AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips

Health Tips

ಇತ್ತೀಚಿಗೆ ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಿನ ದಿನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಅದಕ್ಕಿಂತ ಬೇರೆ ಸಂಪತ್ತು ಬೇಕಾಗಿಲ್ಲ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ನಾವು ಸೇವಿಸುವ ಆಹಾರವೂ ಸರಿಯಾಗಿ ಇರಬೇಕಾಗುತ್ತದೆ. ಅನಾರೋಗ್ಯವನ್ನು ದೂರವಿಡುವುದು ಮತ್ತು ಬರಮಾಡಿಕೊಳ್ಳುವುದು ಎರಡು ನಮ್ಮ ಕೈಯಲ್ಲಿ ಇರುವುದರಿಂದ ನಮ್ಮ ದೈನಂದಿನ ಅಭ್ಯಾಸಗಳು ಆರೋಗ್ಯಕರವಾಗಿ ಇರುವುದು ಬಹಳ ಒಳಿತು. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆ, ಮತ್ತಿಷ್ಟು ಔಷಧಿಗಳ ಮೊರೆ ಹೋಗುವ ಬದಲು ನಾವು ನೀಡುವ ಸರಳ ಆರೋಗ್ಯಕರ ಸಲಹೆಗಳನ್ನು ಪಾಲನೆ ಮಾಡಬಹುದು. ಇದರಿಂದ ನಿಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಆರೋಗ್ಯಕರವಾದ ಸಲಹೆಗಳನ್ನು ರೂಢಿಸಿಕೊಳ್ಳಬಹುದು. ಇದು ನಿಮಗೆ ಅನಾರೋಗ್ಯದಿಂದ ದೂರವಿರಿಸುವುದು ಮಾತ್ರವಲ್ಲ. ನಾನಾ ರೀತಿಯ ಕಾಯಿಲೆಗಳು ಬರುವುದನ್ನು ಕೂಡ ತಡೆಯುತ್ತದೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳ ವಿರುದ್ಧ ನಿಮ್ಮನ್ನು ನೀವು ಬಲಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಆರೋಗ್ಯಕರ ಸಲಹೆಗಳು ರೋಗಿಗಳಿಗೆ ಮಾತ್ರವಲ್ಲ ಆರೋಗ್ಯವಂತರಿಗೂ ಇದು ಸಹಕಾರಿಯಾಗಿರುತ್ತದೆ ಎಂಬುದನ್ನು ಮರೆಯಬಾರದು

ಇನ್ನೂ ಹೆಚ್ಚು ಓದಿ

ಈ ಆಹಾರಗಳ ಸೇವನೆ ಮಾಡುವುದನ್ನು ಬಿಟ್ಟರೆ ಕೂದಲು ಉದುರುವುದು ಕಡಿಮೆಯಾಗುತ್ತೆ!

ಇತ್ತೀಚಿನ ದಿನಗಳಲ್ಲಿ ಅನೇಕರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಕೂದಲು ಉದುರುವುದು ಕೂಡ ಒಂದು. ಹೆಚ್ಚುವರಿ ಎಣ್ಣೆ, ರಾಸಾಯನಿಕ ಶಾಂಪೂಗಳ ಬಳಕೆ, ಒತ್ತಡ ಮತ್ತು ದುರ್ಬಲ ಜೀವನಶೈಲಿ ಇವೆಲ್ಲವೂ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ. ಇದರ ಜೊತೆಗೆ, ನಾವು ಸೇವಿಸುವ ಆಹಾರವೂ ಕೂದಲು ಉದುರುವಿಕೆಗೆ ಕಾರಣವಾಗಿದೆ. ಹೌದು, ಕೆಲವು ಆಹಾರ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದಲೂ ಕೂದಲು ಉದುರಬಹುದು. ಹಾಗಾದರೆ ಆ ಆಹಾರಗಳು ಯಾವುವು, ಇದನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿಮಗೂ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬರುತ್ತಾ, ಹಾಗಿದ್ರೆ ನಿರ್ಲಕ್ಷ್ಯ ಮಾಡದೆಯೇ ತಜ್ಞರ ಈ ಸಲಹೆ ಪಾಲಿಸಿ

ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಶುರುವಾಗುತ್ತದೆ. ಆದರೆ ಇದರಿಂದ ಪರಿಹಾರ ಕಂಡುಕೊಳ್ಳುವ ಬದಲು ಇದನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ಸಾಮಾನ್ಯವಾಗಿ ಈ ರೀತಿ ಆಗುವುದಕ್ಕೆ ದೇಹದಲ್ಲಿನ ಅಗತ್ಯ ಪೋಷಕಾಂಶಗಳ ಕೊರತೆಯೇ ಕಾರಣವಾಗಿರುತ್ತದೆ. ಆದಕಾರಣ, ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ತಲೆನೋವು ಬಂದರೆ, ಅದನ್ನು ಹಗುರವಾಗಿ ಪರಿಗಣಿಸಬೇಡಿ. ಹಾಗಾದರೆ ಈ ರೀತಿ ತಲೆನೋವು ಬಂದಾಗ ಏನು ಮಾಡಬೇಕು? ಇದನ್ನು ತಡೆಯಲು ಯಾವ ರೀತಿಯ ಆಹಾರಗಳನ್ನು ಸೇವಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವಿಟಮಿನ್ ಬಿ12 ಕೊರತೆ ಇದ್ದು ನೀವು ಸಸ್ಯಾಹಾರಿಗಳಾಗಿದ್ದರೆ ಈ 4 ಸೊಪ್ಪುಗಳನ್ನು ತಪ್ಪದೆ ತಿನ್ನಿ!

ನೀವು ಕೂಡ ವಿಟಮಿನ್ ಬಿ 12 ಕೊರತೆಯಿಂದ ಬಳಲುತ್ತಿದ್ದೀರಾ? ಹಾಗಾದರೆ ನಿಮಗೆ ಸಹಾಯ ಮಾಡುವ ಕೆಲವು ಆಹಾರಗಳು ಇಲ್ಲಿವೆ. ಅದರಲ್ಲಿಯೂ ನೀವು ಸಸ್ಯಹಾರಿಗಳಾಗಿದ್ದರೆ ಈ ನಾಲ್ಕು ಸೊಪ್ಪುಗಳನ್ನು ಸೇವನೆ ಮಾಡಲೇಬೇಕು. ಇವು ನಿಮ್ಮ ದೇಹದಲ್ಲಿ ಉಂಟಾದ ಬಿ 12 ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಹಾಗಾದರೆ ಆ ಸೊಪ್ಪುಗಳು ಯಾವವು? ಅವುಗಳಿಂದ ಸಿಗುವ ಮತ್ತಷ್ಟು ಪ್ರಯೋಜನಗಳ ಬಗೆಗಿನ ಸಂಪೂರ್ಣ ಮಾಹಿತಿ ಈ ಸ್ಟೋರಿಯಲ್ಲಿದೆ.

ನೀವು ಪ್ರೀತಿಯಿಂದ ಸಾಕಿರುವ ನಾಯಿಗೂ ಬುದ್ಧಿಮಾಂದ್ಯತೆ ಬರಬಹುದು; ಅದಕ್ಕಿಂತ ಮೊದಲು ಅದರ ಬಗ್ಗೆ ತಿಳಿಯಿರಿ

ವಯಸ್ಸಾದಂತೆ ಮಾನವನ ಮೆದುಳು ದುರ್ಬಲಗೊಳ್ಳುವಂತೆಯೇ, ನಾಯಿಯ ಮೆದುಳು ಸಹ ಕಾಲಾನಂತರದಲ್ಲಿ ಹದಗೆಡುತ್ತದೆ. ಆದರೆ ಯಾವುದೇ ಮಾಲೀಕರಿಗಾಗಲಿ ತಾವು ಸಾಕಿರುವ ನಾಯಿಗೆ ವಯಸ್ಸಾಗುವುದನ್ನು ನೋಡುವುದು ತುಂಬಾ ಕಷ್ಟ. ನಾಯಿಗಳಿಗೆ ವಯಸ್ಸಾದಂತೆ ಬುದ್ಧಿಮಾಂದ್ಯತೆ ಕಂಡುಬರಬಹುದು, ಇದನ್ನು ಕ್ಯಾನೈನ್ ಕಾಗ್ನಿಟಿವ್ ಡಿಸ್ಫಂಕ್ಷನ್ (CCD) ಎಂದು ಕರೆಯುತ್ತಾರೆ. ಹಾಗಾಗಿ ಇಂತಹ ಸಮಯದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅವುಗಳನ್ನು ಹೇಗೆ ಕಾಳಜಿ ಮಾಡಬೇಕು ಎಂದು ತಿಳಿದಿರುವುದು ಬಹಳ ಅಗತ್ಯ. ಈ ಕುರಿತ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಚಳಿಗಾಲದಲ್ಲಿ ಗರ್ಭಿಣಿಯರು ಈ 5 ತಪ್ಪುಗಳನ್ನು ಅಪ್ಪಿತಪ್ಪಿಯೂ ಮಾಡಬೇಡಿ

