AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರತಿದಿನ ವೈಟ್ ರೈಸ್ ತಿನ್ನುತ್ತಿದ್ದೀರಾ? ತೂಕ ನಿಯಂತ್ರಣಕ್ಕೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ

ಅನ್ನವಿಲ್ಲದೆ ಊಟ ಅಪೂರ್ಣ. ಆದರೆ ವೈಟ್ ರೈಸ್ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಇದು ನಿಜವಾಗಿಯೂ ಸತ್ಯವೇ? ವೈಟ್ ರೈಸ್ ಸೇವನೆಗಿಂತ ಬ್ರೌನ್ ರೈಸ್‌ ಆರೋಗ್ಯಕ್ಕೆ ಒಳ್ಳೆಯದೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಉತ್ತಮ. ಹಾಗಾದರೆ ಆರೋಗ್ಯ ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ? ವೈಟ್ ರೈಸ್ ತಿನ್ನುವುದರಿಂದ ತೂಕ ಹೆಚ್ಚಾಗುತ್ತದೆಯೇ ತಿಳಿದುಕೊಳ್ಳಿ.

ಪ್ರತಿದಿನ ವೈಟ್ ರೈಸ್ ತಿನ್ನುತ್ತಿದ್ದೀರಾ? ತೂಕ ನಿಯಂತ್ರಣಕ್ಕೆ ಈ ಸಲಹೆಗಳನ್ನು ತಪ್ಪದೇ ಪಾಲಿಸಿ
White Rice Vs Brown RiceImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Jul 29, 2026 | 9:54 PM

Share

ಮುಖ್ಯಾಂಶಗಳು

  • ತೂಕ ನಿಯಂತ್ರಣಕ್ಕೆ ಅನುಸರಿಸಬೇಕಾದ ಆರೋಗ್ಯಕರ ಅಭ್ಯಾಸಗಳು
  • ಅನ್ನ ತಿಂದರೆ ದಪ್ಪ ಆಗುತ್ತೀರಾ? ವೈಟ್ ರೈಸ್ ಬಗ್ಗೆ ಇರುವ ತಪ್ಪು ಕಲ್ಪನೆಗೆ ಇಲ್ಲಿದೆ ಉತ್ತರ
  • ಯಾರು ವೈಟ್ ರೈಸ್ ಮಿತವಾಗಿ ಸೇವಿಸಬೇಕು?

ಭಾರತೀಯರ ಆಹಾರದಲ್ಲಿ ಅನ್ನಕ್ಕೆ ಪ್ರಮುಖ ಸ್ಥಾನವಿದೆ. ಕರ್ನಾಟಕ ಸೇರಿದಂತೆ ದೇಶದ ಬಹುತೇಕ ಮನೆಗಳಲ್ಲಿ ಪ್ರತಿದಿನ ಬಿಳಿ ಅಕ್ಕಿ ಅಂದರೆ ವೈಟ್ ರೈಸ್ ಸೇವಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರು ಈ ವೈಟ್ ರೈಸ್ ಅಕ್ಕಿ ತಿಂದರೆ ದಪ್ಪಗಾಗುತ್ತಾರೆ ಎಂದು ತಿಳಿದು ಅನ್ನ ಸೇವನೆ ಮಾಡುವುದನ್ನೇ ಸಂಪೂರ್ಣವಾಗಿ ಬಿಡುತ್ತಿದ್ದಾರೆ. ಆದರೆ ಪೌಷ್ಟಿಕ ತಜ್ಞರ ಪ್ರಕಾರ, ಕೇವಲ ವೈಟ್ ರೈಸ್ ತಿನ್ನುವುದರಿಂದ ತೂಕ ಹೆಚ್ಚುವುದಿಲ್ಲ. ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚು ಕ್ಯಾಲೊರಿಗಳನ್ನು ದೀರ್ಘಕಾಲ ಸೇವಿಸಿದಾಗ ಮಾತ್ರ ತೂಕ ಹೆಚ್ಚಾಗುತ್ತದೆ. ಅಂದರೆ, ತೂಕ ಹೆಚ್ಚಲು ಒಂದೇ ಒಂದು ಆಹಾರ ಕಾರಣವಲ್ಲ; ಒಟ್ಟಾರೆ ಆಹಾರ ಪದ್ಧತಿ, ಜೀವನಶೈಲಿ ಮತ್ತು ದೈಹಿಕ ಚಟುವಟಿಕೆ ಪ್ರಮುಖ ಪಾತ್ರ ವಹಿಸುತ್ತವೆ.

