Health Tips
ಇತ್ತೀಚಿಗೆ ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಿನ ದಿನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಅದಕ್ಕಿಂತ ಬೇರೆ ಸಂಪತ್ತು ಬೇಕಾಗಿಲ್ಲ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ನಾವು ಸೇವಿಸುವ ಆಹಾರವೂ ಸರಿಯಾಗಿ ಇರಬೇಕಾಗುತ್ತದೆ. ಅನಾರೋಗ್ಯವನ್ನು ದೂರವಿಡುವುದು ಮತ್ತು ಬರಮಾಡಿಕೊಳ್ಳುವುದು ಎರಡು ನಮ್ಮ ಕೈಯಲ್ಲಿ ಇರುವುದರಿಂದ ನಮ್ಮ ದೈನಂದಿನ ಅಭ್ಯಾಸಗಳು ಆರೋಗ್ಯಕರವಾಗಿ ಇರುವುದು ಬಹಳ ಒಳಿತು. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆ, ಮತ್ತಿಷ್ಟು ಔಷಧಿಗಳ ಮೊರೆ ಹೋಗುವ ಬದಲು ನಾವು ನೀಡುವ ಸರಳ ಆರೋಗ್ಯಕರ ಸಲಹೆಗಳನ್ನು ಪಾಲನೆ ಮಾಡಬಹುದು. ಇದರಿಂದ ನಿಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಆರೋಗ್ಯಕರವಾದ ಸಲಹೆಗಳನ್ನು ರೂಢಿಸಿಕೊಳ್ಳಬಹುದು. ಇದು ನಿಮಗೆ ಅನಾರೋಗ್ಯದಿಂದ ದೂರವಿರಿಸುವುದು ಮಾತ್ರವಲ್ಲ. ನಾನಾ ರೀತಿಯ ಕಾಯಿಲೆಗಳು ಬರುವುದನ್ನು ಕೂಡ ತಡೆಯುತ್ತದೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳ ವಿರುದ್ಧ ನಿಮ್ಮನ್ನು ನೀವು ಬಲಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಆರೋಗ್ಯಕರ ಸಲಹೆಗಳು ರೋಗಿಗಳಿಗೆ ಮಾತ್ರವಲ್ಲ ಆರೋಗ್ಯವಂತರಿಗೂ ಇದು ಸಹಕಾರಿಯಾಗಿರುತ್ತದೆ ಎಂಬುದನ್ನು ಮರೆಯಬಾರದು
ಇನ್ನೂ ಹೆಚ್ಚು ಓದಿಜಪಾನ್ ಸಂಸ್ಥೆ ಜೊತೆ ಐತಿಹಾಸಿಕ ಒಪ್ಪಂದ; ಕೆಲವೇ ತಿಂಗಳಲ್ಲಿ ಭಾರತಕ್ಕೆ ಲಭ್ಯವಾಗಲಿದೆ ಮೊದಲ ಡೆಂಗ್ಯೂ ಲಸಿಕೆ
ಡೆಂಗ್ಯೂ ಮಹಾಮಾರಿಯ ವಿರುದ್ಧದ ಹೋರಾಟದಲ್ಲಿ ಭಾರತ ದೊಡ್ಡ ಮೈಲಿಗಲ್ಲು ಸಾಧಿಸಿದ್ದು, ದೇಶದ ಮೊದಲ ಡೆಂಗ್ಯೂ ಲಸಿಕೆ 'ಕ್ಯೂಡೆಂಗಾ' ಮುಂದಿನ ವರ್ಷ ಅಂದರೆ 2027ರ ಮೊದಲಾರ್ಧದಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಜಪಾನ್ನ ಪ್ರಸಿದ್ಧ 'ಟಕೆಡಾ ಫಾರ್ಮಾಸ್ಯುಟಿಕಲ್ಸ್' ಸಂಸ್ಥೆಯೊಂದಿಗೆ ಭಾರತದ 'ಡಾ. ರೆಡ್ಡೀಸ್ ಲ್ಯಾಬೊರೇಟರೀಸ್' ಮಾಡಿಕೊಂಡಿರುವ ಐತಿಹಾಸಿಕ ಒಪ್ಪಂದದ ಭಾಗವಾಗಿ ಈ ಲಸಿಕೆಯನ್ನು ದೇಶದಾದ್ಯಂತ ವಿತರಿಸಲಾಗುವುದು. ಕಳೆದ ಜುಲೈನಲ್ಲಿ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರದಿಂದ ಮಾರುಕಟ್ಟೆ ಮಾನ್ಯತೆ ಪಡೆದಿದ್ದ ಈ ಲಸಿಕೆ ಡೆಂಗ್ಯೂ ತಡೆಗಟ್ಟುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ.