ಕಳೆದ ಕೆಲವು ದಿನಗಳಿಂದ ಚಳಿ ನಿರಂತರವಾಗಿ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚಿನ ಕಾಳಜಿವಹಿಸುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ಶೀತ ಹವಾಮಾನ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸಿ, ಶೀತ, ಸೋಂಕು ಮತ್ತು ಆಯಾಸದಂತಹ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಹಾಗಾದರೆ ಗರ್ಭಿಣಿಯರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಅಡುಗೆಗೆ ಒಣ ಮೆಣಸಿನಕಾಯಿ ಹೆಚ್ಚಾಗಿ ಬಳಕೆ ಮಾಡುತ್ತಿದ್ದರೆ ಮಿಸ್ ಮಾಡ್ದೆ ಈ ಸ್ಟೋರಿ ಓದಿ

ಹಸಿ ಮೆಣಸಿಗಿಂತಲೂ ಒಣಗಿದ ಮೆಣಸಿನಕಾಯಿ ಆರೋಗ್ಯಕ್ಕೆ ಒಳ್ಳೆಯದು. ಇದು ಆಹಾರಕ್ಕೆ ತನ್ನದೇ ಆದಂತಹ ಪರಿಮಳ ನೀಡುವ ಮೂಲಕ ರುಚಿಯನ್ನು ದುಪ್ಪಟ್ಟು ಮಾಡುತ್ತದೆ. ಅಷ್ಟು ಮಾತ್ರವಲ್ಲ, ಈ ಮೆಣಸು ಆರೋಗ್ಯಕ್ಕೂ ಬಹಳ ಪ್ರಯೋಜನಕಾರಿಯಾಗಿದ್ದು ಅನೇಕ ರೀತಿಯ ರೋಗಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರ ಸೇವನೆ ಎಷ್ಟು ಪ್ರಯೋಜನಕಾರಿ, ಹಸಿ ಮೆಣಸಿಗಿಂತ ಇದು ಯಾಕೆ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಾಲಿಗೆಗೆ ರುಚಿಕರ ಮಾತ್ರವಲ್ಲ, ಹಾಟ್ ಚಾಕೊಲೇಟ್ ಕುಡಿಯುವುದರಿಂದ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿವೆ!

ಚಳಿಗಾಲದಲ್ಲಿ ಹಾಟ್ ಚಾಕೊಲೇಟ್ ಪಾನೀಯ ಕುಡಿಯುವುದರಿಂದ ಮನಸ್ಸಿಗೆ ಒಂದು ರೀತಿಯ ಖುಷಿ ಸಿಗುತ್ತದೆ. ಆದರೆ ಇದು ರುಚಿಗೆ ಮಾತ್ರವಲ್ಲ ಆರೋಗ್ಯಕ್ಕೂ ಕೂಡ ಒಳ್ಳೆಯದು. ಹೌದು, ಕೋಕೋ ನೈಸರ್ಗಿಕವಾಗಿ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು, ಸರಿಯಾಗಿ ತಯಾರಿಸಿದ ಹಾಟ್ ಚಾಕೊಲೇಟ್ ಆರೋಗ್ಯ ಮತ್ತು ಮಾನಸಿಕ ಸ್ಥಿತಿಗೆ ಪ್ರಯೋಜನಕಾರಿಯಾಗಿದೆ. ಹಾಗಾದರೆ ನಿಯಮಿತವಾಗಿ ಹಾಟ್ ಚಾಕೊಲೇಟ್ ಡ್ರಿಂಕ್ ಸೇವನೆಯಿಂದ ಆರೋಗ್ಯಕ್ಕೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ವೈದ್ಯರ ಪ್ರಕಾರ ಈ ಪಾನೀಯ ಮದ್ಯಕ್ಕಿಂತ ಅಪಾಯಕಾರಿ! ಕುಡಿದರೆ ನಿಮ್ಮ ಕಿಡ್ನಿ ಡಮಾರ್

