ತಮ್ಮ ಗೂಡು ಸೇರಲು ಮೆಜೆಸ್ಟಿಕ್​ನತ್ತ ವಲಸೆ ಕಾರ್ಮಿಕರ ಹೆಜ್ಜೆ

ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಗೂಡಿಗೆ ಸೇರಿಸಲು ಬಸ್​ಗಳು ರೆಡಿಯಾಗಿವೆ. ಇಂದು ಬೆಳಗ್ಗೆ7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ನಿನ್ನೆ ಮೆಜೆಸ್ಟಿಕ್​ನಿಂದ 500 ಬಸ್​ಗಳು ಸಂಚಾರ ಮಾಡಿದ್ವು. ಒಂದು ಬಸ್​ಗೆ 30 ಜನ ಪ್ರಯಾಣಿಕರಂತೆ, 15,000 ಜನ ಪ್ರಯಾಣ ಮಾಡಿ ತಮ್ಮ ಊರುಗಳನ್ನು ಸೇರಿದ್ದಾರೆ. ಇಂದು ಕೂಡ ಉಚಿತ ಬಸ್​ ಸೇವೆ ಇದ್ದು, ಅನೇಕ ಕಾರ್ಮಿಕರು ಗಂಟು ಮೂಟೆ ಸಮೇತ ತಮ್ಮ ಊರಿಗೆ ಹೋಗಲು ಧಾವಿಸಿದ್ದಾರೆ. ಅರಮನೆ ಮೈದಾನದ ಬಳಿ […]

ತಮ್ಮ ಗೂಡು ಸೇರಲು ಮೆಜೆಸ್ಟಿಕ್​ನತ್ತ ವಲಸೆ ಕಾರ್ಮಿಕರ ಹೆಜ್ಜೆ
ಸಾಧು ಶ್ರೀನಾಥ್​

Updated on: May 04, 2020 | 7:24 AM

ಬೆಂಗಳೂರು: ವಲಸೆ ಕಾರ್ಮಿಕರನ್ನು ಉಚಿತವಾಗಿ ತಮ್ಮ ತಮ್ಮ ಗೂಡಿಗೆ ಸೇರಿಸಲು ಬಸ್​ಗಳು ರೆಡಿಯಾಗಿವೆ. ಇಂದು ಬೆಳಗ್ಗೆ7 ಗಂಟೆಯಿಂದ ಬಸ್ ಸಂಚಾರ ಆರಂಭವಾಗಲಿದೆ. ಬೆಂಗಳೂರಿನಿಂದ ವಿವಿಧ ಜಿಲ್ಲೆಗಳಿಗೆ ನಿನ್ನೆ ಮೆಜೆಸ್ಟಿಕ್​ನಿಂದ 500 ಬಸ್​ಗಳು ಸಂಚಾರ ಮಾಡಿದ್ವು.

ಒಂದು ಬಸ್​ಗೆ 30 ಜನ ಪ್ರಯಾಣಿಕರಂತೆ, 15,000 ಜನ ಪ್ರಯಾಣ ಮಾಡಿ ತಮ್ಮ ಊರುಗಳನ್ನು ಸೇರಿದ್ದಾರೆ. ಇಂದು ಕೂಡ ಉಚಿತ ಬಸ್​ ಸೇವೆ ಇದ್ದು, ಅನೇಕ ಕಾರ್ಮಿಕರು ಗಂಟು ಮೂಟೆ ಸಮೇತ ತಮ್ಮ ಊರಿಗೆ ಹೋಗಲು ಧಾವಿಸಿದ್ದಾರೆ.

ಅರಮನೆ ಮೈದಾನದ ಬಳಿ ಜನರ ಆಗಮನ:
ಅರಮನೆ ಮೈದಾನದ ಬಳಿ ನೂರಾರು ಜನ ಆಗಮಿಸಿದ್ದಾರೆ. ರಾಜಸ್ಥಾನಕ್ಕೆ ಹೋಗಲು ವಿಶೇಷ ರೈಲು ವ್ಯವಸ್ಥೆ ಇದೆ. ಹೀಗಾಗಿ ಅರಮನೆ ಮೈದಾನಕ್ಕೆ ಬನ್ನಿ ಎಂದು ಜಯನಗರ ಪೊಲೀಸರು ಮಾಹಿತಿ ನೀಡಿದ ಹಿನ್ನೆಲೆ ಬೆಂಗಳೂರಿನ ಅರಮನೆ ಮೈದಾನ ಬಳಿ ಜನ ಜಮಾವಣೆಗೊಂಡಿದ್ದಾರೆ.

Published On - 7:23 am, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us