- Sushma Chakre
- Updated on: Sep 18, 2026
- 7:23 pm
ಹಾಲಿಗಿಂತ ಹೆಚ್ಚು ಕ್ಯಾಲ್ಸಿಯಂ ಎಳ್ಳಿನಲ್ಲಿದೆ ಎಂಬುದು ಸತ್ಯವೇ? ತಜ್ಞರ ಅಭಿಪ್ರಾಯವೇನು?
ಎಲುಬಿನ ಆರೋಗ್ಯಕ್ಕೆ ಕ್ಯಾಲ್ಸಿಯಂ ಮುಖ್ಯವಾದರೂ, ಒಂದು ಆಹಾರವೇ ಮುರಿದ ಎಲುಬುಗಳನ್ನು ಬಲಪಡಿಸಲು ಸಾಧ್ಯವಿಲ್ಲ. ಎಳ್ಳು ಮತ್ತು ಹಸಿರು ಸೊಪ್ಪುಗಳು ಕ್ಯಾಲ್ಸಿಯಂ ಸೇರಿದಂತೆ ಹಲವು ಪೋಷಕಾಂಶಗಳನ್ನು ನೀಡುತ್ತವೆ. ಹಾಗಾದರೆ ಇದು ಹಾಲಿಗಿಂತ ಹಲವು ಪಟ್ಟು ಉತ್ತಮವೇ, ಇದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 18, 2026
- 5:56 pm
ಕಡಲೆಕಾಯಿ Vs ಪಿಸ್ತಾ: ನಿಮ್ಮ ಆರೋಗ್ಯಕ್ಕೆ ಯಾವುದು ಹೆಚ್ಚು ಉಪಯುಕ್ತ ತಿಳಿದುಕೊಳ್ಳಿ
ಕಡಲೆಕಾಯಿ ಮತ್ತು ಪಿಸ್ತಾ ಎರಡೂ ಪ್ರೋಟೀನ್, ಫೈಬರ್ ಹಾಗೂ ಆರೋಗ್ಯಕರ ಕೊಬ್ಬುಗಳನ್ನು ಒದಗಿಸುವ ಪೌಷ್ಟಿಕ ಆಹಾರಗಳು. ಕಡಲೆಕಾಯಿಯಲ್ಲಿ ಪ್ರೋಟೀನ್ ಸ್ವಲ್ಪ ಹೆಚ್ಚಿದ್ದರೆ, ಪಿಸ್ತಾದಲ್ಲಿ ಫೈಬರ್ ಮತ್ತು ಕಣ್ಣಿನ ಆರೋಗ್ಯಕ್ಕೆ ಸಂಬಂಧಿಸಿದ ಲುಟೀನ್, ಜಿಯಾಕ್ಸಾಂಥಿನ್ ಇವೆ. ತೂಕ ನಿಯಂತ್ರಣ ಅಥವಾ ಹೃದಯದ ಆರೋಗ್ಯಕ್ಕಾಗಿ ಎರಡನ್ನೂ ಮಿತವಾಗಿ, ಉಪ್ಪು-ಸಕ್ಕರೆ ಸೇರಿಸದೆ ಸೇವಿಸುವುದು ಉತ್ತಮ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 18, 2026
- 5:19 pm
Lemon Water Benefits: ಪ್ರತಿದಿನ ನಿಂಬೆ ನೀರು ಕುಡಿಯುವುದರಿಂದ ದೇಹದಲ್ಲಾಗುವ ಬದಲಾವಣೆಗಳಿವು!
ಪ್ರತಿದಿನ ನಿಂಬೆ ನೀರು ಕುಡಿಯುವುದು ಆರೋಗ್ಯಕರ ಅಭ್ಯಾಸ. ಇದು ದೇಹಕ್ಕೆ ಹೈಡ್ರೇಷನ್ ನೀಡಲು ಮತ್ತು ವಿಟಮಿನ್ ಸಿ ಪಡೆಯಲು ಸಹಾಯ ಮಾಡುತ್ತದೆ. ಸಕ್ಕರೆ ಪಾನೀಯಗಳ ಬದಲಿಗೆ ಇದನ್ನು ಕುಡಿದರೆ ಹೆಚ್ಚುವರಿ ಕ್ಯಾಲೊರಿಗಳನ್ನು ಕಡಿಮೆ ಮಾಡಬಹುದು. ಆದರೆ ನಿಂಬೆ ನೀರು ತೂಕ ಇಳಿಸುವ ಮ್ಯಾಜಿಕ್ ಡ್ರಿಂಕ್ ಅಲ್ಲ. ಹೆಚ್ಚು ಸೇವಿಸಿದರೆ ಹಲ್ಲಿನ ಎನಾಮೆಲ್ ಮೇಲೆ ಪರಿಣಾಮ ಬೀರುವ ಸಾಧ್ಯತೆಯೂ ಇದೆ. ಹಾಗಾಗಿ ಇದರಿಂದ ಸಿಗುವ ಪ್ರಯೋಜನಗಳು ಮತ್ತು ಯಾವ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಬೇಕು.
