PUC ಬೋರ್ಡ್ ಬಳಿ ಅಂಡರ್​ಪಾಸ್​ನಲ್ಲಿ ಸಿಕ್ಕಿಕೊಂಡ ಕಂಟೇನರ್, ತೆರವು ಹೇಗಾಯಿತು?

ಬೆಂಗಳೂರು: ನಗರದ ಮಹಾರಾಣಿ ಕಾಲೇಜು ಬಳಿಯ ಅಂಡರ್ ಪಾಸ್​ನಲ್ಲಿ ಕಂಟೇನರ್ ಲಾರಿ ಸಿಲುಕಿ, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಸೂರ್​ ಬ್ಯಾಂಕ್​ ವೃತ್ತದಿಂದ ಚಾಲುಕ್ಯ ವೃತ್ತದತ್ತ ಈ ಭಾರೀ ವಾಹನ ಸಂಚರಿಸುತ್ತಿತ್ತು. ಅಂಡರ್ ಪಾಸ್​ಗಿಂತ ಕಂಟೇನರ್ ಲಾರಿಯೇ ಎತ್ತರವಿದ್ದ ಕಾರಣ ಕೆಲಕಾಲ ಅಲ್ಲಿಯೇ ಲಾರಿ ಸಿಲುಕಿತ್ತು. ಇದರಿಂದ ಪ್ಯಾಲೇಸ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ, ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಕೊನೆಗೆ ಕಂಟೇನರ್ ಲಾರಿಯ ಟೈರ್​ಗಳಲ್ಲಿನ ಗಾಳಿಯನ್ನು ತೆಗೆದು ಲಾರಿಯನ್ನು ಅಲ್ಲಿಂದ ತೆರವು ಮಾಡಲಾಯಿತು. […]

PUC ಬೋರ್ಡ್ ಬಳಿ ಅಂಡರ್​ಪಾಸ್​ನಲ್ಲಿ ಸಿಕ್ಕಿಕೊಂಡ ಕಂಟೇನರ್, ತೆರವು ಹೇಗಾಯಿತು?
ಸಾಧು ಶ್ರೀನಾಥ್​

Updated on: Jan 18, 2020 | 10:59 AM

ಬೆಂಗಳೂರು: ನಗರದ ಮಹಾರಾಣಿ ಕಾಲೇಜು ಬಳಿಯ ಅಂಡರ್ ಪಾಸ್​ನಲ್ಲಿ ಕಂಟೇನರ್ ಲಾರಿ ಸಿಲುಕಿ, ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮೈಸೂರ್​ ಬ್ಯಾಂಕ್​ ವೃತ್ತದಿಂದ ಚಾಲುಕ್ಯ ವೃತ್ತದತ್ತ ಈ ಭಾರೀ ವಾಹನ ಸಂಚರಿಸುತ್ತಿತ್ತು.

ಅಂಡರ್ ಪಾಸ್​ಗಿಂತ ಕಂಟೇನರ್ ಲಾರಿಯೇ ಎತ್ತರವಿದ್ದ ಕಾರಣ ಕೆಲಕಾಲ ಅಲ್ಲಿಯೇ ಲಾರಿ ಸಿಲುಕಿತ್ತು. ಇದರಿಂದ ಪ್ಯಾಲೇಸ್ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಹೆಚ್ಚಾಗಿ, ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.

ಕೊನೆಗೆ ಕಂಟೇನರ್ ಲಾರಿಯ ಟೈರ್​ಗಳಲ್ಲಿನ ಗಾಳಿಯನ್ನು ತೆಗೆದು ಲಾರಿಯನ್ನು ಅಲ್ಲಿಂದ ತೆರವು ಮಾಡಲಾಯಿತು. ಬಳಿಕ ವಾಹನ ಸಂಚಾರ ಸುಗಮಗೊಂಡಿತು.


Published On - 10:55 am, Sat, 18 January 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us