Health Tips
ಇತ್ತೀಚಿಗೆ ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಿನ ದಿನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಅದಕ್ಕಿಂತ ಬೇರೆ ಸಂಪತ್ತು ಬೇಕಾಗಿಲ್ಲ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ನಾವು ಸೇವಿಸುವ ಆಹಾರವೂ ಸರಿಯಾಗಿ ಇರಬೇಕಾಗುತ್ತದೆ. ಅನಾರೋಗ್ಯವನ್ನು ದೂರವಿಡುವುದು ಮತ್ತು ಬರಮಾಡಿಕೊಳ್ಳುವುದು ಎರಡು ನಮ್ಮ ಕೈಯಲ್ಲಿ ಇರುವುದರಿಂದ ನಮ್ಮ ದೈನಂದಿನ ಅಭ್ಯಾಸಗಳು ಆರೋಗ್ಯಕರವಾಗಿ ಇರುವುದು ಬಹಳ ಒಳಿತು. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆ, ಮತ್ತಿಷ್ಟು ಔಷಧಿಗಳ ಮೊರೆ ಹೋಗುವ ಬದಲು ನಾವು ನೀಡುವ ಸರಳ ಆರೋಗ್ಯಕರ ಸಲಹೆಗಳನ್ನು ಪಾಲನೆ ಮಾಡಬಹುದು. ಇದರಿಂದ ನಿಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಆರೋಗ್ಯಕರವಾದ ಸಲಹೆಗಳನ್ನು ರೂಢಿಸಿಕೊಳ್ಳಬಹುದು. ಇದು ನಿಮಗೆ ಅನಾರೋಗ್ಯದಿಂದ ದೂರವಿರಿಸುವುದು ಮಾತ್ರವಲ್ಲ. ನಾನಾ ರೀತಿಯ ಕಾಯಿಲೆಗಳು ಬರುವುದನ್ನು ಕೂಡ ತಡೆಯುತ್ತದೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳ ವಿರುದ್ಧ ನಿಮ್ಮನ್ನು ನೀವು ಬಲಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಆರೋಗ್ಯಕರ ಸಲಹೆಗಳು ರೋಗಿಗಳಿಗೆ ಮಾತ್ರವಲ್ಲ ಆರೋಗ್ಯವಂತರಿಗೂ ಇದು ಸಹಕಾರಿಯಾಗಿರುತ್ತದೆ ಎಂಬುದನ್ನು ಮರೆಯಬಾರದು
ಇನ್ನೂ ಹೆಚ್ಚು ಓದಿಬೆಂಡೆಕಾಯಿ ಎಲ್ಲರಿಗೂ ಒಳ್ಳೆಯದಲ್ಲವೇ? ಈ ಔಷಧಿ ಸೇವಿಸುವವರು ತಿಳಿಯಬೇಕಾದ ವಿಷಯಗಳು!
ದೇಹಕ್ಕೆ ಅಗತ್ಯವಾದ ಅನೇಕ ಪೋಷಕಾಂಶಗಳನ್ನು ಒದಗಿಸುವ ತರಕಾರಿಗಳಲ್ಲಿ ಬೆಂಡೆಕಾಯಿ ಕೂಡ ಒಂದು ಆದರೆ, ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿರುವವರಿಗೆ ಬೆಂಡೆಕಾಯಿ ಒಳ್ಳೆಯದಕ್ಕಿಂತ ಹಾನಿ ಉಂಟುಮಾಡುವುದೇ ಹೆಚ್ಚು. ಹೌದು, ಆರೋಗ್ಯ ತಜ್ಞರು ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ಹಾಗಾದರೆ ಯಾರಿಗೆ ಬೆಂಡೆಕಾಯಿ ಒಳ್ಳೆಯದಲ್ಲ ಮತ್ತು ಯಾರು ಸೇವನೆ ಮಾಡುವ ಮುನ್ನ ಯೋಚಿಸಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Aug 28, 2026
- 8:19 pm
ಡಯಾಬಿಟಿಸ್ ಇರುವವರು ಸಿಹಿಯಾಗಿರುವ ಟೂತ್ಪೇಸ್ಟ್ ಬಳಸಬಹುದೇ? ಇದಕ್ಕೆ ತಜ್ಞರ ಅಭಿಪ್ರಾಯವೇನು?