- Preethi Bhat Gunavante
- Updated on: Sep 17, 2026
- 8:59 pm
Egg vs Avocado: ನಿಮ್ಮ ಆರೋಗ್ಯಕ್ಕೆ ಯಾವುದು ಬೆಸ್ಟ್ ತಿಳಿದುಕೊಳ್ಳಿ
ಮೊಟ್ಟೆ ಮತ್ತು ಅವಕಾಡೋ ಎರಡೂ ಕೂಡ ಪೌಷ್ಟಿಕ ಆಹಾರಗಳಾದರೂ ಅವುಗಳ ಪ್ರಯೋಜನಗಳು ವಿಭಿನ್ನ. ಮೊಟ್ಟೆ ಉತ್ತಮ ಗುಣಮಟ್ಟದ ಪ್ರೋಟೀನ್, ಕೋಲಿನ್ ಮತ್ತು ಕೆಲವು ಪ್ರಮುಖ ವಿಟಮಿನ್ಗಳನ್ನು ನೀಡಿದರೆ, ಅವಕಾಡೋ ಫೈಬರ್, ಪೊಟ್ಯಾಸಿಯಂ ಮತ್ತು ಆರೋಗ್ಯಕರ ಕೊಬ್ಬುಗಳನ್ನು ಒದಗಿಸುತ್ತದೆ. ತೂಕ ನಿಯಂತ್ರಣ, ಆರೋಗ್ಯ ಅಥವಾ ಹೃದಯ ಸ್ನೇಹಿ ಆಹಾರಕ್ಕೆ ನಿಮ್ಮ ಅಗತ್ಯಕ್ಕೆ ತಕ್ಕಂತೆ ಎರಡನ್ನೂ ಸಮತೋಲಿತವಾಗಿ ಸೇವಿಸಬಹುದು.
- Preethi Bhat Gunavante
- Updated on: Sep 17, 2026
- 8:15 pm
ನೆಲದ ಮೇಲೆ ಕಾಲು ಮಡಚಿ ಕುಳಿತುಕೊಳ್ಳುವ ಅಭ್ಯಾಸ ಅಪಾಯಕಾರಿಯೇ ತಿಳಿದುಕೊಳ್ಳಿ!
ಕಾಲು ಮಡಚಿ ಅಥವಾ ಕಾಲು ಮೇಲೆ ಕಾಲು ಕುಳಿತುಕೊಳ್ಳುವುದು ಸಾಮಾನ್ಯವಾಗಿ ಎಲ್ಲರಿಗೂ ಅಪಾಯಕಾರಿ ಅಲ್ಲ. ಆದರೆ ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದರಿಂದ ಮೊಣಕಾಲು, ಸೊಂಟ ಮತ್ತು ಬೆನ್ನಿನಲ್ಲಿ ಬಿಗಿತ ಅಥವಾ ಅಸ್ವಸ್ಥತೆ ಉಂಟಾಗಬಹುದು. ಈಗಾಗಲೇ ಸಂಧಿವಾತ ಅಥವಾ ಮೊಣಕಾಲಿನ ಸಮಸ್ಯೆ ಇರುವವರು ಹೆಚ್ಚು ಎಚ್ಚರಿಕೆ ವಹಿಸಬೇಕು. ಹಾಗಾದರೆ ಕಾಲು ಮಡಚಿ ಕುಳಿತುಕೊಂಡಾಗ ಮೊಣಕಾಲಿಗೆ ತೊಂದರೆ ಉಂಟಾಗುತ್ತದೆಯೇ, ಈ ಅಭ್ಯಾಸ ಬೆನ್ನು ನೋವಿಗೆ ಕಾರಣವೇ ಎಂಬಿತ್ಯಾದಿ ವಿಷಯಗಳ ಕುರಿತ ಮಾಹಿತಿ ಈ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 17, 2026
- 6:43 pm
ಮೆಂತ್ಯೆ ಶುಗರ್ ನಿಯಂತ್ರಣಕ್ಕೆ ಸಹಾಯ ಮಾಡುತ್ತಾ, ಈ ಕುರಿತು ತಜ್ಞರ ಅಭಿಪ್ರಾಯವೇನು ತಿಳಿದುಕೊಳ್ಳಿ
