
ರಾಯಚೂರು: ಮದ್ಯ ಸೇವಿಸಿ ಸಿರವಾರ ತಹಶೀಲ್ದಾರ್ಗೆ ನಿಂದಿಸಿದ ಉಪ ತಹಶೀಲ್ದಾರ್ನನ್ನು ಅಮಾನತು ಮಾಡಲಾಗಿದೆ. ಗುಡದೂರ ಉಪ ತಹಶೀಲ್ದಾರ್ ರಾಮನಗೌಡ ಅಮಾನತುಗೊಂಡ ಅಧಿಕಾರಿ.
ಸಿರವಾರ ತಹಶೀಲ್ದಾರ್ಗೆ ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪ ಮತ್ತು ಕರ್ತವ್ಯದಲ್ಲಿದ್ದಾಗ ಮದ್ಯ ಸೇವಿಸಿ ನಿಂದಿಸಿದ ಆರೋಪದ ಮೇಲೆ ಮಸ್ಕಿ ತಾಲೂಕಿನ ಗುಡದೂರ ಉಪ ತಹಶೀಲ್ದಾರ್ ರಾಮನಗೌಡರನ್ನು ಸಸ್ಪೆಂಡ್ ಮಾಡಿ, ರಾಯಚೂರು ಜಿಲ್ಲಾಧಿಕಾರಿ ವೆಂಕಟೇಶಕುಮಾರ್ ಆದೇಶ ಹೊರಡಿಸಿದ್ದಾರೆ.
Published On - 4:10 pm, Thu, 7 May 20