AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಾಕ್​ಡೌನ್​ನಿಂದಾಗಿ ಚಿಕಿತ್ಸೆ ಸಿಗದೆ ಉಸಿರು ನಿಲ್ಲಿಸಿದ ಹಸುಗೂಸು

ಮಡಿಕೇರಿ: ಎಷ್ಟು ಕಣ್ಣೀರು ಹಾಕಿದ್ರೂ ತಣಿಯದ ನೋವು. ಹೇಳಿಕೊಳ್ಳಲಾಗದ ಸಂಕಟ. ಅಂದು ಕಿಲ ಕಿಲ ಅಂತಿದ್ದ ಇಂದಿಲ್ಲವಲ್ಲ ಅನ್ನೋ ಕೊರಗು. ದುಃಖ ಹೇಳೋಕಾಗ್ತಿಲ್ಲ. ಅಕ್ಕಪಕ್ಕದಲ್ಲೂ ಯಾರಿಲ್ಲ. ಸಮಾಧಾನ ಹೇಳಿದ್ರು ಆರದ ಗಾಯ. ಇವರ ಈ ಸಂಕಷ್ಟಕ್ಕೆ, ಕಣ್ಣೀರ ಹೊಳೆಗೆ ಕಾರಣ ಬದುಕಿಗೆ ಕೊಳ್ಳಿ ಇಟ್ಟಿರೋ ಕೊರೊನಾ. ಅದೇ ಹೆಮ್ಮಾರಿ ಕೊರೊನಾ. ಯೆಸ್​.. ಕೊರೊನಾ ಅನ್ನೋ ಹೆಮ್ಮಾರಿ ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಅದೆಷ್ಟೋ ಅಮಾಯಕ ಜೀವಗಳು ಉಸಿರು ಚೆಲ್ತಿವೆ. ಲಾಕ್​ಡೌನ್ ಬೆಂಕಿಗೆ ಸಿಲುಕಿ ಎಷ್ಟೋ ಜಿವಗಳು ಬೆಂದು […]

ಕೊರೊನಾ ಲಾಕ್​ಡೌನ್​ನಿಂದಾಗಿ ಚಿಕಿತ್ಸೆ ಸಿಗದೆ ಉಸಿರು ನಿಲ್ಲಿಸಿದ ಹಸುಗೂಸು
ಸಾಧು ಶ್ರೀನಾಥ್​
|

Updated on: Apr 22, 2020 | 6:37 AM

Share

ಮಡಿಕೇರಿ: ಎಷ್ಟು ಕಣ್ಣೀರು ಹಾಕಿದ್ರೂ ತಣಿಯದ ನೋವು. ಹೇಳಿಕೊಳ್ಳಲಾಗದ ಸಂಕಟ. ಅಂದು ಕಿಲ ಕಿಲ ಅಂತಿದ್ದ ಇಂದಿಲ್ಲವಲ್ಲ ಅನ್ನೋ ಕೊರಗು. ದುಃಖ ಹೇಳೋಕಾಗ್ತಿಲ್ಲ. ಅಕ್ಕಪಕ್ಕದಲ್ಲೂ ಯಾರಿಲ್ಲ. ಸಮಾಧಾನ ಹೇಳಿದ್ರು ಆರದ ಗಾಯ. ಇವರ ಈ ಸಂಕಷ್ಟಕ್ಕೆ, ಕಣ್ಣೀರ ಹೊಳೆಗೆ ಕಾರಣ ಬದುಕಿಗೆ ಕೊಳ್ಳಿ ಇಟ್ಟಿರೋ ಕೊರೊನಾ. ಅದೇ ಹೆಮ್ಮಾರಿ ಕೊರೊನಾ.

ಯೆಸ್​.. ಕೊರೊನಾ ಅನ್ನೋ ಹೆಮ್ಮಾರಿ ಕಂಡ ಕಂಡವರನ್ನ ತೆಕ್ಕೆಗೆ ಬಾಚಿಕೊಳ್ತಿದೆ. ಅದೆಷ್ಟೋ ಅಮಾಯಕ ಜೀವಗಳು ಉಸಿರು ಚೆಲ್ತಿವೆ. ಲಾಕ್​ಡೌನ್ ಬೆಂಕಿಗೆ ಸಿಲುಕಿ ಎಷ್ಟೋ ಜಿವಗಳು ಬೆಂದು ಹೋಗಿದ್ರೆ, ಈ ದಂಪತಿ ಕುಟುಂಬಕ್ಕೆ ಕೊರೊನಾ ದಿಗ್ಬಂಧನ ಯಮನಾಗಿ ಕಾಡಿದೆ. ಲಾಕ್​​​ಡೌನ್ ಅನ್ನೋ ಲಾಕಪ್​​ ಪುಟ್ಟ ಕಂದಮ್ಮನನ್ನೇ ಇವರಿಂದ ಕಸಿದುಕೊಂಡಿದೆ.