ಮಧುಮೇಹ ಇರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕಾಗುತ್ತದೆ. ಆದರೆ ಟೂತ್ಪೇಸ್ಟ್ ವಿಷಯಕ್ಕೆ ಬಂದರೆ ಸಿಹಿಯಾಗಿರುವ ಟೂತ್ಪೇಸ್ಟ್ ಬಳಸಬಹುದೇ ಅಥವಾ ಬೇಡವೇ ಎಂಬ ಗೊಂದಲವಿರುತ್ತದೆ. ಹಾಗದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ, ಡಯಾಬಿಟಿಸ್ ಇರುವವರು ಇಂತಹ ಟೂತ್ಪೇಸ್ಟ್ ಬಳಸಬಹುದೇ ಇದಕ್ಕೆ ಉತ್ತರ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 28, 2026
- 5:45 pm
ಮಳೆಗಾಲದಲ್ಲಿ ಕಾಲುಗಳಲ್ಲಿ ಫಂಗಲ್ ಇನ್ಫೆಕ್ಷನ್ ಅಪಾಯ! ಈ 4 ತಪ್ಪುಗಳನ್ನು ಮಾಡಿದರೆ ಸಮಸ್ಯೆ ಹೆಚ್ಚಾಗಬಹುದು
ಮಳೆಗಾಲದಲ್ಲಿ ಚರ್ಮಕ್ಕೆ ಸಂಬಂಧ ಪಟ್ಟ ಸೋಂಕುಗಳು ಕಂಡುಬರುವುದು ಸಾಮಾನ್ಯ. ಅದರಲ್ಲಿಯೂ ಬ್ಯಾಕ್ಟೀರಿಯಾ ಹಾಗೂ ಫಂಗಸ್ ಬರುವ ಸಾಧ್ಯತೆ ಹೆಚ್ಚು. ಇದನ್ನು ತಪ್ಪಿಸಲು, ಮಳೆಗಾಲದಲ್ಲಿ ಮಾಡಬಾರದ ಕೆಲವು ಕೆಲಸಗಳಿವೆ. ಹೌದು, ನಾವು ನಮಗರಿವಿಲ್ಲದಂತೆ ಮಾಡುವ ಕೆಲವು ತಪ್ಪುಗಳು ಇಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. . ಹಾಗಾದರೆ ಇಂತಹ ಸಮಸ್ಯೆ ತಡೆಯಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
- Preethi Bhat Gunavante
- Updated on: Aug 27, 2026
- 6:31 pm
ಮಳೆಗಾಲದಲ್ಲಿ ಪ್ರತಿದಿನ ಮಜ್ಜಿಗೆ ಕುಡಿದರೆ ಏನಾಗುತ್ತದೆ? ತಜ್ಞರ ಸಲಹೆ ಮತ್ತು ಮುನ್ನೆಚ್ಚರಿಕೆಗಳು
ಮಳೆಗಾಲದಲ್ಲಿ ತಾಜಾ ಮಜ್ಜಿಗೆಯನ್ನು ಸಮತೋಲಿತ ಆಹಾರದ ಭಾಗವಾಗಿ ಸೇವಿಸಬಹುದು. ಇದು ದೇಹಕ್ಕೆ ದ್ರವಾಂಶ ಮತ್ತು ಕೆಲವು ಪೋಷಕಾಂಶಗಳನ್ನು ಒದಗಿಸುವುದರ ಜೊತೆಗೆ ಕರುಳಿನ ಆರೋಗ್ಯಕ್ಕೂ ಒಳ್ಳೆಯದು. ಆದರೆ ಮಜ್ಜಿಗೆಯನ್ನು ಯಾವುದೇ ಕಾಯಿಲೆಗೆ ಔಷಧಿ ಅಥವಾ ಸೋಂಕು ತಡೆಯುವ ಪಾನೀಯ ಎಂದು ಪರಿಗಣಿಸಬಾರದು. ಇದರಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗ್ಗೆ ಮಾಹಿತಿ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 26, 2026
- 7:58 pm
ರಾತ್ರಿ ಮಲಗುವ 1 ಗಂಟೆ ಮೊದಲು ಫೋನ್ ಆಫ್ ಮಾಡಿದರೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳಿವು
ಮೊಬೈಲ್ನ ಸಮಸ್ಯೆ ಕೇವಲ ನೀಲಿ ಬೆಳಕಿಗೆ ಸೀಮಿತವಾಗಿಲ್ಲ. ರಾತ್ರಿ ಸೋಶಿಯಲ್ ಮೀಡಿಯಾ, ರೀಲ್ಸ್, ವಿಡಿಯೋಗಳು, ಸುದ್ದಿ, ಮೆಸೇಜ್ಗಳು ಮತ್ತು ಕೆಲಸದ ನೋಟಿಫಿಕೇಶನ್ಗಳು ಮೆದುಳನ್ನು ಸಕ್ರಿಯವಾಗಿರಿಸಬಹುದು. ಕೆಲವೇ ನಿಮಿಷ ಎಂದು ಫೋನ್ ತೆಗೆದುಕೊಂಡವರು ಗೊತ್ತಿಲ್ಲದೆ ಅರ್ಧ ಗಂಟೆ ಅಥವಾ ಅದಕ್ಕಿಂತ ಹೆಚ್ಚು ಸಮಯ ಸ್ಕ್ರೀನ್ ನೋಡುವ ಸಾಧ್ಯತೆಯೂ ಇದೆ. ಇದರಿಂದ ಮಲಗುವ ಸಮಯ ಮೀರಿ ಹೋಗಿ, ಒಟ್ಟಾರೆ ನಿದ್ರೆಯ ಅವಧಿಯೇ ಕಡಿಮೆಯಾಗಬಹುದು.
