‘ಯಾವ ಸಿಎಂಗೂ ನಾನು ಕಮ್ಮಿಯಿಲ್ಲ, ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಬಂದಿತ್ತು’

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ಯಾರು ಮಿನಿಸ್ಟರ್ ಮಾಡಿದರೂ. ಏನು ಮಾಡಿದರೂ.. ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗುಡುಗಿದ್ದಾರೆ. ನನ್ನನ್ನ ಹೊಸಕೋಟೆಗೆ ಕರೆತಂದಿದ್ದ ಎಸ್​.ಎಂ.ಕೃಷ್ಣ: ಎಂಟಿಬಿಯನ್ನ ಹೊಸಕೋಟೆಗೆ ಕರೆದು ತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ. ಇಲ್ಲಿ ಕಾಂಗ್ರೆಸ್​ನಿಂದ ನಿಂತು ಮುನೇಗೌಡರು ಮೂರು ಬಾರಿ ಸೋತಿದ್ರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್​ನಲ್ಲಿ ನನ್ನನ್ನು ತಂದು ನಿಲ್ಲಿಸಿದ್ರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಾಯಿತೇ […]

‘ಯಾವ ಸಿಎಂಗೂ ನಾನು ಕಮ್ಮಿಯಿಲ್ಲ, ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಬಂದಿತ್ತು’
ಸಾಧು ಶ್ರೀನಾಥ್​

Updated on: Nov 25, 2019 | 6:07 PM

ಬೆಂಗಳೂರು ಗ್ರಾಮಾಂತರ: ಹೊಸಕೋಟೆ ಕ್ಷೇತ್ರದಲ್ಲಿ ನಾನು ಈಗಾಗಲೇ ಗೆದ್ದಿದ್ದೇನೆ. ಯಾರು ಮಿನಿಸ್ಟರ್ ಮಾಡಿದರೂ. ಏನು ಮಾಡಿದರೂ.. ನಾನು ಯಾವ ಸಿಎಂಗೂ ಕಮ್ಮಿ ಇಲ್ಲ ಎಂದು ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಗುಡುಗಿದ್ದಾರೆ.

ನನ್ನನ್ನ ಹೊಸಕೋಟೆಗೆ ಕರೆತಂದಿದ್ದ ಎಸ್​.ಎಂ.ಕೃಷ್ಣ:
ಎಂಟಿಬಿಯನ್ನ ಹೊಸಕೋಟೆಗೆ ಕರೆದು ತಂದು ನಿಲ್ಲಿಸಿದ್ದು ಎಸ್.ಎಂ.ಕೃಷ್ಣ. ಇಲ್ಲಿ ಕಾಂಗ್ರೆಸ್​ನಿಂದ ನಿಂತು ಮುನೇಗೌಡರು ಮೂರು ಬಾರಿ ಸೋತಿದ್ರು. ಅದಕ್ಕೆ ಗತಿ ಇಲ್ಲದೆ ಈ ಮಿನಿ ಬಿಹಾರ್​ನಲ್ಲಿ ನನ್ನನ್ನು ತಂದು ನಿಲ್ಲಿಸಿದ್ರು. ಈ ಭಾಗದಲ್ಲಿ ನನ್ನಿಂದಾಗಿ ಕಾಂಗ್ರೆಸ್​ಗೆ ವರ್ಚಸ್ಸು ಹೆಚ್ಚಾಯಿತೇ ವಿನಹ ಕಾಂಗ್ರೆಸ್​ನಿಂದ ನನಗಲ್ಲ ಎಂದು ಶರತ್ ಬಚ್ಚೇಗೌಡ, ಡಿಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ದ ಎಂಟಿಬಿ ನಾಗರಾಜ್ ಕಿಡಿಕಾರಿದ್ದಾರೆ.

ಶರತ್​ಗೆ ಬುದ್ಧಿ ಭ್ರಮಣೆಯಾಗಿದೆ:
ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಶರತ್ ಬಚ್ಚೇಗೌಡಗೆ ಬುದ್ಧಿಭ್ರಮಣೆಯಾಗಿದೆ. ನಾನು ಸತ್ಯವಾಗಲೂ ಯಾರಿಗೂ ಯಾವ ಬೆಲೆಯನ್ನ ಕಟ್ಟಿಲ್ಲ. ರಿಯಲ್ ಎಸ್ಟೇಟ್​ ಸೈಟ್ ಮಾದರಿಯಲ್ಲಿ ಜನ ನಾಯಕರಿಗೆ ಬೆಲೆ ಕಟ್ಟುತ್ತಿರುವ ಶರತ್ ಆರೋಪಕ್ಕೆ ಎಂಟಿಬಿ ತಿರುಗೇಟು ನೀಡಿದ್ದಾರೆ.

Published On - 5:32 pm, Mon, 25 November 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us