AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರಿಯಾದ ರಸ್ತೆ ಹಾಗಂದ್ರೇನು ಅಂತಾರೆ ಉಡುಪಿ ಜಿಲ್ಲೆಯ ಈ ಗ್ರಾಮಸ್ಥರು

ಉಡುಪಿ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತಾ ಹೇಳಿ ಅಧಿಕಾರಕ್ಕೆ ಬರೋ ರಾಜಕಾರಣಿಗಳು, ಅಧಿಕಾರ ಸಿಕ್ಕ ತಕ್ಷಣವೇ ಗ್ರಾಮಗಳನ್ನ ಮರೆತು ಸಿಟಿಯ ಎಸಿ ಕಚೇರಿಯಲ್ಲಿ ಮೈಮರೆಯುತ್ತಾರೆ. ಹೀಗೆ ನಿರ್ಲಕ್ಷ್ಯಕ್ಕೊಳಗಾದ ಗ್ರಾಮವೊಂದು ಉಡುಪಿ ಜಿಲ್ಲೆಯಲ್ಲಿದೆ. ಈ ಊರಿಗೆ ಹೋದ್ರೆ ಮೈಯಲ್ಲಿನ ನರನಾಡಿಗಳಿಗೆ ವ್ಯಾಯಾಮದ ಅನುಭವವಾಗುತ್ತೆ. ಗ್ರಾಮಸ್ಥರು ವೋಟು ಹಾಕಿ ಸುಸ್ತಾದರೇ ಹೊರತು ಗ್ರಾಮದ ಅಭಿವೃದ್ಧಿ ಆಗಲಿಲ್ಲ ಹೌದು ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿತ್ರೋಡಿ ಗ್ರಾಮ ಕಳೆದ ಹಲವಾರು ದಶಕಗಳಿಂದ ಅಭಿವೃದ್ದಿಯನ್ನೇ ಕಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ […]

ಸರಿಯಾದ ರಸ್ತೆ ಹಾಗಂದ್ರೇನು ಅಂತಾರೆ ಉಡುಪಿ ಜಿಲ್ಲೆಯ ಈ ಗ್ರಾಮಸ್ಥರು
Guru
| Updated By: |

Updated on:Jul 10, 2020 | 10:12 PM

Share

ಉಡುಪಿ: ಗ್ರಾಮಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ ಅಂತಾ ಹೇಳಿ ಅಧಿಕಾರಕ್ಕೆ ಬರೋ ರಾಜಕಾರಣಿಗಳು, ಅಧಿಕಾರ ಸಿಕ್ಕ ತಕ್ಷಣವೇ ಗ್ರಾಮಗಳನ್ನ ಮರೆತು ಸಿಟಿಯ ಎಸಿ ಕಚೇರಿಯಲ್ಲಿ ಮೈಮರೆಯುತ್ತಾರೆ. ಹೀಗೆ ನಿರ್ಲಕ್ಷ್ಯಕ್ಕೊಳಗಾದ ಗ್ರಾಮವೊಂದು ಉಡುಪಿ ಜಿಲ್ಲೆಯಲ್ಲಿದೆ. ಈ ಊರಿಗೆ ಹೋದ್ರೆ ಮೈಯಲ್ಲಿನ ನರನಾಡಿಗಳಿಗೆ ವ್ಯಾಯಾಮದ ಅನುಭವವಾಗುತ್ತೆ.

ಗ್ರಾಮಸ್ಥರು ವೋಟು ಹಾಕಿ ಸುಸ್ತಾದರೇ ಹೊರತು ಗ್ರಾಮದ ಅಭಿವೃದ್ಧಿ ಆಗಲಿಲ್ಲ ಹೌದು ಉಡುಪಿ ಜಿಲ್ಲೆಯ ಉದ್ಯಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿತ್ರೋಡಿ ಗ್ರಾಮ ಕಳೆದ ಹಲವಾರು ದಶಕಗಳಿಂದ ಅಭಿವೃದ್ದಿಯನ್ನೇ ಕಂಡಿಲ್ಲ. ಅಭಿವೃದ್ಧಿಯ ಹೆಸರಲ್ಲಿ ವೋಟು ಹಾಕಿಸಿಕೊಂಡ ಜನಪ್ರತಿನಿಧಿಗಳು ಚುನಾವಣೆಯ ನಂತರ ಗ್ರಾಮದತ್ತ ಸುಳಿದೇ ಇಲ್ಲ. ಗ್ರಾಮಸ್ಥರು ವೋಟು ಹಾಕಿ ಹಾಕಿ ಸುಸ್ತಾದರೇ ಹೊರತು ಗ್ರಾಮದ ಅಭಿವೃದ್ಧಿ ಆಗಲಿಲ್ಲ. ಅದ್ರಲ್ಲೂ ಗ್ರಾಮದ ಜನರಿಗೆ ಹೊರ ಊರಿಗೆ ಹೋಗಲು ಬರಲು ಅವಶ್ಯವಿರುವ ಮೂಲ ಸೌಕರ್ಯಗಳಲ್ಲಿ ಒಂದಾದ ರಸ್ತೆ ಭಾಗ್ಯ ಇಲ್ಲವೇ ಇಲ್ಲ.

