AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಾಕ್​ಡೌನ್​ನಿಂದಾಗಿ ಚಿಕಿತ್ಸೆ ಸಿಗದೆ ಉಸಿರು ನಿಲ್ಲಿಸಿದ ಹಸುಗೂಸು

ಮಡಿಕೇರಿ: ಎಷ್ಟು ಕಣ್ಣೀರು ಹಾಕಿದ್ರೂ ತಣಿಯದ ನೋವು. ಹೇಳಿಕೊಳ್ಳಲಾಗದ ಸಂಕಟ. ಅಂದು ಕಿಲ ಕಿಲ ಅಂತಿದ್ದ ಇಂದಿಲ್ಲವಲ್ಲ ಅನ್ನೋ ಕೊರಗು. ದುಃಖ ಹೇಳೋಕಾಗ್ತಿಲ್ಲ. ಅಕ್ಕಪಕ್ಕದಲ್ಲೂ ಯಾರಿಲ್ಲ. ಸಮಾಧಾನ ಹೇಳಿದ್ರು ಆರದ ಗಾಯ. ಇವರ ಈ ಸಂಕಷ್ಟಕ್ಕೆ, ಕಣ್ಣೀರ ಹೊಳೆಗೆ ಕಾರಣ ಬದುಕಿಗೆ ಕೊಳ್ಳಿ ಇಟ್ಟಿರೋ ಕೊರೊನಾ. ಅದೇ ಹೆಮ್ಮಾರಿ ಕೊರೊನಾ. ಯೆಸ್​.. ಕೊರೊನಾ ಅನ್ನೋ ಹೆಮ್ಮಾರಿ ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಅದೆಷ್ಟೋ ಅಮಾಯಕ ಜೀವಗಳು ಉಸಿರು ಚೆಲ್ತಿವೆ. ಲಾಕ್​ಡೌನ್ ಬೆಂಕಿಗೆ ಸಿಲುಕಿ ಎಷ್ಟೋ ಜಿವಗಳು ಬೆಂದು […]

ಕೊರೊನಾ ಲಾಕ್​ಡೌನ್​ನಿಂದಾಗಿ ಚಿಕಿತ್ಸೆ ಸಿಗದೆ ಉಸಿರು ನಿಲ್ಲಿಸಿದ ಹಸುಗೂಸು
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Apr 22, 2020 | 6:37 AM

Share

ಮಡಿಕೇರಿ: ಎಷ್ಟು ಕಣ್ಣೀರು ಹಾಕಿದ್ರೂ ತಣಿಯದ ನೋವು. ಹೇಳಿಕೊಳ್ಳಲಾಗದ ಸಂಕಟ. ಅಂದು ಕಿಲ ಕಿಲ ಅಂತಿದ್ದ ಇಂದಿಲ್ಲವಲ್ಲ ಅನ್ನೋ ಕೊರಗು. ದುಃಖ ಹೇಳೋಕಾಗ್ತಿಲ್ಲ. ಅಕ್ಕಪಕ್ಕದಲ್ಲೂ ಯಾರಿಲ್ಲ. ಸಮಾಧಾನ ಹೇಳಿದ್ರು ಆರದ ಗಾಯ. ಇವರ ಈ ಸಂಕಷ್ಟಕ್ಕೆ, ಕಣ್ಣೀರ ಹೊಳೆಗೆ ಕಾರಣ ಬದುಕಿಗೆ ಕೊಳ್ಳಿ ಇಟ್ಟಿರೋ ಕೊರೊನಾ. ಅದೇ ಹೆಮ್ಮಾರಿ ಕೊರೊನಾ.

ಯೆಸ್​.. ಕೊರೊನಾ ಅನ್ನೋ ಹೆಮ್ಮಾರಿ ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಅದೆಷ್ಟೋ ಅಮಾಯಕ ಜೀವಗಳು ಉಸಿರು ಚೆಲ್ತಿವೆ. ಲಾಕ್​ಡೌನ್ ಬೆಂಕಿಗೆ ಸಿಲುಕಿ ಎಷ್ಟೋ ಜಿವಗಳು ಬೆಂದು ಹೋಗಿದ್ರೆ, ಈ ದಂಪತಿ ಕುಟುಂಬಕ್ಕೆ ಕೊರೊನಾ ದಿಗ್ಬಂಧನ ಯಮನಾಗಿ ಕಾಡಿದೆ. ಲಾಕ್​​​ಡೌನ್ ಅನ್ನೋ ಲಾಕಪ್​​ ಪುಟ್ಟ ಕಂದಮ್ಮನನ್ನೇ ಇವರಿಂದ ಕಸಿದುಕೊಂಡಿದೆ.

ಸೂಕ್ತ ಟೈಂಗೆ ಚಿಕಿತ್ಸೆ ಕೊಡಿಸಲಾಗದೆ ಹಸುಗೂಸು ಬಲಿ! ಮಡಿಕೇರಿ ಜಿಲ್ಲೆ ಸೋಮವಾರಪೇಟೆ ತಾಲೂಕಿ‌ನ ಹಾರಂಗಿ ಜಲಾಶಯ ಸಮೀಪದಲ್ಲಿರೋ ಉದುಗೂರು ಗ್ರಾಮದ ನಿವಾಸಿಗಳಾದ ಪ್ರಜೀಶ್ ಹಾಗೂ ಲೋಕಾಕ್ಷಿ ದಂಪತಿಗೆ 2 ತಿಂಗಳ ಹಿಂದಷ್ಟೆ ಎರಡನೇ ಗಂಡು ಮಗು ಜನಿಸಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಮಗುವಿಗೆ ದಿನೇ ದಿನೇ ಆರೋಗ್ಯದಲ್ಲಿ ಕೊಂಚ ಬದಲಾವಣೆ ಆಗ್ತಾ ಬಂತು. ಬಳಿಕ ಮಗುವಿಗೆ ದಿನೇ ದಿನೆ ಉಸಿರಾಟದ ಸಮಸ್ಯೆ ಕಾಣಿಸ್ಕೊಂಡಿತ್ತು.

