ಕಳ್ತನ ಆಗ್ತಿದೆ ಅಂತಾ ಬಾರ್ ಓಪನ್, ಖಾಕಿ ಕಣ್ಣೆದುರೇ ಮದ್ಯ ದೋಚಿ ಎಸ್ಕೇಪ್​?

ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಮದ್ಯ ಸಿಗದೆ ಕುಡುಕರು ಕಂಗಾಲಾಗಿದ್ದಾರೆ. ಆದ್ರೆ, ತುಮಕೂರು-ಕುಣಿಗಲ್ ರಸ್ತೆಯಲ್ಲಿರುವ ಮರೂರು ಹ್ಯಾಂಡ್‌ಪೋಸ್ಟ್ ಬಳಿಯ ಬಾರ್​ವೊಂದರಲ್ಲಿ ಪೊಲೀಸರ ಎದುರೇ ಮದ್ಯದ ಬಾಟಲಿ ಹೊತ್ತೊಯ್ದಿರುವ ಘಟನೆ ನಡೆದಿದೆ. ಬಾರ್​ನಲ್ಲಿ ಕಳ್ಳತನ ಆಗಿತ್ತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಹಾಗಾಗಿ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿದ್ದರು. ಪೊಲೀಸರ ಎದುರೇ MLA ಬೋರ್ಡ್ ಹಾಕಿಕೊಂಡ ಫಾರ್ಚೂನರ್ ಕಾರು, ಕೆಲ ಪ್ರಭಾವಿಗಳು ಬೈಕ್​ನಲ್ಲಿ ಮದ್ಯದ ಬಾಟಲಿಗಳನ್ನು ದೊಡ್ಡ ದೊಡ್ಡ ಬಾಕ್ಸ್​ಗಳಲ್ಲಿ ರವಾನೆ ಮಾಡಲಾಗಿದೆ. ಬಾರ್​ನಲ್ಲಿ ಕಳ್ಳತನವಾದ್ರೆ ಕೆಲವೊಂದು ನಿಯಮಗಳನ್ನು […]

ಕಳ್ತನ ಆಗ್ತಿದೆ ಅಂತಾ ಬಾರ್ ಓಪನ್, ಖಾಕಿ ಕಣ್ಣೆದುರೇ ಮದ್ಯ ದೋಚಿ ಎಸ್ಕೇಪ್​?
ಸಾಧು ಶ್ರೀನಾಥ್​

Updated on: Apr 21, 2020 | 4:28 PM

ಬೆಂಗಳೂರು: ಲಾಕ್​ಡೌನ್ ಸಮಯದಲ್ಲಿ ಮದ್ಯ ಸಿಗದೆ ಕುಡುಕರು ಕಂಗಾಲಾಗಿದ್ದಾರೆ. ಆದ್ರೆ, ತುಮಕೂರು-ಕುಣಿಗಲ್ ರಸ್ತೆಯಲ್ಲಿರುವ ಮರೂರು ಹ್ಯಾಂಡ್‌ಪೋಸ್ಟ್ ಬಳಿಯ ಬಾರ್​ವೊಂದರಲ್ಲಿ ಪೊಲೀಸರ ಎದುರೇ ಮದ್ಯದ ಬಾಟಲಿ ಹೊತ್ತೊಯ್ದಿರುವ ಘಟನೆ ನಡೆದಿದೆ.

ಬಾರ್​ನಲ್ಲಿ ಕಳ್ಳತನ ಆಗಿತ್ತು ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಹಾಗಾಗಿ ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಆಗಮಿಸಿದ್ದರು. ಪೊಲೀಸರ ಎದುರೇ MLA ಬೋರ್ಡ್ ಹಾಕಿಕೊಂಡ ಫಾರ್ಚೂನರ್ ಕಾರು, ಕೆಲ ಪ್ರಭಾವಿಗಳು ಬೈಕ್​ನಲ್ಲಿ ಮದ್ಯದ ಬಾಟಲಿಗಳನ್ನು ದೊಡ್ಡ ದೊಡ್ಡ ಬಾಕ್ಸ್​ಗಳಲ್ಲಿ ರವಾನೆ ಮಾಡಲಾಗಿದೆ.

ಬಾರ್​ನಲ್ಲಿ ಕಳ್ಳತನವಾದ್ರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕಾಗುತ್ತೆ. ಆದ್ರೆ ಇಲ್ಲಿ ಪೊಲೀಸರು ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಅದೂ ಅಲ್ದೆ ಕಣ್ಣ ಮುಂದೆಯೇ ನಡೆಯುತ್ತಿದ್ರೂ ಪೊಲೀಸರು ಗಪ್ ಚುಪ್ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us