ಮೆಂತ್ಯೆ ಬೀಜಗಳಲ್ಲಿ ನಾರಿನಾಂಶ ಸೇರಿದಂತೆ ಕೆಲವು ಸಂಯುಕ್ತಗಳಿದ್ದು, ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಕೆಲವು ಮಟ್ಟಿಗೆ ಸಹಾಯ ಮಾಡಬಹುದು. ಆದರೆ ಮೆಂತ್ಯೆ ಪುಡಿ ಸೇವಿಸಿದರೆ ಡಯಾಬಿಟಿಸ್ ಸಂಪೂರ್ಣ ಗುಣವಾಗುತ್ತದೆ ಎಂಬುದು ಸುಳ್ಳು. ಔಷಧಿ ತೆಗೆದುಕೊಳ್ಳುವವರು ಹೆಚ್ಚಿನ ಪ್ರಮಾಣದಲ್ಲಿ ಮೆಂತ್ಯೆ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಆಹಾರ, ವ್ಯಾಯಾಮ ಮತ್ತು ಔಷಧಿ ನಿಯಮಿತವಾಗಿ ಪಾಲಿಸುವುದು ಬಹಳ ಮುಖ್ಯ.
- Preethi Bhat Gunavante
- Updated on: Sep 16, 2026
- 9:06 pm
ಮಲಬದ್ಧತೆಯಿಂದ ಕಂಗೆಟ್ಟಿರುವವರಿಗೆ ಕಾಮಕಸ್ತೂರಿ ಬೀಜಗಳನ್ನು ಈ ರೀತಿ ಸೇವಿಸಿದರೆ ಜೀರ್ಣಕ್ರಿಯೆ ಸರಿಯಾಗಿ ಆಗಬಹುದು!
ಮಲಬದ್ಧತೆಯಿಂದ ಬಳಲುತ್ತಿದ್ದರೆ ಆಹಾರದಲ್ಲಿ ಫೈಬರ್ ಅಂಶ ಹೆಚ್ಚಿಸುವುದರಿಂದ ಇಂತಹ ಸಮಸ್ಯೆಗೆಯಿಂದ ಮುಕ್ತಿ ಪಡೆಯಲು ಸಹಾಯಕವಾಗಬಹುದು. ತುಳಸಿ ಬೀಜ ಅಥವಾ ಸಬ್ಜಾ ಬೀಜಗಳೆಂದು ಕರೆಯಲ್ಪಡುವ ಕಾಮಕಸ್ತೂರಿ ಬೀಜಗಳು ಮಲಬದ್ಧತೆ ಇರುವವರಿಗೆ ಉಪಯುಕ್ತ ಆಹಾರ ವಾಗಬಹುದು. ಹಾಗಾದರೆ ಇದನ್ನು ಯಾವ ರೀತಿ ಸೇವನೆ ಮಾಡಬೇಕು, ಹೆಚ್ಚು ಸೇವನೆ ಮಾಡಿದರೆ ಸಮಸ್ಯೆಯಾಗುತ್ತದೆಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 16, 2026
- 5:46 pm
ಮನೆಯ ಅಂಗಳದ ನಿತ್ಯಪುಷ್ಪ ಹೂವು ನಿಜಕ್ಕೂ ಶುಗರ್, ಬಿಪಿಗೆ ಮನೆಮದ್ದಾಗಿ ಉಪಯೋಗವಾಗುತ್ತದೆಯೇ ತಿಳಿದುಕೊಳ್ಳಿ
ಮನೆಯ ಅಂಗಳದಲ್ಲಿ ಕಾಣಸಿಗುವ ನಿತ್ಯಪುಷ್ಪ ಅಥವಾ ಸದಾಪುಷ್ಪ ಕೇವಲ ಅಲಂಕಾರಿಕ ಹೂವಲ್ಲ. ಇದರಲ್ಲಿ ಔಷಧೀಯ ಸಂಯುಕ್ತಗಳಿವೆ ಎಂಬ ಕಾರಣಕ್ಕೆ ಶುಗರ್ ಮತ್ತು ಬಿಪಿಗೆ ಕಂಟ್ರೋಲ್ ಮಾಡಲು ಬಳಸುತ್ತಾರೆ ಎಂದು ಹೇಳಲಾಗುತ್ತದೆ. ಆದರೆ ನಿತ್ಯಪುಷ್ಪದ ಎಲೆ ಅಥವಾ ಹೂವನ್ನು ಕಷಾಯ ಮಾಡಿ ಸೇವಿಸುವುದರಿಂದ ಶುಗರ್, ಬಿಪಿ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆಯೇ, ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 15, 2026
- 9:18 pm
ಜಿಮ್ಗೆ ಹೋಗುವವರು ತಪ್ಪದೇ ತಿಳಿಯಿರಿ: ವರ್ಕೌಟ್ ಮಾಡುವಾಗ ಎಷ್ಟು ಪ್ರಮಾಣದಲ್ಲಿ ನೀರು ಕುಡಿಯಬೇಕು?