ರಸ್ತೆಯಲ್ಲಿವೆ ಮೀನುಗಾರಿಕೆ ಹೊಂಡಗಳು ದಿನನಿತ್ಯ ಸಾವಿರಾರು ಜನರು ಮತ್ತು ವಾಹನ ಓಡಾಟ ಮಾಡುವ ಈ ರಸ್ತೆಯಲ್ಲಿ ಅನಾರೋಗ್ಯ ಪೀಡಿತರು ಹಾಗೂ ಶಾಲಾ ಮಕ್ಕಳು ದಿನನಿತ್ಯ ಗೋಳು ಅನುಭವಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉದ್ಯಾವರ ಪೇಟೆಯಿಂದ ಪಿತ್ರೋಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಈಗ ಮೀನುಗಾರಿಕೆಗೆ ಉಪಯೋಗಿಸಬಹುದಾದ ರಸ್ತೆಯಾಗಿದೆ. ಅಷ್ಟೋಂದು ಹೊಂಡಗಳಿವೆ ಈ ರಸ್ತೆಯಲ್ಲಿ.

ಶಾಸಕರ ಹಿಂಬಾಲಕರ ಮನೆ ರಸ್ತೆಗಳು ಮಾತ್ರ ಅಭಿವೃದ್ಧಿ ಸ್ಥಳೀಯ ಶಾಸಕರಿಂದ ಹಿಡಿದು ಗ್ರಾಮ ಪಂಚಾಯತಿ ಸದಸ್ಯರವರೆಗೂ ದಿನನಿತ್ಯ ಈ ರಸ್ತೆಯಲ್ಲಿ ಓಡಾಟ ಮಾಡುತ್ತಾರೆ. ಆದರೂ ಈ ರಸ್ತೆಯನ್ನು ಸರಿಪಡಿಸುವುದಕ್ಕೆ ಹೋಗಿಲ್ಲ. ಸ್ಥಳೀಯ ಶಾಸಕರ ಕೆಲ ಆಪ್ತರು ಮಾತ್ರ ತಮ್ಮ ಮನೆಗೆ ಹೋಗುವ ರಸ್ತೆಗಳನ್ನು ಕಾಂಕ್ರೀಟಿಕರಣ ಮಾಡಿಸಿಕೊಂಡರೇ ಹೊರತು ಸಾರ್ವಜನಿಕರು ಓಡಾಡುವ ರಸ್ತೆಯನ್ನು ಸರಿಪಡಿಸುವ ಗೋಜಿಗೆ ಹೋಗಿಲ್ಲ.

ಜನರಿಗೆ ಮಾತ್ರ ಅದೇ ರಸ್ತೆ, ಅದೇ ಗೋಳು, ಅದೇ ಹುಸಿ ಭರವಸೆ ಈ ನಡುವೆ ಮತ್ತೆ ಗ್ರಾಮ ಪಂಚಾಯಿತಿ ಚುನಾವಣೆಗೆ ಜನನಾಯಕರು ತಯಾರಿ ನಡೆಸಿದ್ದಾರೆ. ಅಧಿಕಾರದಲ್ಲಿದ್ದವರು ಇನ್ನಿಲ್ಲದ ಕುಂಟು ನೆಪ ಹೇಳುತ್ತಿದ್ರೆ, ಅಧಿಕಾರಕ್ಕೆ ಬರುವ ಹುಮ್ಮಸ್ಸಿನಲ್ಲಿರೋರು ಸ್ವರ್ಗವನ್ನೇ ಭೂಮಿಗೆ ಇಳಿಸುವ ಮಾತನಾಡುತ್ತಿದ್ದಾರೆ.

ಆದ್ರೆ ಗ್ರಾಮಕ್ಕೆ ಅವಶ್ಯವಿರುವ ರಸ್ತೆ ಮಾತ್ರ ಅದೇ ದುಸ್ಥಿತಿಯಲ್ಲಿದೆ. ಜನರಿಗೆ ಮಾತ್ರ ಅದೇ ರಸ್ತೆ, ಅದೇ ಗೋಳು, ಅದೇ ಹುಸಿ ಭರವಸೆ. ಅಭಿವೃದ್ಧಿ ಮಾತ್ರ ಮರೀಚಿಕೆಯಾಗಿದೆ -ಹರೀಶ್ ಪಾಲೆಚ್ಚಾರ್

Published On - 7:25 pm, Fri, 10 July 20

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