ಮದ್ಯ ಸಿಕ್ಕಿದ ಖುಷಿಗೆ ಹನುಮಂತ‌ ದೇವರಿಗೆ ಮದ್ಯವೇ ನೈವೇದ್ಯ!

ಬಾಗಲಕೋಟೆ: 40 ದಿನಗಳ ಬಳಿಕ ಮದ್ಯದಂಗಡಿಗಲು ಓಪನ್ ಆಗಿವೆ. ಹೀಗಾಗಿ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇಲ್ಲೊಬ್ಬ ಕುಡುಕ ಮದ್ಯಸಿಕ್ಕ ಖುಷಿಗೆ ಹನುಮಂತ‌ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಧ್ಯಾನ ಮಾಡಿ, ನೈವೇದ್ಯ ಅರ್ಪಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್​ ಬಳಿ ನಡೆದಿದೆ. ಮದ್ಯದಂಗಡಿ ಶುರುವಾಗಿದ್ದೇ ತಡ ಸಂಭ್ರಮದಿಂದ ಮದ್ಯ ಖರೀದಿಸಿ ಹನುಮಾನ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಎರಡೂ ಕೈ ಮುಗಿದು ಧ್ಯಾನ ಮಾಡಿದ್ದಾನೆ. ನಂತರ ದೇವರಿಗೆ […]

ಮದ್ಯ ಸಿಕ್ಕಿದ ಖುಷಿಗೆ ಹನುಮಂತ‌ ದೇವರಿಗೆ ಮದ್ಯವೇ ನೈವೇದ್ಯ!
ಸಾಧು ಶ್ರೀನಾಥ್​

Updated on: May 04, 2020 | 12:34 PM

ಬಾಗಲಕೋಟೆ: 40 ದಿನಗಳ ಬಳಿಕ ಮದ್ಯದಂಗಡಿಗಲು ಓಪನ್ ಆಗಿವೆ. ಹೀಗಾಗಿ ಮದ್ಯ ಪ್ರಿಯರು ಫುಲ್ ಖುಷ್ ಆಗಿದ್ದಾರೆ. ಇಲ್ಲೊಬ್ಬ ಕುಡುಕ ಮದ್ಯಸಿಕ್ಕ ಖುಷಿಗೆ ಹನುಮಂತ‌ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಧ್ಯಾನ ಮಾಡಿ, ನೈವೇದ್ಯ ಅರ್ಪಿಸಿರುವ ಘಟನೆ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲ್ಲೂಕಿನ ಕುಳಗೇರಿ ಕ್ರಾಸ್​ ಬಳಿ ನಡೆದಿದೆ.

ಮದ್ಯದಂಗಡಿ ಶುರುವಾಗಿದ್ದೇ ತಡ ಸಂಭ್ರಮದಿಂದ ಮದ್ಯ ಖರೀದಿಸಿ ಹನುಮಾನ ದೇವಸ್ಥಾನಕ್ಕೆ ತೆರಳಿ ದೇವರ ಮೂರ್ತಿ ಮುಂದೆ ಮದ್ಯವಿಟ್ಟು ಎರಡೂ ಕೈ ಮುಗಿದು ಧ್ಯಾನ ಮಾಡಿದ್ದಾನೆ. ನಂತರ ದೇವರಿಗೆ ಸಾರಾಯಿ ನೈವೇದ್ಯ ಅರ್ಪಿಸಿ ತೆರಳಿದ್ದಾನೆ.

Published On - 12:11 pm, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us