ರಾಯರ ದರ್ಶನಕ್ಕೆ ತೆರಳಿದ್ರೆ ಕ್ವಾರಂಟೈನ್ ಫಿಕ್ಸ್!

ರಾಯಚೂರು: ದೇಶಾದ್ಯಂತ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ ಕೆಲವೊಂದು ಕಡೆ ಕೊರೊನಾ ಭೀತಿಯಿಂದ ದೇವಾಲಯಗಳನ್ನು ಓಪನ್ ಮಾಡಿಲ್ಲ. ಆಂಧ್ರದ ಕರ್ನೂಲ್ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ರೆ ಕ್ವಾರಂಟೈನ್ ಫಿಕ್ಸ್ ಆಗಲಿದೆ. ಆಂಧ್ರಕ್ಕೆ ತೆರಳಿ ಅಂತಾರಾಜ್ಯ ಪ್ರವಾಸ ಮಾಡಿ ರಾಯರ ದರ್ಶನ ಮಾಡಿದ್ರೆ ಹೋಮ್ ಕ್ವಾರಂಟೈನ್ ಫಿಕ್ಸ್ ಆಗಲಿದೆ. ಹೀಗಾಗಿ ರಾಯರ ಭಕ್ತರಿಗೆ ಕ್ವಾರಂಟೈನ್ ಭೀತಿ ಕಾಡುತ್ತಿದೆ. ರಾಯಚೂರ ಜಿಲ್ಲಾಡಳಿತ ಈಗಾಗಲೇ ಮಂತ್ರಾಲಯಕ್ಕೆ ತೆರಳಿ ವಾಪಸಾದವರಿಗೆ ಹೋಮ್ ಕ್ವಾರಂಟೈನ್ ಮಾಡಿದೆ. […]

ರಾಯರ ದರ್ಶನಕ್ಕೆ ತೆರಳಿದ್ರೆ ಕ್ವಾರಂಟೈನ್ ಫಿಕ್ಸ್!
ಸಾಧು ಶ್ರೀನಾಥ್​ Edited By:

Updated on: Jun 09, 2020 | 9:10 AM

ರಾಯಚೂರು: ದೇಶಾದ್ಯಂತ ಲಾಕ್​ಡೌನ್ ಸಡಿಲಿಕೆ ಮಾಡಿದ್ದು, ದೇವಾಲಯಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದ್ರೆ ಕೆಲವೊಂದು ಕಡೆ ಕೊರೊನಾ ಭೀತಿಯಿಂದ ದೇವಾಲಯಗಳನ್ನು ಓಪನ್ ಮಾಡಿಲ್ಲ. ಆಂಧ್ರದ ಕರ್ನೂಲ್ ಜಿಲ್ಲೆಯ ವ್ಯಾಪ್ತಿಯಲ್ಲಿರುವ ಮಂತ್ರಾಲಯದ ರಾಯರ ದರ್ಶನಕ್ಕೆ ತೆರಳಿದ್ರೆ ಕ್ವಾರಂಟೈನ್ ಫಿಕ್ಸ್ ಆಗಲಿದೆ.

ಆಂಧ್ರಕ್ಕೆ ತೆರಳಿ ಅಂತಾರಾಜ್ಯ ಪ್ರವಾಸ ಮಾಡಿ ರಾಯರ ದರ್ಶನ ಮಾಡಿದ್ರೆ ಹೋಮ್ ಕ್ವಾರಂಟೈನ್ ಫಿಕ್ಸ್ ಆಗಲಿದೆ. ಹೀಗಾಗಿ ರಾಯರ ಭಕ್ತರಿಗೆ ಕ್ವಾರಂಟೈನ್ ಭೀತಿ ಕಾಡುತ್ತಿದೆ. ರಾಯಚೂರ ಜಿಲ್ಲಾಡಳಿತ ಈಗಾಗಲೇ ಮಂತ್ರಾಲಯಕ್ಕೆ ತೆರಳಿ ವಾಪಸಾದವರಿಗೆ ಹೋಮ್ ಕ್ವಾರಂಟೈನ್ ಮಾಡಿದೆ. ಈ ನಡುವೆ ಮಂತ್ರಾಲಯದ ಶ್ರೀಮಠವನ್ನು ಇನ್ನೂ ಓಪನ್ ಮಾಡಲಾಗಿಲ್ಲ.

ಆಂಧ್ರ ಸರ್ಕಾರ ಧಾರ್ಮಿಕ ಕೇಂದ್ರಗಳನ್ನು ತೆರೆಯಲು ಇನ್ನೂ ಅಧಿಕೃತವಾಗಿ ಅನುಮತಿ ನೀಡಿಲ್ಲ. ಹೀಗಾಗಿ ಸದ್ಯಕ್ಕೆ ಕರ್ನಾಟಕದ ಯಾವುದೇ ಭಕ್ತರು ಮಂತ್ರಾಲಯಕ್ಕೆ ತೆರಳಿದ್ರೆ ಹೋಮ್ ಕ್ವಾರಂಟೈನ್ ಆಗಬೇಕಾಗುತ್ತೆ.

Published On - 9:10 am, Tue, 9 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us