Townhall ಬಳಿ ಯಾರೂ ಬರಬೇಡಿ, ವದಂತಿಗೆ ಕಿವಿಗೊಡಬೇಡಿ: ಶಾಸಕ ಜಮೀರ್ ಹೀಗ್ಯಾಕೆ ಮನವಿ ಮಾಡಿದ್ರು?

ಬೆಂಗಳೂರು:ಕೆ.ಜಿ. ಹಳ್ಳಿ-ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣ ಕ್ಷಣಕೊಂದು ತಿರುವು ಪಡೆಯುತ್ತಿದ್ದು, ಈಗ ಮುಸ್ಲಿಂ ಸಮುದಾಯದ ನಡುವೆ ಮತ್ತೊಂದು ವದಂತಿ ಹರಡಿರುವ ವಿಚಾರ ಬೆಳಕಿಗೆ ಬಂದಿದೆ. ಮುಸ್ಲಿಂ ಸಮುದಾಯದವರು ಟೌನ್ ಹಾಲ್ ಬಳಿ ಸಭೆ ಸೇರಬೇಕೆಂದು ಷರಿಯತ್​ನಿಂದ ಸಂದೇಶ ಬಂದಿದೆ ಎಂದು ವದಂತಿಯೊಂದು ಎಲ್ಲೆಡೆ ಹಬ್ಬುತ್ತಿದೆ. ಈ ವಿಚಾರ ತಿಳಿದ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ್ದು, ಟೌನ್ ಹಾಲ್ ಬಳಿ ಸಭೆ ಸೇರುವುದು ಕೇವಲ ಒಂದು ವದಂತಿಯಾಗಿದೆ, ಯಾರೂ ಸಹ ಟೌನ್ ಹಾಲ್ […]

Townhall ಬಳಿ ಯಾರೂ ಬರಬೇಡಿ, ವದಂತಿಗೆ ಕಿವಿಗೊಡಬೇಡಿ: ಶಾಸಕ ಜಮೀರ್ ಹೀಗ್ಯಾಕೆ ಮನವಿ ಮಾಡಿದ್ರು?
ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಭವ್ಯ ಬಂಗಲೆ ಮೇಲೆ ಐಟಿ ದಾಳಿ; ಶಾಸಕ ಜಮೀರ್ ಆಸ್ತಿಪಾಸ್ತಿ ಎಷ್ಟಿದೆ? ವಿವರ ಇಲ್ಲಿದೆ
ಸಾಧು ಶ್ರೀನಾಥ್​

Updated on: Aug 12, 2020 | 3:01 PM

ಬೆಂಗಳೂರು:ಕೆ.ಜಿ. ಹಳ್ಳಿ-ಡಿ.ಜೆ ಹಳ್ಳಿ ಹಿಂಸಾಚಾರ ಪ್ರಕರಣ ಕ್ಷಣಕೊಂದು ತಿರುವು ಪಡೆಯುತ್ತಿದ್ದು, ಈಗ ಮುಸ್ಲಿಂ ಸಮುದಾಯದ ನಡುವೆ ಮತ್ತೊಂದು ವದಂತಿ ಹರಡಿರುವ ವಿಚಾರ ಬೆಳಕಿಗೆ ಬಂದಿದೆ.

ಮುಸ್ಲಿಂ ಸಮುದಾಯದವರು ಟೌನ್ ಹಾಲ್ ಬಳಿ ಸಭೆ ಸೇರಬೇಕೆಂದು ಷರಿಯತ್​ನಿಂದ ಸಂದೇಶ ಬಂದಿದೆ ಎಂದು ವದಂತಿಯೊಂದು ಎಲ್ಲೆಡೆ ಹಬ್ಬುತ್ತಿದೆ. ಈ ವಿಚಾರ ತಿಳಿದ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಹೇಳಿಕೆ ನೀಡಿದ್ದು, ಟೌನ್ ಹಾಲ್ ಬಳಿ ಸಭೆ ಸೇರುವುದು ಕೇವಲ ಒಂದು ವದಂತಿಯಾಗಿದೆ, ಯಾರೂ ಸಹ ಟೌನ್ ಹಾಲ್ ಬಳಿ ಬರಬೇಡಿ ಎಂದು ಮನವಿ ಮಾಡಿದ್ದಾರೆ.

ಜೊತೆಗೆ ಮಹಮ್ಮದ್ ಪೈಗಂಬರರ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಯುವಕನನ್ನು ಪೊಲೀಸರು ಈಗಾಗಲೇ ಬಂಧಿಸಿರುವುದರಿಂದ, ಯಾರೂ ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ಮುಸ್ಲಿಂ ಸಮುದಾಯದವರಲ್ಲಿ ಮನವಿ ಮಾಡಿದ್ದಾರೆ.

Published On - 3:00 pm, Wed, 12 August 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us