AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!

ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್​ಡೌನ್​ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್​ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್​ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್​ಗಳು ಸಜ್ಜಾಗತೊಡಗಿವೆ. ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ. ಹಾಗಾಗಿ […]

ಶುರುವಾಯ್ತು ಧಾರಾವಾಹಿ ಚಿತ್ರೀಕರಣ.. ಹೇಗಿದೆ ವಾತಾವರಣ? Photos ನೋಡಿ!
ಸಾಧು ಶ್ರೀನಾಥ್​
|

Updated on: May 25, 2020 | 1:35 PM

Share

ಬೆಂಗಳೂರು: ಕಾಣದ ಕೊರೊನಾ ಕ್ರಿಮಿಯನ್ನುಹೊಸಕಿಹಾಕಲು ಜಾರಿಗೆ ತದಿರುವ ಲಾಕ್​ಡೌನ್​ನಿಂದಾಗಿ ಜನಪ್ರಿಯ ಟಿವಿ ಧಾರಾವಾಹಿಗಳ ಶೂಟಿಂಗ್ ನಿಂತೇ ಹೋಗಿತ್ತು. ಇದರಿಂದಾಗಿ ಮನೆಗಳಲ್ಲಿ ಬಂಧಿಯಾಗಿರುವ ಧಾರಾವಾಹಿ ಪ್ರಿಯರಿಗೆ ಟಿವಿಗಳಲ್ಲಿ ತಮ್ಮ ನೆಚ್ಚಿನ ಸೀರಿಯಲ್​ಗಳನ್ನು ವೀಕ್ಷಿಸುವ ಭಾಗ್ಯವೂ ಇಲ್ಲವಾಗಿತ್ತು. ಆದರೆ ಇಂದಿನಿಂದ ಶೂಟಿಂಗ್​ ಶುರುವಾಗಿದ್ದು, ಜನಕ್ಕೆ ಮನರಂಜನೆ ಒದಗಿಸಲು ಟಿವಿ ಚಾನೆಲ್​ಗಳು ಸಜ್ಜಾಗತೊಡಗಿವೆ.

ಧಾರಾವಾಹಿಗಳ ಚಿತ್ರೀಕರಣ ಇಂದಿನಿಂದ ಪ್ರಾರಂಭವಾಗಿದೆ. ಕಿರುತೆರೆ ಉದ್ಯಮ ಮಾ.19ರಿಂದ ಚಿತ್ರೀಕರಣ ನಿಲ್ಲಿಸಿತ್ತು. ಟೆಲಿವಿಷನ್ ಅಸೋಸಿಯೇಷನ್ ಮಾರ್ಗಸೂಚಿ ಪ್ರಕಾರ ಚಿತ್ರೀಕರಣ ನಡೆಸಲು ಧಾರಾವಾಹಿ ತಂಡಕ್ಕೆ ಸೂಚನೆ ನೀಡಲಾಗಿದೆ.

ಹಾಗಾಗಿ ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು. ಶೂಟಿಂಗ್ ಸ್ಪಾಟ್​ನಲ್ಲಿ 20ಕ್ಕೂ ಹೆಚ್ಚು ಜನರು ಸೇರದಂತೆ ಎಚ್ಚರ ವಹಿಸಬೇಕು. ಮೇಕಪ್‌ ಕಿಟ್‌ಗಳನ್ನು ಕಲಾವಿದರೇ ತರಬೇಕು ಎಂಬ ನಿಯಮಗಳನ್ನು ಕಡ್ಡಾಯಗೊಳಿಸಲಾಗಿದೆ ಪ್ರತಿ 2 ಗಂಟೆಗೊಮ್ಮೆ ಟೆಂಪರೇಚರ್ ಟೆಸ್ಟ್ ವರದಿಯನ್ನು ಚಾನಲ್ ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಳುಹಿಸಬೇಕು. ಈ ಸೂಚನೆಗಳಿಗೆ ಅನ್ವಯಪಟ್ಟು ಕಲಾವಿದರು ಮತ್ತು ತಾಂತ್ರಕವರ್ಗ ಇಂದಿನಿಂದ ಶೂಟಿಂಗ್ ಆಕ್ಷನ್ ಕಟ್ ಹೇಳಿದೆ.

ಕೊರೊನಾ ಸಂಕಷ್ಟದಿಂದ ನಲುಗಿದ್ದ ಕನ್ನಡ ಕಿರುತೆರೆಯಲ್ಲಿ ಚಟುವಟಿಕೆ ಗರಿಗೆದರಿದೆ. 2,000 ದಿಂದ 3,000 ಕಲಾವಿದರು, ತಂತ್ರಜ್ಞರು ಕಿರುತೆರೆಯನ್ನು ಅವಲಂಬಿಸಿದ್ದಾರೆ. ಜೂನ್ 1 ರಿಂದ ವಿವಿಧ ಧಾರಾವಾಹಿಗಳು ಹೊಸ ರೂಪದಲ್ಲಿ ಪ್ರದರ್ಶನಗೊಳ್ಳಲಿವೆ ಎಂದು ಉದ್ಯಮದ ಮೂಲಗಳು ಟಿವಿ9 ಗೆ ತಿಳಿಸಿವೆ.

ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