ಅಕ್ರಮ ಸಂಬಂಧ: ಪ್ರಶ್ನಿಸಲು ಹೋದ ಪತಿ ಮೇಲೆ ನಾಯಿ ಛೂ ಬಿಟ್ಟ ಕಿರಾತಕ!

ಹುಬ್ಬಳ್ಳಿ: ಅಕ್ರಮ ಸಂಬಂಧ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತಿರಾಯನ‌‌ ಮೇಲೆ ನಾಯಿಯನ್ನು ಛೂಬಿಟ್ಟು, ಹಲ್ಲೆ ಮಾಡಿರುವ ಘಟನೆ ಕೇಶ್ವಾಪುರದ ಮುಕ್ತಿಧಾಮದ ಬಳಿ ನಡೆದಿದೆ. ಪತಿ ಸಂತೋಷ್ ಮೇಲೆ ಪತ್ನಿ ರೂಪಾದೇವಿ ಹಾಗೂ ಪ್ರಿಯಕರ ಸನ್ನಿ ಹಲ್ಲೆ ಮಾಡಿದ್ದಾರೆ. ರೂಪಾದೇವಿ ಜೊತೆ ಸನ್ನಿ ಎಂಬುವನು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಈ ವಿಷಯವನ್ನ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಸಂತೋಷ್ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಸಂತೋಷ್ ಕಾಂಬ್ಳೆ […]

ಅಕ್ರಮ ಸಂಬಂಧ: ಪ್ರಶ್ನಿಸಲು ಹೋದ ಪತಿ ಮೇಲೆ ನಾಯಿ ಛೂ ಬಿಟ್ಟ ಕಿರಾತಕ!
ಸಾಧು ಶ್ರೀನಾಥ್​

Updated on: Mar 07, 2020 | 9:35 AM

ಹುಬ್ಬಳ್ಳಿ: ಅಕ್ರಮ ಸಂಬಂಧ ಬಗ್ಗೆ ಪ್ರಶ್ನಿಸಿದ್ದಕ್ಕೆ ಪತಿರಾಯನ‌‌ ಮೇಲೆ ನಾಯಿಯನ್ನು ಛೂಬಿಟ್ಟು, ಹಲ್ಲೆ ಮಾಡಿರುವ ಘಟನೆ ಕೇಶ್ವಾಪುರದ ಮುಕ್ತಿಧಾಮದ ಬಳಿ ನಡೆದಿದೆ. ಪತಿ ಸಂತೋಷ್ ಮೇಲೆ ಪತ್ನಿ ರೂಪಾದೇವಿ ಹಾಗೂ ಪ್ರಿಯಕರ ಸನ್ನಿ ಹಲ್ಲೆ ಮಾಡಿದ್ದಾರೆ.

ರೂಪಾದೇವಿ ಜೊತೆ ಸನ್ನಿ ಎಂಬುವನು ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಹೀಗಾಗಿ ಈ ವಿಷಯವನ್ನ ಪ್ರಶ್ನಿಸಲು ಹೋದಾಗ ಹಲ್ಲೆ ಮಾಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಬಂದ ಸಂತೋಷ್ ಕುಟುಂಬಸ್ಥರ ಮೇಲೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಸಂತೋಷ್ ಕಾಂಬ್ಳೆ ಸೇರಿ ಇಬ್ಬರಿಗೆ ಗಾಯಗಳಾಗಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆ ಸಂಬಂಧ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 9:34 am, Sat, 7 March 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us