ಸಂಸದ DK ಸುರೇಶ್, ಅವನ ಚೇಲಾಗಳು ಮರಳು ದಂಧೆ ಮಾಡ್ತಿದ್ದಾರೆ: HD ಕುಮಾರಸ್ವಾಮಿ ವಾಗ್ದಾಳಿ

ರಾಮನಗರ:ಇತ್ತೀಚೆಗೆ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್‌ಡಿ ಕುಮಾರಸ್ವಾಮಿ ಅರ್ಕಾವತಿ ನದಿಯಲ್ಲಿ ಮರಳು ದಂಧೆಗೆ 15 ರಿಂದ 20 ಅಡಿ ಗುಂಡಿ ತೋಡಿದ್ದಾರೆ. ಸಂಸದ ಮತ್ತು ಅವನ ಚೇಲಾಗಳು ಮರಳು ದಂಧೆ ಮಾಡ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ರಾಮನಗರ ತಾಲೂಕಿನ ಕೂನಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ HD ಕುಮಾರಸ್ವಾಮಿ, ಕಾಂಗ್ರೆಸ್​ನ 5 ವರ್ಷಗಳ ಅವಧಿಯಲ್ಲಿ ಮರಳು ದಂಧೆ ನಡೆಸಲಾಗಿದೆ. ನಾನು ಶಾಸಕನಾಗಿದ್ದರೂ ಕೂಡ ಕಾಂಗ್ರೆಸ್ […]

ಸಂಸದ DK ಸುರೇಶ್, ಅವನ ಚೇಲಾಗಳು ಮರಳು ದಂಧೆ ಮಾಡ್ತಿದ್ದಾರೆ: HD ಕುಮಾರಸ್ವಾಮಿ ವಾಗ್ದಾಳಿ

Updated on: Nov 05, 2020 | 4:31 PM

ರಾಮನಗರ:ಇತ್ತೀಚೆಗೆ ಅರ್ಕಾವತಿ ನದಿಯಲ್ಲಿ ಕೊಚ್ಚಿ ಹೋಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಬಗ್ಗೆ ಪ್ರಸ್ತಾಪ ಮಾಡಿದ ಹೆಚ್‌ಡಿ ಕುಮಾರಸ್ವಾಮಿ ಅರ್ಕಾವತಿ ನದಿಯಲ್ಲಿ ಮರಳು ದಂಧೆಗೆ 15 ರಿಂದ 20 ಅಡಿ ಗುಂಡಿ ತೋಡಿದ್ದಾರೆ. ಸಂಸದ ಮತ್ತು ಅವನ ಚೇಲಾಗಳು ಮರಳು ದಂಧೆ ಮಾಡ್ತಿದ್ದಾರೆ ಎಂದು ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು.

ರಾಮನಗರ ತಾಲೂಕಿನ ಕೂನಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ HD ಕುಮಾರಸ್ವಾಮಿ, ಕಾಂಗ್ರೆಸ್​ನ 5 ವರ್ಷಗಳ ಅವಧಿಯಲ್ಲಿ ಮರಳು ದಂಧೆ ನಡೆಸಲಾಗಿದೆ. ನಾನು ಶಾಸಕನಾಗಿದ್ದರೂ ಕೂಡ ಕಾಂಗ್ರೆಸ್ ಸರ್ಕಾರ ಇತ್ತು. ಮರಳು ದಂಧೆಗೆ ಕಡಿವಾಣ ಹಾಕಲು ನನ್ನಿಂದ ಆಗಲಿಲ್ಲ. ಕಾಂಗ್ರೆಸ್​ನವರೇ ಮರಳು ದಂಧೆ ಮಾಡುತ್ತಿರುವುದು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ಮರಳು ದಂಧೆ ನಡೆಸದಂತೆ ನನ್ನ ಪಕ್ಷದ ಕಾರ್ಯಕರ್ತರಿಗೆ ಸೂಚಿಸಿದ್ದೇನೆ
ಅರ್ಕಾವತಿ ನದಿಯಲ್ಲಿ ಮರಳು ದಂಧೆಗೆ 15 ರಿಂದ 20 ಅಡಿ ಗುಂಡಿ ತೋಡಿದ್ದಾರೆ. ಮರಳು ದಂಧೆ ನಡೆಸಲು ಉತ್ತೇಜನ ಕೊಟ್ಟಿರೋದು ಯಾರು ನನ್ನ ಪಕ್ಷದ ಕಾರ್ಯಕರ್ತರಿಗೆ ಮರಳು ದಂಧೆ ಮಾಡಬಾರದು ಎಂದು ಸೂಚಿಸಿದ್ದೇನೆ. ಮರಳು ದಂಧೆ ಮಾಡುಕೊಂಡು ಅಮಾಯಕ ಜನರ ಜೀವದ ಜೊತೆ ಚೆಲ್ಲಾಟ ಆಡ್ತಾ ಇರೋರು ಕಾಂಗ್ರೆಸ್ ನವರು ಎಂದು HDK ಆಕ್ರೋಶ ವ್ಯಕ್ತಪಡಿಸಿದರು.

Published On - 4:30 pm, Thu, 5 November 20