
ಆದರೆ ಪ್ರಸಕ್ತ ಸೀಸನ್ನಲ್ಲಿ ಡ್ಯಾಡಿಗಳು ದಣಿದರೋ, ಸುಸ್ತಾದರೋ ಅಥವಾ ಎರಡು ವರ್ಷಗಳ ಹಿಂದೆ ಅವರಲ್ಲಿದ್ದ ಶಕ್ತಿ ಉಡುಗಿಹೋಗಿದೆಯೋ ಅನ್ನೋದು ಅವರಿಂದಲೇ ಗೊತ್ತಾಗಬೇಕು. ಇವರೆಲ್ಲ ನಿಷ್ಪ್ರಯೋಜಕರು ಅಂತ ಅವರ ದಣಿಗಳಿಗೆ ಗೊತ್ತಾಗಿದೆ. ಹಾಗಾಗೇ, ಅವರನ್ನು ಟೀಮಿನಿಂದ ಹೊರಹಾಕಿ ಯುವಕರನ್ನು ಸೇರಿಸಿಕೊಳ್ಳುವ ಯೋಚನೆ ನಡೆಯುತ್ತಿದೆ.
ಅಂದಹಾಗೆ, ಯಾರ ತಲೆದಂಡ ಆಗಲಿದೆ ಅನ್ನುವುದರ ಬಗ್ಗೆ ನೋಡುವುದಾದದರೆ, ಮೊದಲ ಸಾಲಿನಲ್ಲೇ ನಾಯಕ ಎಮ್ ಎಸ್ ಧೋನಿ ಕಾಣಿಸುತ್ತಾರೆ. ಆದರೆ, ಟೀಮ್ ಮ್ಯಾನೇಜ್ಮೆಂಟ್ ಅವರನ್ನು ಅಷ್ಟು ಕಠೋರವಾಗಿ ನಡೆಸಿಕೊಳ್ಳಲಾರದು. ಯಾಕೆಂದರೆ, ರಾಂಚಿಯ ರಾಕ್ಸ್ಟಾರ್, ಸೂಪರ್ ಕಿಂಗ್ಸ್ ನೀಡಿರುವ ಸೇವೆ ಅಸಾಮಾನ್ಯವಾದದ್ದು. ತಮಿಳನಾಡಿನಲ್ಲಿ ವ್ಯಕ್ತಿಪೂಜೆ ಜಾಸ್ತಿ ಕಂಡುಬರುತ್ತದೆ. ಅಲ್ಲಿ ಸಿನಿಮಾ ಹೀರೊಗಳು, ರಾಜಕಾರಣಿಗಳು ದೇವರ ನಂತರದ ಸ್ಥಾನ ಪಡೆದುಕೊಂಡುಬಿಡುತ್ತಾರೆ. ಧೋನಿಗೂ ಅಂಥ ಗೌರವ, ಆದರ ದಕ್ಕಿಬಿಟ್ಟಿದೆ. ಕಳೆದ 12 ಸೀಸನ್ಗಳಲ್ಲಿ ಪ್ರತಿಬಾರಿ ಚೆನೈ ಪ್ಲೇ ಆಫ್ ಹಂತ ತಲುಪಿದೆ, ಮತ್ತು ಮೂರು ಬಾರಿ ಪ್ರಶಸ್ತಿ ಗೆದ್ದಿದೆ. ಕೇವಲ ಮುಂಬೈ ಇಂಡಿಯನ್ಸ್ ಮಾತ್ರ ಚೆನೈಗಿಂತ ಹೆಚ್ಚು ಸಲ (4) ಟ್ರೋಫಿ ಗೆದ್ದ್ದಿದೆ. ಇದೇನು ಕಡಿಮೆ ಸಾಧನೆಯೇ?
ಐಪಿಎಲ್ 14ನೇ ಸೀಸನ್ಗೆ ಬಹಳ ದಿನಗಳೇನೂ ಉಳಿದಿಲ್ಲ. ಈ ಬಾರಿ ಆಟಗಾರರ ಹರಾಜು ಪ್ರಕ್ರಿಯೆ ನಡೆದರೆ ಚೆನೈ ಟೀಮಿನ ಸೀನಿಯರ್ ಸಿಟಿಜನ್ಗಳಿಗೆ ವಿಆರ್ಎಸ್ ತೆಗೆದುಕೊಳ್ಳಿ ಅಂತ ನೊಟೀಸು ಜಾರಿಯಾಗೋದು ನಿಶ್ಚಿತ.
Published On - 8:33 pm, Sat, 24 October 20