ಆ ಕಡೆ ಮದ್ಯಕ್ಕಾಗಿ ಸಾಲು, ಪಕ್ಕದಲ್ಲೇ ಕುಡಿಯುವ ನೀರಿಗೂ ಸಾಲು! ಎಲ್ಲಿ?

ಬೆಂಗಳೂರು: ಮದ್ಯದಂಗಡಿಗಳು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ರಾತ್ರೋ ರಾತ್ರಿ ಕಿಲೋಮೀಟರ್ ಗಟ್ಟಲೆ ಮದ್ಯಪ್ರಿಯರು ಕ್ಯೂನಿಂತ ದೃಶ್ಯಗಳನ್ನು ನೀವು ಸಾಮಾನ್ಯವಾಗಿ ನೋಡಿದ್ದೀರಿ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಆ ದೃಶ್ಯಗಳು ವೈರಲ್ ಆಗಿವೆ. ಆದರೆ ಮದ್ಯದ ಮಧ್ಯೆಯು ಜನ ಇಲ್ಲಿಯೂ ಕ್ಯೂ ನಿಂತಿದ್ದಾರೆ. ಆದರೆ ಅವರು ನಿಂತಿರುವುದು ಮದ್ಯ ಖರೀದಿಗಾಗಿ ಅಲ್ಲ ನೀರಿಗಾಗಿ. ಬಿರು ಬಿಸಿಲು ಲೆಕ್ಕಿಸದೆ ಎಣ್ಣೆ ಪ್ರಿಯರು ಬಾರ್ ಮುಂದೆ ನಿಂತಿದ್ದಾರೆ. ಸಾಮಾಜಿಕ ಅಂತರವೇ ಇಲ್ಲದೇ ಮದ್ಯಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಬಳೆಪೇಟೆಯಲ್ಲಿ […]

ಆ ಕಡೆ ಮದ್ಯಕ್ಕಾಗಿ ಸಾಲು, ಪಕ್ಕದಲ್ಲೇ ಕುಡಿಯುವ ನೀರಿಗೂ ಸಾಲು! ಎಲ್ಲಿ?
ಸಾಧು ಶ್ರೀನಾಥ್​

Updated on: May 04, 2020 | 2:20 PM

ಬೆಂಗಳೂರು: ಮದ್ಯದಂಗಡಿಗಳು ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ರಾತ್ರೋ ರಾತ್ರಿ ಕಿಲೋಮೀಟರ್ ಗಟ್ಟಲೆ ಮದ್ಯಪ್ರಿಯರು ಕ್ಯೂನಿಂತ ದೃಶ್ಯಗಳನ್ನು ನೀವು ಸಾಮಾನ್ಯವಾಗಿ ನೋಡಿದ್ದೀರಿ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಆ ದೃಶ್ಯಗಳು ವೈರಲ್ ಆಗಿವೆ. ಆದರೆ ಮದ್ಯದ ಮಧ್ಯೆಯು ಜನ ಇಲ್ಲಿಯೂ ಕ್ಯೂ ನಿಂತಿದ್ದಾರೆ. ಆದರೆ ಅವರು ನಿಂತಿರುವುದು ಮದ್ಯ ಖರೀದಿಗಾಗಿ ಅಲ್ಲ ನೀರಿಗಾಗಿ.

ಬಿರು ಬಿಸಿಲು ಲೆಕ್ಕಿಸದೆ ಎಣ್ಣೆ ಪ್ರಿಯರು ಬಾರ್ ಮುಂದೆ ನಿಂತಿದ್ದಾರೆ. ಸಾಮಾಜಿಕ ಅಂತರವೇ ಇಲ್ಲದೇ ಮದ್ಯಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಬಳೆಪೇಟೆಯಲ್ಲಿ ಎಲ್ಲಾ ಅಂಗಡಿಗಳು ಓಪನ್ ಆಗಿರುವ ಕಾರಣ ಕುಡಿಯುವ ನೀರಿಗಾಗಿ ಜನ ಕ್ಯಾನ್​ಗಳನ್ನ ಹಿಡಿದು ನಿಂತಿದ್ದಾರೆ. ಬಳೆಪೇಟೆಯಲ್ಲಿ ಒಂದು ಕಡೆ ಮದ್ಯಕ್ಕಾಗಿ ಜನರ ಸರತಿ ಸಾಲು ಮತ್ತೊಂದು ಕಡೆ ಕುಡಿಯುವ ನೀರಿಗಾಗಿ ಸಾಲುಗಟ್ಟಿರೋ ಜನರ ದೃಶ್ಯ ಕಂಡುಬಂತ್ತು.

Published On - 2:06 pm, Mon, 4 May 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us