ದೇಹದ ಪ್ರಮುಖ ಅಂಗಗಳಲ್ಲಿ ಕಿಡ್ನಿಯೂ ಒಂದು. ಇವು ಶೋಧಕಗಳಾಗಿ ಕಾರ್ಯನಿರ್ವಹಿಸುವ ಮೂಲಕ ಆರೋಗ್ಯ ಕಾಪಾಡುತ್ತವೆ. ಆದರೆ ಈ ಮೂತ್ರಪಿಂಡಗಳು ಹಾನಿಗೊಳಗಾದಾಗ, ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ದೇಹದ ಆರೋಗ್ಯಕ್ಕೆ ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ಆಲ್ಕೋಹಾಲ್ ಮಾತ್ರ ಕಿಡ್ನಿಗೆ ಹಾನಿ ಮಾಡುತ್ತದೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ಅದಕ್ಕಿಂತ ಅಪಾಯಕಾರಿ ಪಾನೀಯಗಳಿವೆ. ಹೌದು, ಇವುಗಳ ಬಗ್ಗೆ ಏಮ್ಸ್ ನ ಮೂತ್ರಶಾಸ್ತ್ರಜ್ಞ ಡಾ. ಪರ್ವೇಜ್ ತಮ್ಮ ಇನ್ಸ್ಟಾ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದು, ಈ ಕುರಿತ ಮತ್ತಷ್ಟು ಮಾಹಿತಿ ಪಡೆಯಲು ಸ್ಟೋರಿ ಓದಿ.

ವಿಟಮಿನ್ ಕೆ ಕೊರತೆ ಆದಾಗ ದೇಹ ನೀಡುವ ಈ ಸೂಚನೆಗಳನ್ನು ಎಂದಿಗೂ ಕಡೆಗಣಿಸಬೇಡಿ!

ವಿಟಮಿನ್ ಕೆ ದೇಹಕ್ಕೆ ಬಹಳ ಮುಖ್ಯ. ಆದರೆ ಇದರ ಕೊರತೆಯನ್ನು ನಿರ್ಲಕ್ಷ್ಯ ಮಾಡುವವರೇ ಹೆಚ್ಚು. ವಿವಿಧ ಕಾರಣಗಳಿಂದ ದೇಹದಲ್ಲಿ ಇದರ ಕೊರತೆಯಾಗುತ್ತದೆ. ಆದರೆ ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಇದರ ಕೊರತೆಯನ್ನು ಗುರುತಿಸುವುದು ಎಷ್ಟು ಮುಖ್ಯವೋ ಅದನ್ನು ಸರಿಪಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಹಾಗಾದರೆ ವಿಟಮಿನ್ ಕೆ ಕೊರತೆಯಾದಾಗ ದೇಹದಲ್ಲಿ ಯಾವ ರೀತಿಯ ಲಕ್ಷಣಗಳು ಕಂಡುಬರುತ್ತದೆ, ಅದನ್ನು ತಡೆಯಲು ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ದೇಶದ ಹಲವು ನಗರಗಳಲ್ಲಿ ಡ್ರಗ್ಸ್ ದಾಸರಾಗುತ್ತಿದ್ದಾರೆ ಮಕ್ಕಳು: ಸಮೀಕ್ಷೆ ಪಟ್ಟಿಯಲ್ಲಿದೆ ಕರ್ನಾಟಕದ ಈ ನಗರದ ಹೆಸರು

ಇತ್ತೀಚಿಗೆ ಶಾಲಾ ಮಕ್ಕಳಲ್ಲಿ ನಡೆಸಿದ ಸಂಶೋಧನೆಯೊಂದು ಆಘಾತಕಾರಿ ಅಂಶವನ್ನು ಬಹಿರಂಗಪಡಿಸಿದ್ದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇದು ತಿಳಿಸಿರುವ ಮಾಹಿತಿ ಪ್ರಕಾರ, ಶೇ.15 ರಷ್ಟು ವಿದ್ಯಾರ್ಥಿಗಳು ಮಾದಕ ದ್ರವ್ಯಗಳನ್ನು ಬಳಸಿದ್ದಾರೆ ಎಂದು ಸಂಶೋಧನೆ ಕಂಡುಹಿಡಿದಿದೆ. ಇನ್ನು ಹೆಚ್ಚುವರಿಯಾಗಿ, ಶೇ. 10.3 ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದಲ್ಲಿ ಇದನ್ನು ಬಳಸಿದ್ದು, ಶೇ. 7.2 ರಷ್ಟು ಮಕ್ಕಳು ಇದನ್ನು ಕಳೆದ ತಿಂಗಳು ಬಳಸಿದ್ದಾರೆ ಎಂದು ಹೇಳಿದೆ. ಈ ಸಮೀಕ್ಷೆ ದೇಶದ 10 ನಗರಗಳಲ್ಲಿ ನಡೆದಿದ್ದು ನಮ್ಮ ಬೆಂಗಳೂರು ಕೂಡ ಈ ಲಿಸ್ಟ್ ನಲ್ಲಿದೆ.