ಆದ್ರೆ, ಲಾಕ್​​​ಡೌನ್​​​ನಿಂದಾಗಿ ಮಗುವನ್ನ ಆಸ್ಪತ್ರೆ ಸೂಕ್ತ ಸಮಯಕ್ಕೆ ಕರೆದೊಯ್ಯಲಾಗದೆ ಒದ್ದಾಡಿದ್ರು. ಹಸುಗೂಸಿಗೆ ಸೂಕ್ತ ಚಿಕಿತ್ಸೆ ಸಿಗದೆ ಉಸಿರು ಚೆಲ್ಲಿದೆ. ಮುದ್ದಾದ ಮಗುವನ್ನ ಕಳೆದುಕೊಂಡು ದಂಪತಿ ಕಂಗಾಲಾಗಿದ್ದಾರೆ. ಕರುಳ ಬಳ್ಳಿಯನ್ನ ಕಳೆದ್ಕೊಂಡು ಹೆತ್ತಮ್ಮ ಕಣ್ಣೀರಿಡ್ತಿದ್ದಾಳೆ.

ಇನ್ನು, ಆಟೋ, ಕಾರು ಇರೊ ಜನರನ್ನ ಎಷ್ಟು ಬೇಡಿದ್ರೂ ಯಾರೂ ನೆರವಿಗೆ ಬಂದಿಲ್ವಂತೆ. ಉಸಿರಾಟದ ತೊಂದ್ರೆಯಿಂದ ಬಳಲುತ್ತಿದ್ದ ಮಗುವನ್ನ ಸಂಬಂಧಿಕರ ಬೈಕ್​​ನಲ್ಲಿ ಶುಂಟಿಕೊಪ್ಪ, ಕುಶಾಲನಗರ, ಮಡಿಕೇರಿಯಲ್ಲಿರೋ ಆಸ್ಪತ್ರೆಗಳಿಗೆಲ್ಲಾ ಕರೆದೊಯ್ದಿದ್ದಾರೆ. ಆದ್ರೆ, ವೈದ್ಯರು ಮೈಸೂರಿಗೆ ಕರ್ಕೊಂಡು ಹೋಗುವಂತೆ ಹೇಳಿದ್ರಂತೆ.

ಹೇಗೋ ಕಾರಿನ ವ್ಯವಸ್ಥೆ ಮಾಡ್ಕೊಂಡು ಮೈಸೂರು ಸೇರಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಸುಗೂಸು ಉಸಿರು ನಿಲ್ಲಿಸಿದೆ. ಪುಟ್ಟ ಕಂದಮ್ಮನನ್ನ ಕಳೆದ್ಕೊಂಡು ದಂಪತಿ ಕಂಗಾಲಾಗಿದ್ದಾರೆ.

ಒಟ್ನಲ್ಲಿ ಒಂದ್ಕಡೆ ಕ್ರೂರಿ ಕೊರೊನಾದಿಂದ ಪ್ರಾಣ ಉಳಿಸೋಕೆ ಸರ್ಕಾರ ಲಾಕ್ ಡೌನ್ ಮಾಡಿದೆ. ತುರ್ತು ಸಂದರ್ಭದಲ್ಲಿ ಯಾರಾದ್ರೂ ನೆರವು ನೀಡ್ಬೋದು. ಚಿಕಿತ್ಸೆ ಕೊಡಿಸ್ಬೋದು ಅಂತಾನೂ ಹೇಳಿದೆ. ಆದ್ರಿಲ್ಲಿ ಲಾಕ್​​ಡೌನ್ ಸಂಕಷ್ಟ. ಜನರ ಅಸಹಾಯಕತೆ, ನಿರ್ಲಕ್ಷ್ಯ, ಭಯಕ್ಕೆ ಮಗುವಿನ ಪ್ರಾಣವೇ ಹೋಗಿದೆ. ಯಾರಾದ್ರೂ ಸಹಾಯಕ್ಕೆ ಬಂದಿದ್ರೆ ನಿಜಕ್ಕೂ ಹಸುಗೂಸಿನ ಪ್ರಾಣ ಉಳಿಸ್ಬೋದಿತ್ತೇನೋ.

Follow Us
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
ದೇಶಾದ್ಯಂತ ಇಂದಿನಿಂದ ನಾಲ್ಕು ದಿನಗಳ ಕಾಲ ಬ್ಯಾಂಕ್​ಗಳು ಬಂದ್
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
‘ನನ್ನತ್ರ ನಡ್ಯಲ್ಲ’; ಕಾವ್ಯಾಗೆ ಖಡಕ್ ವಾರ್ನಿಂಗ್ ಕೊಟ್ಟ ಗಗನ್ ಚಿನ್ನಪ್ಪ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ಜಿಬಿಎ ಪೌರಕಾರ್ಮಿಕನ ಮೇಲೆ ಹಲ್ಲೆ; ಕೇರಳದ ಯುವಕ, ಯುವತಿ ಪೊಲೀಸ್ ವಶಕ್ಕೆ
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ದೆಹಲಿಗೆ ಆಗಮಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಇಂದು ಈ ರಾಶಿಯವರು ಹಣಕಾಸಿನ ವಿಚಾರದಲ್ಲಿ ಜಾಗೃತರಾಗಿರಿ
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