AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಮ್ಮಾರಿಯ ಓಡಿಸಲು ಈ ಗ್ರಾಮದಲ್ಲಿ ಕೊರೊನಮ್ಮ ಪೂಜೆ ಮಾಡಿದ್ರು

ಬಳ್ಳಾರಿ: ಕೊರೊನಾ ಅನ್ನೋ ಮಹಾಮಾರಿ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇಡೀ ವಿಶ್ವವೇ ಡೆಡ್ಲಿ ವೈರಸ್​ಗೆ ಬೆಚ್ಚಿಬಿದ್ದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ಜನರು ಭಯ ಭೀತಿಗೊಂಡಿದ್ದಾರೆ. ಕೊರೊನಾದಿಂದ ಕಾಪಾಡುವಂತೆ ಗ್ರಾಮೀಣ ಭಾಗದ ಜನರು ದೇವರ ಮೊರೆ ಹೋಗಿದ್ದಾರೆ. ಕೊರೊನಾ ವೈರಸ್ ನಮ್ಮೂರಿಗೆ ಬರಬಾರದು ಅಂತಾ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಕೊರೊನಾ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಗ್ರಾಮದ ಪ್ರತಿಯೊಂದು […]

ಹೆಮ್ಮಾರಿಯ ಓಡಿಸಲು ಈ ಗ್ರಾಮದಲ್ಲಿ ಕೊರೊನಮ್ಮ ಪೂಜೆ ಮಾಡಿದ್ರು
ಸಾಧು ಶ್ರೀನಾಥ್​
|

Updated on:May 22, 2020 | 1:56 PM

Share

ಬಳ್ಳಾರಿ: ಕೊರೊನಾ ಅನ್ನೋ ಮಹಾಮಾರಿ ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇಡೀ ವಿಶ್ವವೇ ಡೆಡ್ಲಿ ವೈರಸ್​ಗೆ ಬೆಚ್ಚಿಬಿದ್ದಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇನ್ನೂ ಕೊರೊನಾ ಸೋಂಕಿಗೆ ಔಷಧಿ ಕಂಡುಹಿಡಿದಿಲ್ಲ. ಹೀಗಾಗಿ ಜನರು ಭಯ ಭೀತಿಗೊಂಡಿದ್ದಾರೆ. ಕೊರೊನಾದಿಂದ ಕಾಪಾಡುವಂತೆ ಗ್ರಾಮೀಣ ಭಾಗದ ಜನರು ದೇವರ ಮೊರೆ ಹೋಗಿದ್ದಾರೆ. ಕೊರೊನಾ ವೈರಸ್ ನಮ್ಮೂರಿಗೆ ಬರಬಾರದು ಅಂತಾ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಕೊರೊನಾ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಗ್ರಾಮದ ಪ್ರತಿಯೊಂದು ಮನೆಯವರು ಹೋಳಿಗೆ ಎಡೆಯಿಂದ ಪೂಜೆ ಮಾಡಿ ಕಟ್ಟಿಗೆಯಿಂದ ಮಾಡಿದ ಕೊರೊನಮ್ಮನಿಗೆ ಪೂಜೆ ಸಲ್ಲಿಸಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯ ಆಚರಣೆಗಳು ಮೊದಲಿನಿಂದಲೂ ನಡೆದುಕೊಂಡು ಬಂದಿವೆ. ಈ ಹಿಂದೆ ಗ್ರಾಮೀಣ ಭಾಗಗಳಲ್ಲಿ ಮಳೆಯಾಗದಿದ್ದರೆ ರೈತರು ಹಾಗೂ ಇಡೀ ಊರಿನ ಗ್ರಾಮಸ್ಥರು ಹೋಳಿಗೆ ಮಾಡಿ ಹೋಳಿಗೆಮ್ಮ ಎನ್ನುವ ಹೆಸರಿನ ಹಬ್ಬ ಮಾಡುತ್ತಿದ್ದರು. ಹೋಳಿಗೆ ಎಡೆ, ಬೇವಿನ ಸೊಪ್ಪು ಇಟ್ಟು ಹಳ್ಳಿಯ ಪ್ರತಿಯೊಂದು ಕುಟುಂಬದವರು ಹೋಗಿ ಊರ ಗಡಿಗೆ ಹೋಗಿ ಅಲ್ಲಿ ಎಡೆಯನ್ನು ಇಟ್ಟು ಬರುತ್ತಾರೆ. ಅಮ್ಮನ ಆಚರಣೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಈಗಲೂ ಜಿಲ್ಲೆಯಲ್ಲಿ ಇದ್ದು ಈ ಆಚರಣೆ ಪ್ರಚಲಿತದಲ್ಲಿದೆ.

