ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ 10ಲಕ್ಷ ವಂಚಿಸಿದ್ದ ಆರೋಪಿ ಅರೆಸ್ಟ್

ಮೈಸೂರು: ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ₹10 ಲಕ್ಷ ವಂಚನೆ ಮಾಡಿದ್ದ ತಮಿಳುನಾಡಿನ ಆರೋಪಿ ಪಳನಿಮಲೈಯನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ. ಆರೋಪಿ ಪಳನಿಮಲೈ 4 ವರ್ಷಗಳ ಹಿಂದೆ ರೋಹನ್ ಖಾನ್ ಎಂಬುವವರಿಗೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಹೇಳಿ RTGS ಮೂಲಕ 10 ಲಕ್ಷ ಪಡೆದಿದ್ದ. ಬಳಿಕ ಗೋಡಂಬಿ ಕೊಡದೆ ಹಣ ನೀಡದೆ ತಲೆ ತಲೆಮರೆಸಿಕೊಂಡಿದ್ದ. ರೋಹನ್ ಖಾನ್ ಆಮದು, ರಫ್ತು ವ್ಯವಹಾರ ಮಾಡುತ್ತಿರುವ ವ್ಯಕ್ತಿ. ಲಾಭವಾಗುತ್ತೆ ಎಂದು ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ […]

ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ 10ಲಕ್ಷ ವಂಚಿಸಿದ್ದ ಆರೋಪಿ ಅರೆಸ್ಟ್
ಆಯೇಷಾ ಬಾನು

Updated on: Nov 06, 2020 | 7:42 AM

ಮೈಸೂರು: ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ₹10 ಲಕ್ಷ ವಂಚನೆ ಮಾಡಿದ್ದ ತಮಿಳುನಾಡಿನ ಆರೋಪಿ ಪಳನಿಮಲೈಯನ್ನು ಮೈಸೂರಿನ ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ಪಳನಿಮಲೈ 4 ವರ್ಷಗಳ ಹಿಂದೆ ರೋಹನ್ ಖಾನ್ ಎಂಬುವವರಿಗೆ ಕಡಿಮೆ ಬೆಲೆಗೆ ಗೋಡಂಬಿ ಕೊಡಿಸುವುದಾಗಿ ಹೇಳಿ RTGS ಮೂಲಕ 10 ಲಕ್ಷ ಪಡೆದಿದ್ದ. ಬಳಿಕ ಗೋಡಂಬಿ ಕೊಡದೆ ಹಣ ನೀಡದೆ ತಲೆ ತಲೆಮರೆಸಿಕೊಂಡಿದ್ದ. ರೋಹನ್ ಖಾನ್ ಆಮದು, ರಫ್ತು ವ್ಯವಹಾರ ಮಾಡುತ್ತಿರುವ ವ್ಯಕ್ತಿ. ಲಾಭವಾಗುತ್ತೆ ಎಂದು ನಂಬಿ ಹಣ ಕಳೆದುಕೊಂಡಿದ್ದಾರೆ. ಈ ಸಂಬಂಧ ಉದಯಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಉದಯಗಿರಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Follow Us