ಕಾರ್ಪೊರೇಟರ್ ಗಂಡ ತಪಾಸಣೆಗೆ ಬಂದಾಗ ಸಗಣಿ ಎಸೆದರು

ಬೆಂಗಳೂರು: ಕೆಲ ಕಿಡಿಗೇಡಿಗಳು ಕಾರ್ಪೊರೇಟರ್ ಪತಿ ಮೇಲೆ ಸಗಣಿ ಎಸೆದಿರುವ ಘಟನೆ ಕಲಾಸಿಪಾಳ್ಯದಲ್ಲಿ ನಡೆದಿದೆ. ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿರುವ ಪ್ರತಿಭಾ ಧನರಾಜ್​ರ ಪತಿ ಧನರಾಜ್ ಕಲಾಸಿಪಾಳ್ಯದಲ್ಲಿ ಕೆಲವರು ಅಕ್ರಮವಾಗಿ ಅಂಗಡಿಗಳನ್ನ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ತಪಾಸಣೆ‌ಗೆ ಹೋಗಿದ್ದಾಗ ಕಿಡಿಗೇಡಿಗಳು ಕಾರ್ಪೋರೇಟರ್ ಪತಿ ಧನರಾಜ್ ಹಾಗೂ ಮಗನ ಮೇಲೆ ಸಗಣಿ ಎಸೆದಿದ್ದಾರೆ. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಿಡಿಗೇಡಿಗಳ ಕೃತ್ಯ ಖಂಡಿಸಿ ಧನರಾಜ್ ಬೆಂಬಲಿಗರು ಕಲಾಸಿಪಾಳ್ಯದ ರಸ್ತೆಯಲ್ಲಿ […]

ಕಾರ್ಪೊರೇಟರ್ ಗಂಡ ತಪಾಸಣೆಗೆ ಬಂದಾಗ ಸಗಣಿ ಎಸೆದರು
ಸಾಧು ಶ್ರೀನಾಥ್​

Updated on: May 13, 2020 | 1:37 PM

ಬೆಂಗಳೂರು: ಕೆಲ ಕಿಡಿಗೇಡಿಗಳು ಕಾರ್ಪೊರೇಟರ್ ಪತಿ ಮೇಲೆ ಸಗಣಿ ಎಸೆದಿರುವ ಘಟನೆ ಕಲಾಸಿಪಾಳ್ಯದಲ್ಲಿ ನಡೆದಿದೆ. ಕಲಾಸಿಪಾಳ್ಯ ವಾರ್ಡ್ ಕಾರ್ಪೊರೇಟರ್ ಆಗಿರುವ ಪ್ರತಿಭಾ ಧನರಾಜ್​ರ ಪತಿ ಧನರಾಜ್ ಕಲಾಸಿಪಾಳ್ಯದಲ್ಲಿ ಕೆಲವರು ಅಕ್ರಮವಾಗಿ ಅಂಗಡಿಗಳನ್ನ ಹಾಕಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಹೀಗಾಗಿ ಬಿಬಿಎಂಪಿ ಅಧಿಕಾರಿಗಳೊಂದಿಗೆ ತಪಾಸಣೆ‌ಗೆ ಹೋಗಿದ್ದಾಗ ಕಿಡಿಗೇಡಿಗಳು ಕಾರ್ಪೋರೇಟರ್ ಪತಿ ಧನರಾಜ್ ಹಾಗೂ ಮಗನ ಮೇಲೆ ಸಗಣಿ ಎಸೆದಿದ್ದಾರೆ. ಕೆಲ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಿಡಿಗೇಡಿಗಳ ಕೃತ್ಯ ಖಂಡಿಸಿ ಧನರಾಜ್ ಬೆಂಬಲಿಗರು ಕಲಾಸಿಪಾಳ್ಯದ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ. ಮೊದಲೇ ಸಗಣಿ ಪಾಕ್ಯೇಟ್​ಗಳನ್ನ ರೆಡಿ ಮಾಡಿ ಈ ರೀತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Published On - 8:16 am, Wed, 13 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us