ಆಟವಾಡುವಾಗ ಆಯ ತಪ್ಪಿ ಪಾಳುಬಾವಿಗೆ ಬಿದ್ದು ಬಾಲಕ ಸಾವು

ಕೊಡಗು: ಆಟವಾಡುವಾಗ ಆಯ ತಪ್ಪಿ ನೀರು ಇದ್ದ ಪಾಳುಬಾವಿಗೆ ಬಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದ ಸುಲೆಮಾನ್ ಪುತ್ರ ನಿಜಾಮುದ್ದಿನ್(11) ಮೃತ ಬಾಲಕ. ತಮ್ಮ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಕಾಲುಜಾರಿ ಬಾಲಕ ತೆರೆದ ಬಾವಿಗೆ ಬಿದ್ದಿದ್ದಾನೆ. ಸುಮಾರು 25 ಅಡಿ ಆಳದ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಟವಾಡುವಾಗ ಆಯ ತಪ್ಪಿ ಪಾಳುಬಾವಿಗೆ ಬಿದ್ದು ಬಾಲಕ ಸಾವು

Updated on: Nov 05, 2020 | 6:11 PM

ಕೊಡಗು: ಆಟವಾಡುವಾಗ ಆಯ ತಪ್ಪಿ ನೀರು ಇದ್ದ ಪಾಳುಬಾವಿಗೆ ಬಿದ್ದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ.

ವಿರಾಜಪೇಟೆ ತಾಲೂಕಿನ ಅಂಬಟ್ಟಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು, ಗ್ರಾಮದ ಸುಲೆಮಾನ್ ಪುತ್ರ ನಿಜಾಮುದ್ದಿನ್(11) ಮೃತ ಬಾಲಕ.

ತಮ್ಮ ತೋಟದಲ್ಲಿ ಆಟವಾಡುತ್ತಿದ್ದ ವೇಳೆ ಕಾಲುಜಾರಿ ಬಾಲಕ ತೆರೆದ ಬಾವಿಗೆ ಬಿದ್ದಿದ್ದಾನೆ. ಸುಮಾರು 25 ಅಡಿ ಆಳದ ಬಾವಿಗೆ ಬಿದ್ದು ಮೃತಪಟ್ಟಿದ್ದಾನೆ. ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.