ಸೂಕ್ತ ಟೈಂಗೆ ಚಿಕಿತ್ಸೆ ಕೊಡಿಸಲಾಗದೆ ಹಸುಗೂಸು ಬಲಿ! ಮಡಿಕೇರಿ ಜಿಲ್ಲೆ ಸೋಮವಾರಪೇಟೆ ತಾಲೂಕಿ‌ನ ಹಾರಂಗಿ ಜಲಾಶಯ ಸಮೀಪದಲ್ಲಿರೋ ಉದುಗೂರು ಗ್ರಾಮದ ನಿವಾಸಿಗಳಾದ ಪ್ರಜೀಶ್ ಹಾಗೂ ಲೋಕಾಕ್ಷಿ ದಂಪತಿಗೆ 2 ತಿಂಗಳ ಹಿಂದಷ್ಟೆ ಎರಡನೇ ಗಂಡು ಮಗು ಜನಿಸಿತ್ತು. ಆರಂಭದಲ್ಲಿ ಚೆನ್ನಾಗಿಯೇ ಇದ್ದ ಮಗುವಿಗೆ ದಿನೇ ದಿನೇ ಆರೋಗ್ಯದಲ್ಲಿ ಕೊಂಚ ಬದಲಾವಣೆ ಆಗ್ತಾ ಬಂತು. ಬಳಿಕ ಮಗುವಿಗೆ ದಿನೇ ದಿನೆ ಉಸಿರಾಟದ ಸಮಸ್ಯೆ ಕಾಣಿಸ್ಕೊಂಡಿತ್ತು.

ಆದ್ರೆ, ಲಾಕ್​​​ಡೌನ್​​​ನಿಂದಾಗಿ ಮಗುವನ್ನ ಆಸ್ಪತ್ರೆ ಸೂಕ್ತ ಸಮಯಕ್ಕೆ ಕರೆದೊಯ್ಯಲಾಗದೆ ಒದ್ದಾಡಿದ್ರು. ಹಸುಗೂಸಿಗೆ ಸೂಕ್ತ ಚಿಕಿತ್ಸೆ ಸಿಗದೆ ಉಸಿರು ಚೆಲ್ಲಿದೆ. ಮುದ್ದಾದ ಮಗುವನ್ನ ಕಳೆದುಕೊಂಡು ದಂಪತಿ ಕಂಗಾಲಾಗಿದ್ದಾರೆ. ಕರುಳ ಬಳ್ಳಿಯನ್ನ ಕಳೆದ್ಕೊಂಡು ಹೆತ್ತಮ್ಮ ಕಣ್ಣೀರಿಡ್ತಿದ್ದಾಳೆ.

ಇನ್ನು, ಆಟೋ, ಕಾರು ಇರೊ ಜನರನ್ನ ಎಷ್ಟು ಬೇಡಿದ್ರೂ ಯಾರೂ ನೆರವಿಗೆ ಬಂದಿಲ್ವಂತೆ. ಉಸಿರಾಟದ ತೊಂದ್ರೆಯಿಂದ ಬಳಲುತ್ತಿದ್ದ ಮಗುವನ್ನ ಸಂಬಂಧಿಕರ ಬೈಕ್​​ನಲ್ಲಿ ಶುಂಟಿಕೊಪ್ಪ, ಕುಶಾಲನಗರ, ಮಡಿಕೇರಿಯಲ್ಲಿರೋ ಆಸ್ಪತ್ರೆಗಳಿಗೆಲ್ಲಾ ಕರೆದೊಯ್ದಿದ್ದಾರೆ. ಆದ್ರೆ, ವೈದ್ಯರು ಮೈಸೂರಿಗೆ ಕರ್ಕೊಂಡು ಹೋಗುವಂತೆ ಹೇಳಿದ್ರಂತೆ.

