ಪಾರ್ಕಿಂಗ್ ವಿಚಾರಕ್ಕೆ ಟ್ರಾಫಿಕ್ ಪೇದೆ ಬಿಎಂಟಿಸಿ ಡ್ರೈವರ್ ನಡುವೆ ಜಟಾಪಟಿ

ಬೆಂಗಳೂರು: ನಡು ರೋಡ್​​ನಲ್ಲಿ ಬಿಎಂಟಿಸಿ ಡ್ರೈವರ್ ಮತ್ತು ಟ್ರಾಫಿಕ್ ಪೊಲೀಸ್​ ಪೇದೆ ಮಧ್ಯೆ ಜಟಾಪಟಿ ನಡೆದು ಬಸ್​ ಪ್ರಯಾಣಿಕರು ಮತ್ತು ಇತರೆ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ.  ಸಿಲ್ಕ್ ಬೋರ್ಡ್ ನಲ್ಲಿ ಬಿಎಂಟಿಸಿ ಬಸ್ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಬಿಎಂಟಿಸಿ ಡ್ರೈವರ್ ನಡುವಣ ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ದುರದೃಷ್ಟಕರ. ಜನ ರಸ್ತೆಯಲ್ಲಿ ಓಡಾಡುತ್ತಿದ್ರೂ ಬಸ್ಸಿನ ಸ್ಟೇರಿಂಗ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್ ಒಂದು ಕಡೆಯಾದ್ರೆ ಸ್ಟೇರಿಂಗ್ […]

ಪಾರ್ಕಿಂಗ್ ವಿಚಾರಕ್ಕೆ ಟ್ರಾಫಿಕ್ ಪೇದೆ ಬಿಎಂಟಿಸಿ ಡ್ರೈವರ್ ನಡುವೆ ಜಟಾಪಟಿ
ಸಾಧು ಶ್ರೀನಾಥ್​

Updated on: Oct 19, 2019 | 4:50 PM

ಬೆಂಗಳೂರು: ನಡು ರೋಡ್​​ನಲ್ಲಿ ಬಿಎಂಟಿಸಿ ಡ್ರೈವರ್ ಮತ್ತು ಟ್ರಾಫಿಕ್ ಪೊಲೀಸ್​ ಪೇದೆ ಮಧ್ಯೆ ಜಟಾಪಟಿ ನಡೆದು ಬಸ್​ ಪ್ರಯಾಣಿಕರು ಮತ್ತು ಇತರೆ ವಾಹನ ಸವಾರರು ಪರದಾಡಿದ ಪ್ರಸಂಗ ನಡೆದಿದೆ.  ಸಿಲ್ಕ್ ಬೋರ್ಡ್ ನಲ್ಲಿ ಬಿಎಂಟಿಸಿ ಬಸ್ ಪಾರ್ಕಿಂಗ್ ಮಾಡೋ ವಿಚಾರದಲ್ಲಿ ಟ್ರಾಫಿಕ್ ಪೊಲೀಸ್ ಮತ್ತು ಬಿಎಂಟಿಸಿ ಡ್ರೈವರ್ ನಡುವಣ ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದು ದುರದೃಷ್ಟಕರ.

ಜನ ರಸ್ತೆಯಲ್ಲಿ ಓಡಾಡುತ್ತಿದ್ರೂ ಬಸ್ಸಿನ ಸ್ಟೇರಿಂಗ್ ಹಿಡಿದು ಎಳೆದಾಡಿದ ಟ್ರಾಫಿಕ್ ಪೊಲೀಸ್ ಒಂದು ಕಡೆಯಾದ್ರೆ ಸ್ಟೇರಿಂಗ್ ಮುಟ್ಟಬೇಡಿ ಅಂತಾ ಡ್ರೈವರ್ ಗಲಾಟೆ ಮಾಡತೊಡಗಿದ. ಈ ನಡುವೆ ಟ್ರಾಫಿಕ್ ಪೊಲೀಸ್ ಡ್ರೈವರ್ ಫೋನ್ ಕಿತ್ಕೊಂಡು ಹೋದ ಘಟನೆಯೂ ನಡೆದಿದೆ. ಅದೂ ಸಾಲದು ಅಂತಾ ಟ್ರಾಫಿಕ್ ಪೊಲೀಸ್ ಪೇದೆ, ಬಸ್ ಕೀಯನ್ನೇ ಎತ್ತಿಕೊಂಡು ಹೋದರು.


Published On - 4:46 pm, Sat, 19 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us