ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಭೂಪ!

ಕೋಲಾರ: ಮೋಸ ಹೋಗುವವರಿಗೆ ಯಾವ ಕಾಲವಾದರೇನು? ಕೊರೊನಾ ಸಂಕಷ್ಟ ಇದ್ದರೇನು? ಯಾವಾಗಾದರೇನು? ಮೋಸ ಹೋಗೋಕ್ಕೆ ನಾವು ಸಿದ್ಧವಿದ್ದೇವೆ ಅನ್ನುವವವರು ಇರುವಾಗ ದೊಡ್ಡದಾಗಿ ಪಂಗನಾಮ ತಿಕ್ಕುವ ಜನರೂ ಹೊಂಚುಹಾಕಿ ಕುಳಿತಿರುತ್ತಾರೆ! ಅಲ್ವಾ? ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಆಸಾಮಿ! ಚಿಕ್ಕತಿರುಪತಿಯ ಶ್ರೀನಿವಾಸಯ್ಯ ಎಂಬ ಐನಾತಿ ಆಸಾಮಿ ಚೀಟಿ ವ್ಯವಹಾರದಲ್ಲಿ ಇತ್ತೀಚೆಗೆ 4 ಕೋಟಿ ರೂಪಾಯಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿಯಲ್ಲಿ ಈ ಉಂಡೆನಾಮ ಪ್ರಕರಣ ನಡೆದಿದೆ. ಇಲ್ಲಿನ ಜನ 2, […]

ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಭೂಪ!
ಸಾಧು ಶ್ರೀನಾಥ್​ Edited By:

Updated on: May 25, 2020 | 2:16 PM

ಕೋಲಾರ: ಮೋಸ ಹೋಗುವವರಿಗೆ ಯಾವ ಕಾಲವಾದರೇನು? ಕೊರೊನಾ ಸಂಕಷ್ಟ ಇದ್ದರೇನು? ಯಾವಾಗಾದರೇನು? ಮೋಸ ಹೋಗೋಕ್ಕೆ ನಾವು ಸಿದ್ಧವಿದ್ದೇವೆ ಅನ್ನುವವವರು ಇರುವಾಗ ದೊಡ್ಡದಾಗಿ ಪಂಗನಾಮ ತಿಕ್ಕುವ ಜನರೂ ಹೊಂಚುಹಾಕಿ ಕುಳಿತಿರುತ್ತಾರೆ! ಅಲ್ವಾ?

ಚಿಕ್ಕ ತಿರುಪತಿಯಲ್ಲಿ ದೊಡ್ಡದೇ ಉಂಡೆನಾಮ ತಿಕ್ಕಿದ ಆಸಾಮಿ!
ಚಿಕ್ಕತಿರುಪತಿಯ ಶ್ರೀನಿವಾಸಯ್ಯ ಎಂಬ ಐನಾತಿ ಆಸಾಮಿ ಚೀಟಿ ವ್ಯವಹಾರದಲ್ಲಿ ಇತ್ತೀಚೆಗೆ 4 ಕೋಟಿ ರೂಪಾಯಿ ವಂಚನೆ ಎಸಗಿದ್ದಾನೆ ಎನ್ನಲಾಗಿದೆ. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಚಿಕ್ಕ ತಿರುಪತಿಯಲ್ಲಿ ಈ ಉಂಡೆನಾಮ ಪ್ರಕರಣ ನಡೆದಿದೆ.

ಇಲ್ಲಿನ ಜನ 2, 3, 5 ಲಕ್ಷ ರೂ. ಚೀಟಿ ವ್ಯವಹಾರ ಮಾಡುತ್ತಿದ್ದರು. ಹೀಗೆ ಸುಮಾರು 200-300 ಜನರಿಂದ ಹಣ ಪಡೆದು ಆ ವ್ಯಕ್ತಿ ಪರಾರಿಯಾಗಿದ್ದಾನೆ. ಶ್ರೀನಿವಾಸಯ್ಯ ಮನೆ ಮುಂದೆ ಹಣ ಕಳೆದುಕೊಂಡವರು ಪ್ರತಿಭಟನೆ ನಡೆಸಿ, ಮಾಲೂರು ಪೊಲೀಸ್ ಠಾಣೆಯಲ್ಲಿ ಶ್ರೀನಿವಾಸಯ್ಯ ವಿರುದ್ಧ ದೂರು ದಾಖಲಿಸಿದ್ದಾರೆ.

Published On - 2:15 pm, Mon, 25 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us