ಇತರೆ ಕಾಯಿಲೆ ಬಂದಾಗಲೂ ಆಚರಣೆ ಮಾಡ್ತಾರೆ: ಅಷ್ಟೇ ಅಲ್ಲದೇ ಪ್ಲೇಗ್, ಮಲೇರಿಯಾ ಇತರೆ ಕಾಯಿಲೆಗಳು ಬಂದಾಗ ಇಡೀ ಊರನ್ನೇ ಖಾಲಿ ಮಾಡುವ ಗುಳೇದ ಲಕ್ಕಮ್ಮ ದೇವಿಯ ಆಚರಣೆಯನ್ನು ಈಗಲೂ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ, ಸಂಡೂರು, ಹಗರಿಬೊಮ್ಮನಹಳ್ಳಿ ತಾಲೂಕುಗಳಲ್ಲಿ ಮುಂದುವರೆಸಿಕೊಂಡು ಬರಲಾಗುತ್ತಿದೆ. ಇದೇ ರೀತಿ ಇತ್ತೀಚೆಗೆ ಚಿಕನ್ ಗುನ್ಯಾ ಬಂದಾಗಲೂ ಸಹ ಕುಂಟಮ್ಮ ಎನ್ನುವ ಹೆಸರಿನಲ್ಲಿ ಕಟ್ಟಿಗೆಯಲ್ಲಿ ಮೂರ್ತಿ ಮಾಡಿ ಅದಕ್ಕೆ ಪೂಜೆ ಮಾಡಿ ಊರ ಗಡಿಗೆ ತಂದು ಬಿಡುತ್ತಿರುವ ಆಚರಣೆ ಮಾಡಲಾಗುತ್ತಿದೆ. ನಂತರ ಅದನ್ನು ಮುಂದಿನ ಊರಿನವರು ಪೂಜೆ ಮಾಡಿ ನಂತರ ಮತ್ತೊಂದು ಊರಿನ ಗಡಿಗೆ ಅವರು ಬಿಡುತ್ತಾರೆ. ಈಗಲೂ ಈ ಆಚರಣೆಗಳು ಈ ಭಾಗದಲ್ಲಿ ರೂಢಿಯಲ್ಲಿವೆ.

ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಹೋಳಿಗೆ ಅಮ್ಮ, ಗುಳೇದ ಲಕ್ಕಮ್ಮ, ಕುಂಟಮ್ಮ ಆಚರಣೆಗಳು ನಡೆಯುತ್ತಿದ್ದು ಈ ಸಾಲಿಗೆ ಈಗ ಕೊರೊನಮ್ಮ ಆಚರಣೆ ಸೇರಿಕೊಂಡಿರುವುದು ವಿಶೇಷವಾಗಿದೆ. ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಕೊರೊನಮ್ಮ ದೇವಿಯ ಪೂಜೆಯನ್ನು ಇಡೀ ಊರೇ ಹಬ್ಬದ ರೀತಿ ಆಚರಿಸಿದೆ. ಇದೇ ರೀತಿಯ ಪೂಜೆ ಹಬ್ಬವನ್ನ ಇನ್ನು ಮುಂದೆ ಅಕ್ಕಪಕ್ಕದ ಗ್ರಾಮಗಳ ಜನತೆ ಆಚರಣೆ ಮಾಡುವ ದಿನಗಳು ದೂರವಿಲ್ಲ.

Published On - 1:27 pm, Fri, 22 May 20

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?