ಪಾದರಾಯನಪುರದಲ್ಲಿ ಮತ್ತೆ ಪುಂಡಾಟ: ಲಾಂಗ್, ಮಚ್ಚಿನಿಂದ ಅಟ್ಯಾಕ್!

ಬೆಂಗಳೂರು: ಕೊರೊನಾ ಹಾಟ್​ ಸ್ಪಾಟ್​ ಎನಿಸಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೆ ಪುಂಡಾಟ ನಡೆದಿದೆ. ಪಾದರಾಯನಪುರದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಲಾಂಗು ಮತ್ತು ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಪಾದರಾಯನಪುರದ ಕಿಡಿಗೇಡಿಗಳು ಕಳ್ಳದಾರಿ ಮೂಲಕ ಅಕ್ಕಪಕ್ಕದ ವಾರ್ಡ್​​ಗೆ ಬರ್ತಿರುವ ಹಿನ್ನೆಲೆ, ಕಳ್ಳದಾರಿಯ ಮೂಲಕ ಬರಬೇಡಿ ಎಂದಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ಮನವಿ ಮಾಡಿದವರ ಮೇಲೆ ಲಾಂಗು ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಕಿಡಿಗೇಡಿಗಳ ಕಲ್ಲುತೂರಾಟದಲ್ಲಿ ಒಂದು ಓಮ್ನಿ ಕಾರು ಜಖಂ ಅಗಿದೆ. ಕಳ್ಳ ದಾರಿ ಮೂಲಕ ಬದರಂತೆ […]

ಪಾದರಾಯನಪುರದಲ್ಲಿ ಮತ್ತೆ ಪುಂಡಾಟ: ಲಾಂಗ್, ಮಚ್ಚಿನಿಂದ ಅಟ್ಯಾಕ್!
ಸಾಧು ಶ್ರೀನಾಥ್​

Updated on: May 14, 2020 | 1:30 PM

ಬೆಂಗಳೂರು: ಕೊರೊನಾ ಹಾಟ್​ ಸ್ಪಾಟ್​ ಎನಿಸಿರುವ ಬೆಂಗಳೂರಿನ ಪಾದರಾಯನಪುರದಲ್ಲಿ ಮತ್ತೆ ಪುಂಡಾಟ ನಡೆದಿದೆ. ಪಾದರಾಯನಪುರದಲ್ಲಿ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಲಾಂಗು ಮತ್ತು ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.

ಪಾದರಾಯನಪುರದ ಕಿಡಿಗೇಡಿಗಳು ಕಳ್ಳದಾರಿ ಮೂಲಕ ಅಕ್ಕಪಕ್ಕದ ವಾರ್ಡ್​​ಗೆ ಬರ್ತಿರುವ ಹಿನ್ನೆಲೆ, ಕಳ್ಳದಾರಿಯ ಮೂಲಕ ಬರಬೇಡಿ ಎಂದಿದ್ದಕ್ಕೆ ಕಲ್ಲು ತೂರಾಟ ನಡೆಸಿದ್ದಾರೆ. ಮನವಿ ಮಾಡಿದವರ ಮೇಲೆ ಲಾಂಗು ಮಚ್ಚು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.

ಕಿಡಿಗೇಡಿಗಳ ಕಲ್ಲುತೂರಾಟದಲ್ಲಿ ಒಂದು ಓಮ್ನಿ ಕಾರು ಜಖಂ ಅಗಿದೆ. ಕಳ್ಳ ದಾರಿ ಮೂಲಕ ಬದರಂತೆ ಹೇಳಿದ್ದಾಗ ನಮ್ಮ ಮೇಲೆ ಲಾಂಗ್ ಮಚ್ಚಿನಿಂದ ಅಟ್ಯಾಕ್ ಮಾಡಲು ಬಂದ್ರು. ಸ್ವಲ್ಪದರಲ್ಲೇ ಮಿಸ್ ಆಗಿದ್ದೇವೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಕಳ್ಳ ದಾರಿ ಮುಚ್ಚಲು ಹೋದವರ ಮೇಲೂ ಅಟ್ಯಾಕ್ ನಡೆದಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us