ಈರುಳ್ಳಿ ರಾಶಿಯಲ್ಲಿ ಕುಳಿತು ಡಂಬಳ ರೈತನ ಕಣ್ಣೀರು, ನೆರವಿಗಾಗಿ ಸಿಎಂಗೆ ಮೊರೆ

ಮುಂಡರಗಿ: ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕೆ ಎಲ್ಲೆಡೆ ಲಾಕ್ ಡೌನ್ 2.0 ಜಾರಿಯಲ್ಲಿದೆ. ಇದು ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ರೈತ ಹುಚ್ಚಪ್ಪ ರಾಜೂರ, ಈರುಳ್ಳಿ ರಾಶಿಯಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಜೊತೆಗೆ, ತಮ್ಮ ಸಹಾಯಕ್ಕೆ ಬರುವಂತೆ ಸಿಎಂ ಯಡಿಯೂರಪ್ಪ ಅವ್ರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ. ಇದು ಸುಮಾರು ೩೦೦ ಚೀಲ ಈರುಳ್ಳಿ ಬೆಳೆದ ರೈತನ ಗೋಳಾಟ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತ ರೈತ ಹುಚ್ಚಪ್ಪ ರಾಜೂರ, ಲಕ್ಷಾಂತರ ವೆಚ್ಚ ಮಾಡಿ ಈರುಳ್ಳಿ […]

ಈರುಳ್ಳಿ ರಾಶಿಯಲ್ಲಿ ಕುಳಿತು ಡಂಬಳ ರೈತನ ಕಣ್ಣೀರು, ನೆರವಿಗಾಗಿ ಸಿಎಂಗೆ ಮೊರೆ
ಸಾಧು ಶ್ರೀನಾಥ್​

Updated on: Apr 29, 2020 | 5:15 PM

ಮುಂಡರಗಿ: ಹೆಮ್ಮಾರಿ ಕೊರೊನಾ ನಿಯಂತ್ರಣಕ್ಕೆ ಎಲ್ಲೆಡೆ ಲಾಕ್ ಡೌನ್ 2.0 ಜಾರಿಯಲ್ಲಿದೆ. ಇದು ರೈತಾಪಿ ವರ್ಗವನ್ನು ಸಂಕಷ್ಟಕ್ಕೆ ದೂಡಿದೆ. ಈ ಹಿನ್ನೆಲೆಯಲ್ಲಿ ರೈತ ಹುಚ್ಚಪ್ಪ ರಾಜೂರ, ಈರುಳ್ಳಿ ರಾಶಿಯಲ್ಲಿ ಕುಳಿತು ಕಣ್ಣೀರು ಹಾಕಿದ್ದಾರೆ. ಜೊತೆಗೆ, ತಮ್ಮ ಸಹಾಯಕ್ಕೆ ಬರುವಂತೆ ಸಿಎಂ ಯಡಿಯೂರಪ್ಪ ಅವ್ರಿಗೆ ಕೈಮುಗಿದು ಬೇಡಿಕೊಂಡಿದ್ದಾರೆ. ಇದು ಸುಮಾರು ೩೦೦ ಚೀಲ ಈರುಳ್ಳಿ ಬೆಳೆದ ರೈತನ ಗೋಳಾಟ.

ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ರೈತ ರೈತ ಹುಚ್ಚಪ್ಪ ರಾಜೂರ, ಲಕ್ಷಾಂತರ ವೆಚ್ಚ ಮಾಡಿ ಈರುಳ್ಳಿ ಬೆಳೆ ಬೆಳೆದಿದ್ದೇನೆ. ಖರೀದಿದಾರರು ಇಲ್ಲದೇ ಜಮೀನಿನಲ್ಲೇ ಕೊಳೆಯುತ್ತಿದೆ ಅಂತಾ ತಮ್ಮ ಬವಣೆ ತೋಡಿಕೊಂಡಿದ್ದಾರೆ. ಸಾಲಗಾರರ ಕಾಟದಿಂದ ಗ್ರಾಮಕ್ಕೂ ಹೋಗಲು ಆಗುತ್ತಿಲ್ಲ. ಸಮಸ್ಯೆ ಇತ್ಯರ್ಥ ಆಗದಿದ್ರೆ ಜಮೀನಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ರೈತ ಹೇಳಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ ರೈತ.

Published On - 5:11 pm, Wed, 29 April 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us