ಚಿಯಾ ಸೀಡ್ಸ್ ಸೇವನೆಯಿಂದ ಮೂಲವ್ಯಾಧಿಯನ್ನು ಕಡಿಮೆ ಮಾಡಬಹುದೇ… ಇಲ್ಲಿದೆ ತಜ್ಞರ ಅಭಿಪ್ರಾಯ

ಚಿಯಾ ಸೀಡ್ಸ್ ಗಳನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಬೆಳಿಗ್ಗೆ ನೆನೆಸಿದ ಚಿಯಾ ಬೀಜಗಳನ್ನು ಸೇವಿಸುವುದರಿಂದ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಕುಳಿತುಕೊಂಡು ಮಾಡುವ ಕಚೇರಿ ಕೆಲಸಗಳು ಹೆಚ್ಚಾಗುತ್ತಿದ್ದು ಇದು ನಾನಾ ರೀತಿಯ ರೋಗಗಳನ್ನು ಆಹ್ವಾನಿಸುತ್ತದೆ. ಹಾಗಾಗಿ ಇದರಿಂದ ಮುಕ್ತಿ ಪಡೆಯಲು ಮತ್ತು ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಲು ಕೇವಲ ಚಿಯಾ ಬೀಜಗಳನ್ನು ಬಳಕೆ ಮಾಡಬಹದು. ಈ ಕುರಿತ ಮತ್ತಷ್ಟು ಮಾಹಿತಿ ಇಲ್ಲಿದೆ.

ನಿಮಗೂ ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವ ಅಭ್ಯಾಸ ಇದ್ಯಾ, ಹಾಗಿದ್ರೆ ಈ ಸ್ಟೋರಿಯನ್ನು ಮಿಸ್ ಮಾಡ್ದೆ ನೋಡಿ

ಹೆಚ್ಚಿನವರು ಚಹಾದ ಜೊತೆಗೆ ಬಿಸ್ಕತ್ತುಗಳನ್ನು ತಿನ್ನಲು ಬಯಸುತ್ತಾರೆ. ಈ ಅಭ್ಯಾಸ ಕೆಲವರಿಗೆ ಬಹಳ ಇಷ್ಟ. ಅಷ್ಟು ಮಾತ್ರವಲ್ಲ, ಹಲವರು ಇದನ್ನು ಆರೋಗ್ಯಕರ ಆಯ್ಕೆಯೆಂದು ತಿಳಿದಿರುತ್ತಾರೆ. ಆದರೆ ಚಹಾ ಮತ್ತು ಬಿಸ್ಕತ್ತುಗಳ ಸಂಯೋಜನೆ ತಂಬಾಕಿನಷ್ಟೇ ಅಪಾಯಕಾರಿಯಾಗಿದ್ದು ಆರೋಗ್ಯಕ್ಕೆ ಹಾನಿ ಮಾಡುತ್ತದೆ ಎಂಬುದು ಕೆಲವರಿಗೆ ತಿಳಿದಿಲ್ಲ. ಹೌದು, ಚಹಾದೊಂದಿಗೆ ಬಿಸ್ಕತ್ತು ತಿನ್ನುವುದು ಆರೋಗ್ಯಕರ ಆಯ್ಕೆಯಲ್ಲ. ನೀವು ಕೂಡ ಚಹಾ ಜೊತೆ ಬಿಸ್ಕತ್ತು ತಿನ್ನುವುದನ್ನು ಇಷ್ಟ ಪಡುತ್ತಿದ್ದರೆ ಈ ಸ್ಟೋರಿಯನ್ನು ತಪ್ಪದೆ ಓದಿ.