮಸ್ಕಾರ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಇಂದು ಪ್ರಮಾಣವಚನ ಸ್ವೀಕರಿಸಿದ ಬಂಗಾಳದ ಬಿಜೆಪಿ ಸಚಿವರ ಪಟ್ಟಿ ಇಲ್ಲಿದೆ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಉಪೇಂದ್ರ ಚುನಾವಣೆಗೆ ಏಕೆ ನಿಲ್ಲಲ್ಲ? ಉತ್ತರಿಸಿದ ನಟ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್
Live: ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ; ಅಧಿಕಾರ ಸ್ವೀಕಾರ ಲೈವ್