ಕಾಲೇಜು ಕೊಠಡಿಗಳ ಮುಂದೆ ಬಿದ್ದಿವೆ ಮದ್ಯದ ಬಾಟಲಿಗಳು!

ಹಾವೇರಿ: ರಾಜ್ಯಾದ್ಯಂತ ಇಂದಿನಿಂದ ಕಾಲೇಜು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸ್ಯಾನಿಟೈಸ್​ ಮಾಡಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಹಾವೇರಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ ಸಿದ್ದತೆ ಕಂಡು ಬಂದಿಲ್ಲ. ಸರ್ಕಾರ ಕಾಲೇಜು ತೆರೆಯಲು ಅನುಮತಿ ನೀಡಿದರೂ ಸಿಬ್ಬಂದಿ ಮಾತ್ರ ಯಾವುದೇ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಕಾಲೇಜಿನ ಕೊಠಡಿಗಳ ಮುಂದೆ ಮದ್ಯದ ಬಾಟಲಿ, ನೀರಿನ ಬಾಟಲಿಗಳು ಬಿದ್ದಿವೆ. ಇನ್ನೂ ಕೊಠಡಿಗಳಿಗೆ ಸ್ಯಾನಿಟೈಸರ್ ಕೂಡ ಮಾಡಿಲ್ಲ. ಇಂದಿನಿಂದ ತರಗತಿಗಳು ಶುರುವಾಗಬೇಕಿತ್ತು. ಆದರೆ ಸಿಬ್ಬಂದಿ ಕೂಡ ಕಾಲೇಜಿನತ್ತ ಸುಳಿದಿಲ್ಲ. […]

ಕಾಲೇಜು ಕೊಠಡಿಗಳ ಮುಂದೆ ಬಿದ್ದಿವೆ ಮದ್ಯದ ಬಾಟಲಿಗಳು!
ಸಾಧು ಶ್ರೀನಾಥ್​

Updated on: Nov 17, 2020 | 10:43 AM

ಹಾವೇರಿ: ರಾಜ್ಯಾದ್ಯಂತ ಇಂದಿನಿಂದ ಕಾಲೇಜು ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸ್ಯಾನಿಟೈಸ್​ ಮಾಡಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಹಾವೇರಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಆ ಸಿದ್ದತೆ ಕಂಡು ಬಂದಿಲ್ಲ.

ಸರ್ಕಾರ ಕಾಲೇಜು ತೆರೆಯಲು ಅನುಮತಿ ನೀಡಿದರೂ ಸಿಬ್ಬಂದಿ ಮಾತ್ರ ಯಾವುದೇ ಸಿದ್ಧತೆಯನ್ನು ಮಾಡಿಕೊಂಡಿಲ್ಲ. ಕಾಲೇಜಿನ ಕೊಠಡಿಗಳ ಮುಂದೆ ಮದ್ಯದ ಬಾಟಲಿ, ನೀರಿನ ಬಾಟಲಿಗಳು ಬಿದ್ದಿವೆ. ಇನ್ನೂ ಕೊಠಡಿಗಳಿಗೆ ಸ್ಯಾನಿಟೈಸರ್ ಕೂಡ ಮಾಡಿಲ್ಲ. ಇಂದಿನಿಂದ ತರಗತಿಗಳು ಶುರುವಾಗಬೇಕಿತ್ತು.

ಆದರೆ ಸಿಬ್ಬಂದಿ ಕೂಡ ಕಾಲೇಜಿನತ್ತ ಸುಳಿದಿಲ್ಲ. ಕಾಲೇಜು ಬೀಗ ಹಾಕಲಾಗಿದೆ. ನಿನ್ನೆ ಕಾಲೇಜಿನ ಕೊಠಡಿ ಹಾಗೂ ಅಂಗಳದಲ್ಲಿ ಕಸಗುಡಿಸಿದ್ದು ಬಿಟ್ರೆ ಈವರೆಗೂ ಸ್ಯಾನಿಟೈಸರ್ ಹೊಡೆದಿಲ್ಲ. ಈ ರೀತಿಯ ವಾತಾವರಣ ಹಾವೇರಿ ನಗರದ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕುಂಡು ಬಂದಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us