- Preethi Bhat Gunavante
- Updated on: Aug 26, 2026
- 6:48 pm
ತಣ್ಣೀರು ಕುಡಿದರೆ ನಿಜವಾಗಿಯೂ ಶೀತ- ಜ್ವರ ಬರುತ್ತಾ? ವೈದ್ಯರು ನೀಡಿರುವ ಸ್ಪಷ್ಟ ಉತ್ತರ ಇಲ್ಲಿದೆ
ಮಳೆಗಾಲ ಮತ್ತು ಚಳಿಗಾಲದಲ್ಲಿ ಕೆಲವು ಮನೆಗಳಲ್ಲಿ ಫ್ರಿಡ್ಜ್ನಲ್ಲಿಟ್ಟ ನೀರನ್ನು ಕುಡಿಯುವುದಿಲ್ಲ. ಅಷ್ಟು ಮಾತ್ರವಲ್ಲ, ತಣ್ಣೀರನ್ನು ಅಂದರೆ ಕುದಿಸದ ನೀರನ್ನು ಕೂಡ ಕುಡಿಯುವುದಿಲ್ಲ. ಏಕೆಂದರೆ ಇದರಿಂದ ಶೀತ ಉಂಟಾಗುತ್ತದೆ ಎಂಬುದು ಹಲವರ ನಂಬಿಕೆ. ಆದರೆ ಇದು ನಿಜವಾಗಿಯೂ ಸತ್ಯವೇ ಅಥವಾ ಇದರ ಹಿಂದೆ ಬೇರೆ ಕಾರಣವಿದೆಯೇ ಎಂಬುದನ್ನು ತಿಳಿಯುವುದು ಅನಿವಾರ್ಯ. ಈ ಕುರಿತು ವೈದ್ಯರು ನೀಡಿರುವ ಮಾಹಿತಿ ಇಲ್ಲಿದೆ.
- Preethi Bhat Gunavante
- Updated on: Aug 26, 2026
- 5:33 pm
ಪಡವಲಕಾಯಿ ತಿನ್ನಲು ಇಷ್ಟವಿಲ್ಲವೇ? ಇದರಿಂದ ಸಿಗುವ ಆರೋಗ್ಯ ಪ್ರಯೋಜನ ತಿಳಿದರೆ ಮತ್ತೆ ಮತ್ತೆ ತಿನ್ನುತ್ತೀರಿ
ದೈನಂದಿನ ಅಡುಗೆಯಲ್ಲಿ ಹಲವು ರೀತಿಯ ತರಕಾರಿಗಳನ್ನು ಬಳಸುತ್ತೇವೆ. ಆದರೆ ಕೆಲವು ತರಕಾರಿಗಳು ಹೆಚ್ಚು ರುಚಿಯಾಗಿರುವುದಿಲ್ಲ, ಆದ್ದರಿಂದ ಅನೇಕರು ಅವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಅದರಲ್ಲಿ ಪಡವಲಕಾಯಿಯೂ ಒಂದು. ಆದರೆ ತಜ್ಞರು ಇದು ದೇಹಕ್ಕೆ ಅಗತ್ಯವಾದ ಹಲವಾರು ಪೋಷಕಾಂಶಗಳನ್ನು ಹೊಂದಿರುವುದರಿಂದ, ಇದು ಆರೋಗ್ಯ ಕಾಪಾಡಿಕೊಳ್ಳಲು ಬಹಳ ಮುಖ್ಯ ಎನ್ನುತ್ತಾರೆ. ಹಾಗಾದರೆ ಈ ತರಕಾರಿಯನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳಿ.
