PUBG ಗೇಮ್ ಹುಚ್ಚು: ರಿಚಾರ್ಜ್​ ಮಾಡಿಸದಿದ್ದಕ್ಕೆ ಹಾವೇರಿಯಲ್ಲಿ ಯುವಕ ಆತ್ಮಹತ್ಯೆ

ಹಾವೇರಿ: PUBG ಗೇಮ್ ಆಡುವುದು ಬೇಡ ಎಂದು ತಂದೆ ಬೈದಿದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದಲ್ಲಿ ನಡೆದಿದೆ. ತೇಜಸ್ ಸಿಡ್ಲಾಪುರ (17) ಗೇಮ್​ಗೆ ಬಲಿಯಾದ ಯುವಕನಾಗಿದ್ದಾನೆ. ಮೊಬೈಲ್‌ನಲ್ಲಿ ಇಂಟರ್ನೆಟ್ ಖಾಲಿ ಆಗಿದೆ. ಹೀಗಾಗಿ ಯುವಕನಿಗೆ PUBG ಗೇಮ್ ಸಾಧ್ಯವಾಗಿಲ್ಲ ಇದರಿಂದ ಯುವಕ ತನ್ನ ತಂದೆಯನ್ನು ಇಂಟರ್ನೆಟ್ ಹಾಕಿಸುವಂತೆ ಕೇಳಿದ್ದಾನೆ. SSLC ಮುಗಿಸಿ ಕಾಲೇಜಿಗೆ ಸೇರಬೇಕಿದ್ದ ಯುವಕ ಕೋಪಗೊಂಡ ತಂದೆ PUBG ಗೇಮ್ ಆಡುವುದನ್ನು ಬಿಡು ಎಂದು ಬೈದಿದ್ದಾರೆ. ತಂದೆಯ […]

PUBG ಗೇಮ್ ಹುಚ್ಚು: ರಿಚಾರ್ಜ್​ ಮಾಡಿಸದಿದ್ದಕ್ಕೆ ಹಾವೇರಿಯಲ್ಲಿ ಯುವಕ ಆತ್ಮಹತ್ಯೆ
ಪ್ರಾತಿನಿಧಿಕ ಚಿತ್ರ
ಸಾಧು ಶ್ರೀನಾಥ್​

Updated on: Sep 10, 2020 | 4:06 PM

ಹಾವೇರಿ: PUBG ಗೇಮ್ ಆಡುವುದು ಬೇಡ ಎಂದು ತಂದೆ ಬೈದಿದಕ್ಕೆ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿ ಜಿಲ್ಲೆಯ ಸಂಗೂರ ಗ್ರಾಮದಲ್ಲಿ ನಡೆದಿದೆ.

ತೇಜಸ್ ಸಿಡ್ಲಾಪುರ (17) ಗೇಮ್​ಗೆ ಬಲಿಯಾದ ಯುವಕನಾಗಿದ್ದಾನೆ. ಮೊಬೈಲ್‌ನಲ್ಲಿ ಇಂಟರ್ನೆಟ್ ಖಾಲಿ ಆಗಿದೆ. ಹೀಗಾಗಿ ಯುವಕನಿಗೆ PUBG ಗೇಮ್ ಸಾಧ್ಯವಾಗಿಲ್ಲ ಇದರಿಂದ ಯುವಕ ತನ್ನ ತಂದೆಯನ್ನು ಇಂಟರ್ನೆಟ್ ಹಾಕಿಸುವಂತೆ ಕೇಳಿದ್ದಾನೆ.

SSLC ಮುಗಿಸಿ ಕಾಲೇಜಿಗೆ ಸೇರಬೇಕಿದ್ದ ಯುವಕ
ಕೋಪಗೊಂಡ ತಂದೆ PUBG ಗೇಮ್ ಆಡುವುದನ್ನು ಬಿಡು ಎಂದು ಬೈದಿದ್ದಾರೆ. ತಂದೆಯ ಬೈಗುಳದಿಂದ ನೊಂದ ಯುವಕ ಅಗಸ್ಟ್ 31 ರಂದು ವಿಷ ಸೇವಿಸಿದ್ದಾನೆ. ಕೂಡಲೇ ಮನೆಯವರು ಯುವಕನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿದ್ದಾರೆ.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಇಂದು ಸಾವನ್ನಪ್ಪಿದ್ದಾನೆ. SSLC ಮುಗಿಸಿ ಕಾಲೇಜಿಗೆ ಸೇರಬೇಕಿದ್ದ ಯುವಕ ಸಾವನ್ನಪ್ಪಿರುವುದು ಕುಟುಂಬಸ್ಥರಿಗೆ ಭಾರಿ ನೋವುಂಟು ಮಾಡಿದೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us