ಕೆಲವರಿಗೆ, ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಎಷ್ಟು ನೀರು ಕುಡಿಯಬೇಕು ಎಂಬುದೇ ದೊಡ್ಡ ಪ್ರಶ್ನೆಯಾಗಿರುತ್ತದೆ. ಇದು ವ್ಯಾಯಾಮದ ಅವಧಿ, ತೀವ್ರತೆ, ದೇಹದ ಗಾತ್ರ, ವಾತಾವರಣ ಮತ್ತು ಬೆವರುವ ಪ್ರಮಾಣದ ಮೇಲೆ ನೀರಿನ ಅಗತ್ಯ ಬದಲಾಗುತ್ತದೆ. ಒಂದು ಗಂಟೆಯೊಳಗಿನ ಸಾಮಾನ್ಯ ವರ್ಕೌಟ್ಗೆ ನೀರು ಸಾಕಾಗಬಹುದು. ದೀರ್ಘಕಾಲದ ವ್ಯಾಯಾಮದಲ್ಲಿ ಎಲೆಕ್ಟ್ರೋಲೈಟ್ಗಳ ಅಗತ್ಯವೂ ಇರಬಹುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 14, 2026
- 7:05 pm
ರಾತ್ರಿ ಮಲಗುವ ಮುನ್ನ ಸೇಬು ತಿನ್ನುವ ಅಭ್ಯಾಸವಿದ್ದರೆ ನಿಮಗೆ ಈ ವಿಷಯಗಳು ತಿಳಿದಿರಲೇಬೇಕು!
ಸೇಬಿನಲ್ಲಿ ಫೈಬರ್, ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್ಗಳು ಇರುವುದರಿಂದ ಇದು ಆರೋಗ್ಯಕರ ಹಣ್ಣಾಗಿದೆ. ರಾತ್ರಿ ಸೇಬು ತಿನ್ನುವುದರಿಂದ ಎಲ್ಲರಿಗೂ ಗ್ಯಾಸ್ ಅಥವಾ ಆಸಿಡಿಟಿ ಉಂಟಾಗುತ್ತದೆ ಎಂಬುದಿಲ್ಲ. ಆದರೆ ಜೀರ್ಣಕ್ರಿಯೆ ಸಂಬಂಧಿತ ಸಮಸ್ಯೆ ಅಥವಾ ಆಸಿಡ್ ರಿಫ್ಲಕ್ಸ್ ಇರುವವರು ಮಲಗುವ ಮುನ್ನ ಈ ಹಣ್ಣಿನ ಸೇವನೆ ಮಾಡದಿರುವುದು ಒಳ್ಳೆಯದು. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Sep 12, 2026
- 8:03 pm
ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾರೆಟ್ ಮಾತ್ರ ಸೇವನೆ ಮಾಡಬೇಕೇ ತಿಳಿದುಕೊಳ್ಳಿ
ಮೊಬೈಲ್, ಲ್ಯಾಪ್ಟಾಪ್ ಬಳಕೆಯಿಂದ ಕಣ್ಣಿಗೆ ಆಯಾಸವಾಗುವುದು ಮತ್ತು ಕಣ್ಣು ಒಣಗುವಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು. ಇದನ್ನು ಕಡಿಮೆ ಮಾಡಲು ಮತ್ತು ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಕ್ಯಾರೆಟ್, ಹಸಿರು ಸೊಪ್ಪುಗಳಂತಹ ಪೌಷ್ಟಿಕ ಆಹಾರಗಳು ಸಹಾಯ ಮಾಡುತ್ತದೆ. ಹಾಗಾದರೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಮತ್ತು ಬೀಟಾ -ಕ್ಯಾರೋಟಿನ್ ಇರುವ ಆಹಾರಗಳು ಯಾವವು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Sep 12, 2026
- 5:04 pm