- Preethi Bhat Gunavante
- Updated on: Aug 25, 2026
- 7:07 pm
ಆಹಾರದಿಂದ ಟೂತ್ಪೇಸ್ಟ್ವರೆಗೆ.. ನೀವು ಬಳಸುವ ವಸ್ತು ಅಸಲಿಯೇ? ಹೇಗೆಲ್ಲ ನಡೆಯುತ್ತೆ ಕಲಬೆರಕೆ
ಮಿಶ್ರಣ ಅಥವಾ ಲೇಬಲಿಂಗ್ ಸರಿಯಾಗಿ ಇಲ್ಲದಿರುವುದು ಕೇವಲ ವ್ಯಾಪಾರದ ನಿಯಮ ಉಲ್ಲಂಘನೆಯಲ್ಲ. ಇದು ಗ್ರಾಹಕರ ಆರೋಗ್ಯ, ಸುರಕ್ಷತೆ ಮತ್ತು ವಿಶ್ವಾಸಕ್ಕೆ ಸಂಬಂಧಿಸಿದ ವಿಷಯ. ಮಾರುಕಟ್ಟೆಯಲ್ಲಿ ಏನು ಖರೀದಿಸುತ್ತಿದ್ದೇವೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಪ್ರತಿಯೊಬ್ಬ ಗ್ರಾಹಕರಿಗೂ ಇದೆ. ಹಾಗಾಗಿ . ‘ಆರ್ಗ್ಯಾನಿಕ್’, ‘ನ್ಯಾಚುರಲ್’, ‘100% ನ್ಯಾಚುರಲ್’, ‘ಫಾರ್ಮ್ ಫ್ರೆಶ್’ ಎಂಬ ಪದಗಳನ್ನು ನೋಡಿದ ತಕ್ಷಣ ಉತ್ಪನ್ನ ಸುರಕ್ಷಿತ ಎಂದು ಭಾವಿಸುವುದು ಸರಿಯಲ್ಲ. ಪ್ಯಾಕೆಟ್ ಮೇಲಿನ ಲೇಬಲ್, ಪದಾರ್ಥಗಳ ಪಟ್ಟಿ, ಪ್ರಮಾಣ, ತಯಾರಿಕಾ ದಿನಾಂಕ ಮತ್ತು ಸಂಬಂಧಿತ ಆಹಾರ ಸುರಕ್ಷತಾ ಮಾಹಿತಿಯನ್ನು ಪರಿಶೀಲಿಸುವುದು ಮುಖ್ಯ.
- Preethi Bhat Gunavante
- Updated on: Aug 25, 2026
- 5:38 pm
ಹೈಹೀಲ್ಸ್ನಿಂದ ಪಾದ ನೋವು ಮಾತ್ರವಲ್ಲ, ಬೆನ್ನು ನೋವೂ ಬರಬಹುದು! ತಜ್ಞರ ಎಚ್ಚರಿಕೆ
ಫ್ಯಾಷನ್ ಅಥವಾ ದೇಹದ ಅಂದ ಹೆಚ್ಚಿಸಲು ಹೈಹೀಲ್ಸ್ ಧರಿಸುವುದರಲ್ಲಿ ತಪ್ಪಿಲ್ಲ. ಆದರೆ ಎತ್ತರ, ಫಿಟ್ ಮತ್ತು ಧರಿಸುವ ಅವಧಿಯ ಬಗ್ಗೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. . ಹೈಹೀಲ್ಸ್ ಧರಿಸಿದಾಗ ಪಾದದ ಮುಂಭಾಗ ಮತ್ತು ಮಧ್ಯ ಭಾಗದ ಮೇಲೆ ಹೆಚ್ಚಿನ ಒತ್ತಡ ಬೀಳುವುದರಿಂದ ದೇಹದ ಸಮತೋಲನ ಕಾಪಾಡಿಕೊಳ್ಳಲು ಸ್ನಾಯುಗಳು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ದೀರ್ಘಕಾಲ ಹೈಹೀಲ್ಸ್ ಬಳಸುವವರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
- Preethi Bhat Gunavante
- Updated on: Aug 24, 2026
- 8:58 pm
Dates vs Figs: ಖರ್ಜೂರ ಮತ್ತು ಅಂಜೂರದಲ್ಲಿ ಯಾವುದರಲ್ಲಿದೆ ಹೆಚ್ಚು ವಿಟಮಿನ್, ಮಿನರಲ್?
