ಕೊರೊನಾಗೆ ಹೆದರಿ ಊರು ತೊರೆದ ಗ್ರಾಮಸ್ಥರು!

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ರಣಕೇಕೆ ಅಟ್ಟಹಾಸ ಮೆರೀತಿದೆ. ಕೆಲವೊಂದು ಕಡೆ ಕೊರೊನಾದಿಂದ ಬೆದರಿ ಹೋಗಿರೋ ಜನ ಸ್ವಯಂ ಲಾಕ್​ಡೌನ್ ಹೆಜ್ಜೆ ತುಳಿದಿದ್ದಾರೆ. ಕೊಪ್ಪಳದ 16ನೇ ವಾರ್ಡ್‌ನಲ್ಲಿ 67 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೃದ್ಧ ವಾಸ ಮಾಡುತ್ತಿದ್ದ ಏರಿಯಾದಲ್ಲಿ ಆತಂಕ ಶುರುವಾಗಿದೆ. ಕೊರೊನಾ ಆತಂಕದಿಂದ ನಗರದ ಕುರುಬರ ಓಣಿಯಲ್ಲಿ ಬೀಗ ಹಾಕಿ ಮನೆಯನ್ನೇ ಜನರು ತೊರೆದಿದ್ದಾರೆ. ಟ್ರಾವೆಲ್ ಹಿಸ್ಟರಿ ಇಲ್ಲದ ವೃದ್ಧನಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಹೀಗಾಗಿ ಹೆಮ್ಮಾರಿ ಭಯದಿಂದ ವೃದ್ಧನ ಅಕ್ಕಪಕ್ಕದ ಬಹುತೇಕ […]

ಕೊರೊನಾಗೆ ಹೆದರಿ ಊರು ತೊರೆದ ಗ್ರಾಮಸ್ಥರು!
ಸಾಧು ಶ್ರೀನಾಥ್​ Edited By:

Updated on: Jun 28, 2020 | 3:10 PM

ಕೊಪ್ಪಳ: ರಾಜ್ಯದಲ್ಲಿ ಕೊರೊನಾ ರಣಕೇಕೆ ಅಟ್ಟಹಾಸ ಮೆರೀತಿದೆ. ಕೆಲವೊಂದು ಕಡೆ ಕೊರೊನಾದಿಂದ ಬೆದರಿ ಹೋಗಿರೋ ಜನ ಸ್ವಯಂ ಲಾಕ್​ಡೌನ್ ಹೆಜ್ಜೆ ತುಳಿದಿದ್ದಾರೆ. ಕೊಪ್ಪಳದ 16ನೇ ವಾರ್ಡ್‌ನಲ್ಲಿ 67 ವರ್ಷದ ವೃದ್ಧನಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವೃದ್ಧ ವಾಸ ಮಾಡುತ್ತಿದ್ದ ಏರಿಯಾದಲ್ಲಿ ಆತಂಕ ಶುರುವಾಗಿದೆ.

ಕೊರೊನಾ ಆತಂಕದಿಂದ ನಗರದ ಕುರುಬರ ಓಣಿಯಲ್ಲಿ ಬೀಗ ಹಾಕಿ ಮನೆಯನ್ನೇ ಜನರು ತೊರೆದಿದ್ದಾರೆ. ಟ್ರಾವೆಲ್ ಹಿಸ್ಟರಿ ಇಲ್ಲದ ವೃದ್ಧನಿಗೆ ಕೊರೊನಾ ಸೋಂಕು ವಕ್ಕರಿಸಿದೆ. ಹೀಗಾಗಿ ಹೆಮ್ಮಾರಿ ಭಯದಿಂದ ವೃದ್ಧನ ಅಕ್ಕಪಕ್ಕದ ಬಹುತೇಕ ಮನೆಗಳಿಗೆ ಬೀಗ ಹಾಕಲಾಗಿದೆ. ಮನೆಗಳನ್ನು ಖಾಲಿ ಮಾಡಿಕೊಂಡು ಸಂಬಂಧಿಕರ ಮನೆಗೆ ನಿವಾಸಿಗಳು ತೆರಳಿದ್ದಾರೆ.

Published On - 3:09 pm, Sun, 28 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us