ಇದು ಮೋದಿ ದೇಶ, ದೇಗುಲದಲ್ಲಿ ನೀವ್ಯಾಕೆ ಕೊಪ್ಪರಿಗೆ ಇಟ್ಟಿರಿ? ಮೊಯಿದ್ದೀನ್ ಬಾವಾಗೆ ಬೆದರಿಕೆಯ ಕರೆ

ದಕ್ಷಿಣ ಕನ್ನಡ: ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ ಬಂದಿದೆ. ಮುಂಬೈನಿಂದ ಯಾರು ಅಪರಿಚಿತರು ಕರೆ ಮಾಡಿ ಮೊಯಿದ್ದೀನ್ ಬಾವಾಗೆ ಬೆದರಿಕೆ ಒಡ್ಡಿದ್ದಾರೆ. ಮಂಗಳೂರು ಹೊರವಲಯದ ಬಜ್ಪೆ ಸುಂಕದ ಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಮಾಜಿ ಶಾಸಕ ಭೇಟಿ ಕೊಟ್ಟಿದರು. ನವರಾತ್ರಿ ಹಿನ್ನೆಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮೇರೆಗೆ ‘ಕೊಪ್ಪರಿಗೆ ಇಡುವುದು’ ಧಾರ್ಮಿಕ ಕಾರ್ಯದಲ್ಲಿ ಮೊಯಿದ್ದೀನ್​ ಬಾವಾ ಪಾಲ್ಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಮುಬೈನಿಂದ ಕರೆ […]

ಇದು ಮೋದಿ ದೇಶ, ದೇಗುಲದಲ್ಲಿ ನೀವ್ಯಾಕೆ ಕೊಪ್ಪರಿಗೆ ಇಟ್ಟಿರಿ? ಮೊಯಿದ್ದೀನ್ ಬಾವಾಗೆ ಬೆದರಿಕೆಯ ಕರೆ
Edited By:

Updated on: Oct 21, 2020 | 11:09 AM

ದಕ್ಷಿಣ ಕನ್ನಡ: ದೇವಸ್ಥಾನದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಮಾಜಿ ಶಾಸಕ ಮೊಯಿದ್ದೀನ್ ಬಾವಾಗೆ ಬೆದರಿಕೆ ಕರೆ ಬಂದಿದೆ. ಮುಂಬೈನಿಂದ ಯಾರು ಅಪರಿಚಿತರು ಕರೆ ಮಾಡಿ ಮೊಯಿದ್ದೀನ್ ಬಾವಾಗೆ ಬೆದರಿಕೆ ಒಡ್ಡಿದ್ದಾರೆ.

ಮಂಗಳೂರು ಹೊರವಲಯದ ಬಜ್ಪೆ ಸುಂಕದ ಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಮಾಜಿ ಶಾಸಕ ಭೇಟಿ ಕೊಟ್ಟಿದರು. ನವರಾತ್ರಿ ಹಿನ್ನೆಲೆಯಲ್ಲಿ ಕ್ಷೇತ್ರದ ಆಡಳಿತ ಮಂಡಳಿ ಮನವಿ ಮೇರೆಗೆ ‘ಕೊಪ್ಪರಿಗೆ ಇಡುವುದು’ ಧಾರ್ಮಿಕ ಕಾರ್ಯದಲ್ಲಿ ಮೊಯಿದ್ದೀನ್​ ಬಾವಾ ಪಾಲ್ಗೊಂಡಿದ್ದರು.

ಈ ಹಿನ್ನೆಲೆಯಲ್ಲಿ ಕೆಲ ಕಿಡಿಗೇಡಿಗಳು ಮುಬೈನಿಂದ ಕರೆ ಮಾಡಿ ಮೊಯಿದ್ದೀನ್ ಬಾವಾಗೆ ಬೆದರಿಕೆ ಹಾಕಿದ್ದಾರೆ. ದೇವಸ್ಥಾನದಲ್ಲಿ ನೀವು ಯಾಕೆ ಕೊಪ್ಪರಿಗೆ ಇಟ್ಟಿದ್ದು? ಇದು ನೆಹರೂ ದೇಶವಲ್ಲ, ಮೋದಿಯ ದೇಶ. ನಿನಗೆ ಎಚ್ಚರಿಕೆ ಎಂದು ಬೆದರಿಕೆ ಒಡ್ಡಿದ್ದಾರೆ. ಜೊತೆಗೆ, ದನ ತಿಂದು ಹೀಗೆಲ್ಲಾ ದೇವಸ್ಥಾನಕ್ಕೆ ಹೋದ್ರೆ ಹುಷಾರ್ ಎಂದು ಬಾವಾಗೆ ಕರೆ ಮಾಡಿ ಕಿಡಿಗೇಡಿಗಳು ತುಳುವಿನಲ್ಲಿ ಎಚ್ಚರಿಕೆ ನೀಡಿದ್ದಾರೆ.