ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ, ಯುವ Power Man ಸಾವು

ಕೊಡಗು: ವಿದ್ಯುತ್ ಅವಘಡ ಸಂಭವಿಸಿ, ಯುವ ಪವರ್​ಮ್ಯಾನ್ (ಲೈನ್ ಮೆನ್) ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಲ್ಲಾಸ್ (23) ಮೃತ ಲೈನ್ ಮೆನ್. 11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ. ಸೋಮವಾರಪೇಟೆ ತಾಲೂಕಿನ ಶಾಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿ ಉಲ್ಲಾಸ್ ಚಿಕ್ಕಮಗಳೂರು ಜಿಲ್ಲೆ ಕುಪ್ಪಲ್ ಗ್ರಾಮದ ನಿವಾಸಿ‌. ಉಲ್ಲಾಸ್, ನಾಲ್ಕು ವರ್ಷಗಳಿಂದ ಕೊಡ್ಲಿಪೇಟೆ ಚೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ […]

ವಿದ್ಯುತ್ ಲೈನ್ ದುರಸ್ತಿ ವೇಳೆ ಅವಘಡ, ಯುವ Power Man ಸಾವು
ಸಾಧು ಶ್ರೀನಾಥ್​

Updated on: Oct 02, 2020 | 11:07 AM

ಕೊಡಗು: ವಿದ್ಯುತ್ ಅವಘಡ ಸಂಭವಿಸಿ, ಯುವ ಪವರ್​ಮ್ಯಾನ್ (ಲೈನ್ ಮೆನ್) ಒಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಉಲ್ಲಾಸ್ (23) ಮೃತ ಲೈನ್ ಮೆನ್.

11 ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್ ದುರಸ್ತಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ ಈ ದುರ್ಘಟನೆ ಸಂಭವಿಸಿದೆ. ಸೋಮವಾರಪೇಟೆ ತಾಲೂಕಿನ ಶಾಂತಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮೃತ ದುರ್ದೈವಿ ಉಲ್ಲಾಸ್ ಚಿಕ್ಕಮಗಳೂರು ಜಿಲ್ಲೆ ಕುಪ್ಪಲ್ ಗ್ರಾಮದ ನಿವಾಸಿ‌.

ಉಲ್ಲಾಸ್, ನಾಲ್ಕು ವರ್ಷಗಳಿಂದ ಕೊಡ್ಲಿಪೇಟೆ ಚೆಸ್ಕಾಂ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ರು. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ.

Loading...
Unable to load recommendations.
Follow Us