ಅಂಜೂರ ಮತ್ತು ಖರ್ಜೂರಗಳು ರುಚಿಯಲ್ಲಿ ಸಿಹಿ ಅಂಶವಿರುವ ಡ್ರೈ ಫ್ರೂಟ್ಸ್. ಅವುಗಳನ್ನು ಹೆಚ್ಚಾಗಿ ಸಿಹಿ ಖಾದ್ಯಗಳ ತಯಾರಿಸಲು ಮತ್ತು ಸಕ್ಕರೆಗೆ ಬದಲಿಯಾಗಿ ಬಳಸಲಾಗುತ್ತದೆ. ಆದರೆ ಖರ್ಜೂರ ಮತ್ತು ಅಂಜೂರ ಇವೆರಡರಲ್ಲಿ ಯಾವುದರಲ್ಲಿ ಹೆಚ್ಚು ಪೋಷಕಾಂಶವಿದೆ ಮತ್ತು ತೂಕ ಮಾಡಿಕೊಳ್ಳಲು ಬಯಸುವವರು ಯಾವುದನ್ನು ಆಯ್ಕೆ ಮಾಡಿದರೆ ಒಳ್ಳೆಯದು ಎಂಬ ಪ್ರಶ್ನೆಗಳು ಹಲವರಲ್ಲಿವೆ. ಇದಕ್ಕೆ ಉತ್ತರ ಈ ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 24, 2026
- 8:36 pm
ವಿಟಮಿನ್ ಬಿ12 ಕಡಿಮೆಯಾದರೆ ದೇಹದಲ್ಲಿ ಏನಾಗುತ್ತದೆ? ವೈದ್ಯರು ಹೇಳಿದ ಈ 5 ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ
ಬಿ12 ಕೊರತೆಯನ್ನು ದೀರ್ಘಕಾಲ ನಿರ್ಲಕ್ಷಿಸಿದರೆ ನರಗಳಿಗೆ ಸಂಬಂಧಿಸಿದ ಹಾನಿ ಉಂಟಾಗುವ ಸಾಧ್ಯತೆಯಿದೆ. ಆದ್ದರಿಂದ ನಿರಂತರ ಸುಸ್ತು, ಕೈ-ಕಾಲುಗಳಲ್ಲಿ ಮರಗಟ್ಟುವಿಕೆ, ನಾಲಿಗೆಯಲ್ಲಿ ಬದಲಾವಣೆ, ಬ್ರೈನ್ ಫಾಗ್ ಅಥವಾ ಬ್ಯಾಲೆನ್ಸ್ ಸಮಸ್ಯೆಗಳಂತಹ ಲಕ್ಷಣಗಳು ಪದೇಪದೇ ಕಾಣಿಸಿಕೊಂಡರೆ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ.
- Preethi Bhat Gunavante
- Updated on: Aug 24, 2026
- 6:40 pm
ಸೊಳ್ಳೆಗಳು ಬರದಂತೆ ತಡೆಯಲು ಈ 5 ನೈಸರ್ಗಿಕ ವಿಧಾನ ಟ್ರೈ ಮಾಡಿ
ರಾತ್ರಿ ವೇಳೆ ಸೊಳ್ಳೆಗಳ ಕಾಟದಿಂದ ನಿದ್ರೆ ಹಾಳಾಗುವುದಷ್ಟೇ ಅಲ್ಲದೆ, ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ಗುನ್ಯಾ ಮುಂತಾದ ಸೊಳ್ಳೆಗಳಿಂದ ಹರಡುವ ಕಾಯಿಲೆಗಳ ಬಗ್ಗೆ ಆತಂಕವೂ ಹೆಚ್ಚುತ್ತದೆ. ಸೊಳ್ಳೆಗಳ ಕಾಟದಿಂದ ಹೈರಾಣವಾಗಿದ್ದರೆ ಬೇರೆ ಬೇರೆ ರಾಸಾಯನಿಕ ಬಳಸುವ ಬದಲು ನೈಸರ್ಗಿಕ ವಿಧಾನಗಳನ್ನು ಬಳಸಿಕೊಂಡು ಸೊಳ್ಳೆಗಳನ್ನು ದೂರವಿಡಬಹುದು. ಸೊಳ್ಳೆಗಳ ಕಾಟ ಕಡಿಮೆ ಮಾಡಲು ಕೆಲವು ಸರಳ ವಿಧಾನಗಳು ಸ್ಟೋರಿಯಲ್ಲಿದೆ.
- Preethi Bhat Gunavante
- Updated on: Aug 24, 2026
- 1:28 pm