ವೈಟ್ ರೈಸ್ ತೂಕ ಹೆಚ್ಚಿಸುತ್ತದೆಯೇ?

ಡಯಟಿಷಿಯನ್‌ಗಳ ಪ್ರಕಾರ, ಬಿಳಿ ಅಕ್ಕಿ ಅಥವಾ ವೈಟ್ ರೈಸ್ ಕಾರ್ಬೋಹೈಡ್ರೇಟ್‌ನ ಉತ್ತಮ ಮೂಲವಾಗಿದೆ. ಕಾರ್ಬೋಹೈಡ್ರೇಟ್ ದೇಹಕ್ಕೆ ಶಕ್ತಿ ಒದಗಿಸುವ ಪ್ರಮುಖ ಪೋಷಕಾಂಶವಾಗಿದೆ. ಹೌದು, ಬ್ರೌನ್ ರೈಸ್‌ಗಿಂತ ವೈಟ್ ರೈಸ್ ಫೈಬರ್ ಪ್ರಮಾಣ ಕಡಿಮೆ ಇರುತ್ತದೆ. ಕಾರಣ, ಅಕ್ಕಿಯನ್ನು ಹೆಚ್ಚು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಹೊರಪದರ ತೆಗೆದುಹಾಕಲಾಗುತ್ತದೆ. ಹಾಗಾಗಿ ಇದರ ಸೇವನೆ ಹೊಟ್ಟೆ ಬೇಗ ಖಾಲಿಯಾಗುವ ಅನುಭವವಾಗಬಹುದು ಹೊರತು ಬಿಳಿ ಅಕ್ಕಿ ಆರೋಗ್ಯಕ್ಕೆ ಹಾನಿಕಾರಕವಲ್ಲ.

ಸಂಶೋಧನೆಗಳು ಏನು ಹೇಳುತ್ತವೆ?

ಕೆಲವು ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೈಟ್ ರೈಸ್ ಸೇವಿಸುವುದು ಮತ್ತು ತೂಕ ಹೆಚ್ಚಾಗುವುದು ನಡುವೆ ಸಂಬಂಧ ಕಂಡುಬಂದಿದೆ. ಆದರೆ ಹಲವು ಸಂಶೋಧನೆಗಳಲ್ಲಿ ಅಂತಹ ಸ್ಪಷ್ಟ ಸಂಬಂಧ ಕಂಡುಬಂದಿಲ್ಲ. ಹೀಗಾಗಿ, ತೂಕ ಹೆಚ್ಚಲು ಕೇವಲ ಬಿಳಿ ಅಕ್ಕಿಯೇ ಕಾರಣ ಎಂಬುದಕ್ಕೆ ವೈಜ್ಞಾನಿಕ ಪುರಾವೆಗಳಿಲ್ಲ.

ಅನ್ನವನ್ನು ಯಾವ ರೀತಿಯಲ್ಲಿ ಸೇವಿಸಬೇಕು?

  • ಅನ್ನದ ಜೊತೆಗೆ ಬೇಳೆ ಅಥವಾ ಸಾಂಬಾರ್
  • ಹಸಿರು ತರಕಾರಿ
  • ಮೊಸರು
  • ಮೊಟ್ಟೆ
  • ಮೀನು ಅಥವಾ ಚಿಕನ್
  • ಸಲಾಡ್ ಇವುಗಳನ್ನು ಸೇರಿಸಿದರೆ ಪ್ರೋಟೀನ್, ಫೈಬರ್ ಹಾಗೂ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿರುತ್ತದೆ ಮತ್ತು ರಕ್ತದಲ್ಲಿನ ಸಕ್ಕರೆಯ ಮಟ್ಟವೂ ಸ್ಥಿರವಾಗಿರಲು ಸಹಾಯವಾಗುತ್ತದೆ.

ಇದನ್ನೂ ಓದಿ: ಐಸ್‌ಕ್ರೀಮ್ ತಿಂದ ಬಳಿಕ ವೈದ್ಯರು ಹೇಳುವ 5 ಆರೋಗ್ಯ ಸಲಹೆಗಳನ್ನು ತಪ್ಪದೆ ಪಾಲಿಸಿ

ಅನ್ನ ಬೇಯಿಸುವ ವಿಧಾನವೂ ಮುಖ್ಯ:

ಎಣ್ಣೆಯಲ್ಲಿ ಫ್ರೈ ಮಾಡಿದ ರೈಸ್ ಅಥವಾ ಹೆಚ್ಚು ತುಪ್ಪ, ಬೆಣ್ಣೆ ಸೇರಿಸಿದ ಅನ್ನಕ್ಕಿಂತ ಸರಳವಾಗಿ ಬೇಯಿಸಿದ ಅನ್ನ ಉತ್ತಮ. ತುಂಬಾ ಎಣ್ಣೆ, ತುಪ್ಪ ಅಥವಾ ಹೆಚ್ಚು ಕ್ಯಾಲೊರಿ ಇರುವ ಪಲಾವ್, ಬಿರಿಯಾನಿಗಳನ್ನು ಆಗಾಗ ಸೇವಿಸಿದರೆ ತೂಕ ಹೆಚ್ಚುವ ಸಾಧ್ಯತೆ ಇರುತ್ತದೆ.

ತೂಕ ನಿಯಂತ್ರಣಕ್ಕೆ ಈ ಅಭ್ಯಾಸಗಳನ್ನು ಪಾಲಿಸಿ

  • ಒಮ್ಮೆಲೇ ಹೆಚ್ಚು ಅನ್ನ ಸೇವನೆ ಮಾಯುವುದಕ್ಕಿಂತ ಮಿತ ಪ್ರಮಾಣದಲ್ಲಿ ಸೇವಿಸಿ.
  • ಊಟದಲ್ಲಿ ತರಕಾರಿ ಮತ್ತು ಸಲಾಡ್ ಇರಲಿ.
  • ಬೇಳೆ, ಕಡಲೆ, ಮೊಟ್ಟೆ, ಮೀನು, ಕೋಳಿ ಅಥವಾ ಪನೀರ್ ಸೇರಿಸುವುದರಿಂದ ಬೇಗ ಹಸಿವಾಗುವುದಿಲ್ಲ.
  • ವಾರಕ್ಕೆ ಕನಿಷ್ಠ 150 ನಿಮಿಷ ದೈಹಿಕ ಚಟುವಟಿಕೆ ಮಾಡಿ.
  • ಸಾಫ್ಟ್ ಡ್ರಿಂಕ್ಸ್, ಸಿಹಿ ಪದಾರ್ಥಗಳು ಮತ್ತು ಪ್ಯಾಕೆಟ್ ಜ್ಯೂಸ್‌ಗಳ ಸೇವನೆಯನ್ನು ಮಿತಗೊಳಿಸಿ.

ಯಾರು ವೈಟ್ ರೈಸ್ ಮಿತವಾಗಿ ಸೇವಿಸಬೇಕು?

  • ಮಧುಮೇಹ ಇರುವವರು
  • ಸ್ಥೂಲಕಾಯ ಸಮಸ್ಯೆ ಇರುವವರು
  • ಮೆಟಾಬಾಲಿಕ್ ಸಿಂಡ್ರೋಮ್ ಇರುವವರು ಇಂತಹವರು ವೈದ್ಯರು ಅಥವಾ ಪೌಷ್ಟಿಕ ತಜ್ಞರ ಸಲಹೆಯಂತೆ ಆಹಾರದ ಪ್ರಮಾಣವನ್ನು ನಿಗದಿಪಡಿಸಿಕೊಳ್ಳುವುದು ಸೂಕ್ತ.

ಗಮನಿಸಿ: ಬಿಳಿ ಅಕ್ಕಿಯನ್ನು ಸಂಪೂರ್ಣವಾಗಿ ಬಿಡುವುದರಿಂದ ಮಾತ್ರ ತೂಕ ಇಳಿಯುವುದಿಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಉತ್ತಮ ನಿದ್ರೆ, ಒತ್ತಡ ನಿಯಂತ್ರಣ ಮತ್ತು ಮಿತ ಪ್ರಮಾಣದ ಆಹಾರ ಸೇವನೆಯೇ ಆರೋಗ್ಯಕರ ತೂಕ ಕಾಪಾಡಿಕೊಳ್ಳಲು ಪ್ರಮುಖ ಮಾರ್ಗಗಳಾಗಿವೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ರಾಜ್ಯದ ಜಲ ಪ್ರದೇಶ ನೋಡಲು ತಮಿಳುನಾಡು ಸಿಎಂಗೆ ಹೆಲಿಕಾಪ್ಟರ್ ವ್ಯವಸ್ಥೆ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ
ಸಿನಿಮಾಕ್ಕೆ ‘ಲವ್ ಕಾಕ್ಟೆಲ್’ ಎಂದು ಹೆಸರಿಟ್ಟಿದ್ದೇಕೆ? ಹರೀಶ್ ರಾಜ್ ಉತ್ತರ