ಹೇಗೋ ಕಾರಿನ ವ್ಯವಸ್ಥೆ ಮಾಡ್ಕೊಂಡು ಮೈಸೂರು ಸೇರಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ರೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಹಸುಗೂಸು ಉಸಿರು ನಿಲ್ಲಿಸಿದೆ. ಪುಟ್ಟ ಕಂದಮ್ಮನನ್ನ ಕಳೆದ್ಕೊಂಡು ದಂಪತಿ ಕಂಗಾಲಾಗಿದ್ದಾರೆ.

ಒಟ್ನಲ್ಲಿ ಒಂದ್ಕಡೆ ಕ್ರೂರಿ ಕೊರೊನಾದಿಂದ ಪ್ರಾಣ ಉಳಿಸೋಕೆ ಸರ್ಕಾರ ಲಾಕ್ ಡೌನ್ ಮಾಡಿದೆ. ತುರ್ತು ಸಂದರ್ಭದಲ್ಲಿ ಯಾರಾದ್ರೂ ನೆರವು ನೀಡ್ಬೋದು. ಚಿಕಿತ್ಸೆ ಕೊಡಿಸ್ಬೋದು ಅಂತಾನೂ ಹೇಳಿದೆ. ಆದ್ರಿಲ್ಲಿ ಲಾಕ್​​ಡೌನ್ ಸಂಕಷ್ಟ. ಜನರ ಅಸಹಾಯಕತೆ, ನಿರ್ಲಕ್ಷ್ಯ, ಭಯಕ್ಕೆ ಮಗುವಿನ ಪ್ರಾಣವೇ ಹೋಗಿದೆ. ಯಾರಾದ್ರೂ ಸಹಾಯಕ್ಕೆ ಬಂದಿದ್ರೆ ನಿಜಕ್ಕೂ ಹಸುಗೂಸಿನ ಪ್ರಾಣ ಉಳಿಸ್ಬೋದಿತ್ತೇನೋ.

ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ನೀವೆಲ್ಲರೂ ನನ್ನ ರಕ್ಷಣೆಗೆ ಬರಬೇಕು: ಸದನದಲ್ಲಿ ಪರಿಪರಿಯಾಗಿ ಬೇಡಿಕೊಂಡ ಶಾಸಕ
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
ಗರ್ಭಿಣಿ ಸೊಸೆಯನ್ನು ಮಾವ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ SP
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆ: ಲೈವ್ ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ರಾಜ್ ಬಿ ಶೆಟ್ಟಿಯ ಸಕ್ಸಸ್ ಗುಟ್ಟು ರಟ್ಟು ಮಾಡಿದ ಸುದೀಪ್: ವಿಡಿಯೋ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಧಮ್ಕಿ ಕೇಸ್ ಆರೋಪಿ ರಾಜೀವ್ ಗೌಡ ಪತ್ನಿ ವಿಧಾನಸೌಧದಲ್ಲಿ ಪ್ರತ್ಯಕ್ಷ
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ಸದನದಲ್ಲಿ ಪೆನ್​ಡ್ರೈವ್ ತೋರಿಸಿದ ಆರ್​ ಅಶೋಕ್: ಯಾವ ಮ್ಯಾಟರ್ ಗೊತ್ತಾ?
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
ನಿವೃತ್ತಿ ಬಗ್ಗೆ ಸ್ಫೋಟಕ ಹೇಳಿಕೆ ನೀಡಿದ ಕೆಎಲ್ ರಾಹುಲ್
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
‘ದರ್ಶನ್ ‘ಲ್ಯಾಂಡ್​ಲಾರ್ಡ್’ ನೋಡಿದ್ದರೆ ಏನೆನ್ನುತ್ತಿದ್ದರು?’
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಅಜಿತ್ ಪವಾರ್ ಅಂತ್ಯಕ್ರಿಯೆಗೆ ಸೇರಿದ್ದ ಜನಸಾಗರ ನೋಡಿ!
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್
ಈ ವರ್ಷ ನಟಿ ರಚಿತಾ ರಾಮ್ ಮದುವೆ: ವಿಷಯ ಖಚಿತಪಡಿಸಿದ ಡಿಂಪಲ್ ಕ್ವೀನ್