ವಲಸೆ ಕಾರ್ಮಿಕರ ಮೇಲೆ ದರ್ಪ ತೋರಿದ್ದ ಬೆಂಗಳೂರಿನ ASI ಅಮಾನತು

ಬೆಂಗಳೂರು: ವಲಸೆ ಕಾರ್ಮಿಕರ ಜೊತೆ ಅಸಭ್ಯ ವರ್ತನೆ ತೋರಿ ದರ್ಪ ಮೆರೆದಿದ್ದ ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಯ ASI ರಾಜಾಸಾಬ್​ ಅಮಾನತಾಗಿದ್ದಾರೆ. ರಾಜಾಸಾಬ್​ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶಿಸಿದ್ದಾರೆ. ಲಾಕ್​ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಮತ್ತು ಹೊರ‌ ಜಿಲ್ಲೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿತ್ತು. ತಮ್ಮ ರಾಜ್ಯಕ್ಕೆ ತೆರಳು ವಲಸೆ ಕಾರ್ಮಿಕರು ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಗೆ ಬಂದಿದ್ದರು. ಇಲ್ಲಿ ನೋಂದಣಿ ಮಾಡುವುದಿಲ್ಲ ಹೋಗಿ ಎಂದು ವಲಸೆ ಕಾರ್ಮಿಕರ […]

ವಲಸೆ ಕಾರ್ಮಿಕರ ಮೇಲೆ ದರ್ಪ ತೋರಿದ್ದ ಬೆಂಗಳೂರಿನ ASI ಅಮಾನತು
ಸಾಧು ಶ್ರೀನಾಥ್​

Updated on: May 12, 2020 | 12:37 PM

ಬೆಂಗಳೂರು: ವಲಸೆ ಕಾರ್ಮಿಕರ ಜೊತೆ ಅಸಭ್ಯ ವರ್ತನೆ ತೋರಿ ದರ್ಪ ಮೆರೆದಿದ್ದ ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಯ ASI ರಾಜಾಸಾಬ್​ ಅಮಾನತಾಗಿದ್ದಾರೆ. ರಾಜಾಸಾಬ್​ರನ್ನು ಸಸ್ಪೆಂಡ್ ಮಾಡಿ ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ಆದೇಶಿಸಿದ್ದಾರೆ.

ಲಾಕ್​ಡೌನ್ ಸಡಿಲಿಕೆ ಮಾಡಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ವಲಸೆ ಕಾರ್ಮಿಕರನ್ನು ಹೊರ ರಾಜ್ಯಕ್ಕೆ ಮತ್ತು ಹೊರ‌ ಜಿಲ್ಲೆಗಳಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿತ್ತು. ತಮ್ಮ ರಾಜ್ಯಕ್ಕೆ ತೆರಳು ವಲಸೆ ಕಾರ್ಮಿಕರು ಕೆ.ಜಿ.‌ಹಳ್ಳಿ‌ ಪೊಲೀಸ್ ಠಾಣೆಗೆ ಬಂದಿದ್ದರು. ಇಲ್ಲಿ ನೋಂದಣಿ ಮಾಡುವುದಿಲ್ಲ ಹೋಗಿ ಎಂದು ವಲಸೆ ಕಾರ್ಮಿಕರ ಜತೆ ಅಸಭ್ಯವಾಗಿ ವರ್ತಿಸಿ, ಥಳಿಸಿದ್ದರು.

ಅಲ್ಲದೆ ಕಾರ್ಮಿಕನ ಮೇಲೆ ಕೈಮಾಡಿ, ಬೂಟುಗಾಲಿನಿಂದ ಎಎಸ್​ಐ ರಾಜಾಸಾಬ್ ಒದ್ದಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಹಾಗಾಗಿ ರಾಜಾಸಾಬ್​ರನ್ನು ಡಿಸಿಪಿ ಶರಣಪ್ಪ ಅಮಾನತು ಮಾಡಿದ್ದಾರೆ.

Published On - 7:51 pm, Mon, 11 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us